ಸುರತ್ಕಲ್‌: ಯುವಕ ನಿಗೂಢವಾಗಿ ನೀರುಪಾಲು, ಕೊಲೆ ಶಂಕೆ

Thursday, October 5th, 2017
surathkal

ಮಂಗಳೂರು: ಇಲ್ಲಿನ ಸೂರಿಂಜೆಯ ಶಿಬರೂರು ದೇವಸ್ಥಾನ ಸಮೀಪ ನಂದಿನಿ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕ ನಿಗೂಢವಾಗಿ ಸಾವನ್ನಪ್ಪಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಮಂಗಳವಾರ ಸಂಜೆ ಕೃಷ್ಣಾಪುರದ ಮಕ್ಸೂದ್‌ ಎಂಬಾತ ನಾಲ್ವರು ಸ್ನೇಹಿತರೊಂದಿಗೆ ಈಜಲೆಂದು ತೆರಳಿದ್ದು ರಾತ್ರಿಯಾದರೂ ಮನೆಗೆ ವಾಪಸಾಗಿರಲ್ಲಿಲ್ಲ, ಹೆದರಿದ ಪೋಷಕರು ಸ್ನೇಹಿತರ ಬಳಿ ವಿಚಾರಿಸಿದ್ದಾರೆ. ಅವರು ಸರಿಯಾಗಿ ಉತ್ತರ ನೀಡಿರಲಿಲ್ಲ. ಸುರತ್ಕಲ್‌ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಬುಧವಾರ ಬೆಳಗ್ಗೆ ಮಕ್ಸೂದ್‌ ಜೊತೆ ಈಜಲು ತೆರಳಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನದಿಯ […]

ಚಾರ್ವಾಕ ಗ್ರಾಮದ ಗುಜ್ಜರ್ಮೆ ಬಳಿಯ ಕುಮಾರಧಾರ ನದಿಯಲ್ಲಿ ತೆಪ್ಪ ದುರಂತ ಸಂಭವಿಸಿ ಇಬ್ಬರು ನೀರುಪಾಲು

Friday, December 16th, 2016
Kumaradhara

ಪುತ್ತೂರು: ಬುಡೇರಿಯ ದೈವಸ್ಥಾನದ ನೇಮಕ್ಕೆ ನದಿ ದಾಟುತ್ತಿದ್ದಾಗ ಚಾರ್ವಾಕ ಗ್ರಾಮದ ಗುಜ್ಜರ್ಮೆ ಬಳಿಯ ಕುಮಾರಧಾರ ನದಿಯಲ್ಲಿ ತೆಪ್ಪ ದುರಂತ ಸಂಭವಿಸಿ ಇಬ್ಬರು ನೀರುಪಾಲಾಗಿದ್ದಾರೆ. ಕಿಂಞಂಣ್ಣ ಗೌಡ(60) ಗಣೇಶ್ (63) ನೀರು ಪಾಲಾದವರು ಎನ್ನಲಾಗಿದೆ. ನೀರುಪಾಲಾದವರಿಗಾಗಿ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಯುತ್ತಿದೆ.

ಗಣಪತಿ ವಿಸರ್ಜನೆ ವೇಳೆ ತುಂಗಾ ನದಿಯಲ್ಲಿ ತೆಪ್ಪ ಮಗುಚಿ 13 ಮಂದಿ ನೀರುಪಾಲು

Thursday, September 8th, 2016
ganesha-idol

ಶಿವಮೊಗ್ಗ: ಗಣಪತಿ ವಿಸರ್ಜನೆ ವೇಳೆ ತುಂಗಾ ನದಿಯಲ್ಲಿ ತೆಪ್ಪ ಮಗುಚಿ 13 ಮಂದಿ ನೀರುಪಾಲಾದ ದಾರುಣ ಘಟನೆ ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಗಣಪತಿ ವಿಸರ್ಜಿಸಲು ತೆಪ್ಪದಲ್ಲಿ ಸುಮಾರು 33 ಮಂದಿ ಹೋಗಿದ್ದು, 13 ಮಂದಿ ನದಿಯಲ್ಲಿ ಮುಳುಗಿದ್ದರೆ, ಉಳಿದ 20 ಮಂದಿ ಈಜಿ ದಡ ಸೇರಿದ್ದಾರೆ. ರಾತ್ರಿ 7 ಗಂಟೆಯವರೆಗೆ 7 ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ ಶವಗಳ ಪತ್ತೆಗೆ ಗುರುವಾರ ಬೆಳಗ್ಗೆ ಕಾರ್ಯಾಚರಣೆ ನಡೆಯಲಿದೆ. ಮೃತಪಟ್ಟವರೆಲ್ಲರೂ ಹಾಡೋನಹಳ್ಳಿ ಗ್ರಾಮದವರೇ ಆಗಿದ್ದು, […]

ಈಜಲು ಹೋದ ಯುವಕರಿಬ್ಬರು ನೀರುಪಾಲು

Wednesday, July 6th, 2016
maravoor-child

ಮಂಗಳೂರು: ಈಜಲು ಹೋದ ಯುವಕರಿಬ್ಬರು ನೀರುಪಾಲಾದ ಘಟನೆ ಮರವೂರು ಸಮೀಪ ನದಿಯಲ್ಲಿ ನಡೆದಿದೆ. ಮೃತರನ್ನು ಅವಿನಾಶ್ (26) ಮತ್ತು ಜೇಸನ್ (24) ಎಂದು ಗುರುತಿಸಲಾಗಿದೆ. ಮರವೂರು ಸೇತುವೆಯ ಕಿಂಡಿ ಅಣೆಕಟ್ಟಿಗೆ ಈಜಲು ಇಳಿದ ಇವರಿಬ್ಬರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಮೃತರ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಮೃತದೇಹಕ್ಕಾಗಿ ಶೋಧ ನಡೆದಿದೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಕೆರೆಗೆ ಬಿದ್ದು ಯುವಕ ಮೃತ್ಯು-ಸಹೋದರ ಪಾರು

Friday, January 22nd, 2016
Mulleria Accident

ಮುಳ್ಳೇರಿಯಾ: ಕಾರೊಂದು ಕೆರೆಗೆ ಬಿದ್ದು ಸಹೋದರರ ಪೈಕಿ ಓರ್ವ ಮೃತಪಟ್ಟು ಮತ್ತೋರ್ವ ಅದೃಷ್ಟವಶಾತ್ ಪಾರಾದ ಘಟನೆ ಶುಕ್ರವಾರ ಬೆಳಿಗ್ಗೆ ಬೆಳ್ಳೂರು ಸಮೀಪದ ಬಜ ಎಂಬಲ್ಲಿ ನಡೆದಿದೆ. ಬಜ ಅಮರನಾಥ ರೈ ಯವರ ಪುತ್ರ ಸುಪ್ರೀತ್ ರೈ (33)ಮೃತಪಟ್ಟ ದುರ್ದೈವಿ.ಶುಕ್ರವಾರ ಬೆಳಿಗ್ಗೆ ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಸಹೋದರ ಗುರು ಕಿರಣ ರೈ ಯನ್ನು ಕುಳ್ಳಿರಿಸಿ ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಾಯಿಸುವಷ್ಟರಲ್ಲಿ ಅಂಗಳದಿಂದ 10ಮೀಟರ್ ದೂರದ ಕೆರೆಗೆ ಆಕಸ್ಮಿಕವಾಗಿ ಬಿದ್ದು ಅಪಘಾತ ನಡೆಯಿತು. ನೀರಲ್ಲಿ ಮುಳುಗಿದ ಕಾರನ್ನು ತಕ್ಷಣ ಸ್ಥಳೀಯರು […]