ಪವರ್ ಟಿವಿ ಕ್ಯಾಮರಾಮನ್ ಸುನೀಲ್ ನಿಧನ

Sunday, October 4th, 2020
Sunil Pancham

ಹುಬ್ಬಳ್ಳಿ:  ಹುಬ್ಬಳ್ಳಿ-ಕಾರವಾರ ರಸ್ತೆಯ ಚಾಟ್ನಿ ಕಾಂಪ್ಲೆಕ್ಸ್ ಬಳಿ ಅಕ್ಟೋಬರ್ 01 ರಂದು ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪವರ್ ಟಿವಿ ಕ್ಯಾಮರಾಮನ್ ಸುನೀಲ್ ಪಾಚಂಗೆ (28) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಟಿ.ವಿ.9 ಸುದ್ದಿ ಸಂಸ್ಥೆಯಲ್ಲಿ ‌ಸಹಾಯಕರಾಗಿ ಕೆಲಸ ನಿರ್ವಹಿಸಿದ್ದ ಸುನೀಲ್, ನಂತರ ಪವರ್ ಟಿ.ವಿ ಯಲ್ಲಿ ಕ್ಯಾಮರಾಮನ್ ಆಗಿ ಕೆಲಸಕ್ಕೆ ಸೇರಿದ್ದರು. ಹುಬ್ಬಳ್ಳಿಯ ಸಿದ್ಧಾರೂಡ ಮಠದ ಇಂದ್ರಪ್ರಸ್ಥ ನಗರದಲ್ಲಿ ವಾಸವಿದ್ದ ಅವರು ತಾಯಿ ಉಮಾ ಗೋಪಾಲ್ ಪಾಚಂಗೆ, ಸಹೋದರ ವಿನಾಯಕ ಪಾಚಂಗೆ ಅವರನ್ನು ಅಗಲಿದ್ದಾರೆ. […]

ಪವರ್ ಟಿವಿಯ ವರದಿಗಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸನಾತನ ಸಂಸ್ಥೆ ಒತ್ತಾಯ

Tuesday, January 28th, 2020
sanatana

ಮಂಗಳೂರು : ದಿನಾಂಕ 23.1.2020 ರಂದು ಪವರ ಟಿವಿಯು “ಬಾಂಬ್ ಶರಣಗತಿ” ಕನ್ನಡ ವಾರ್ತಾ ವಾಹಿನಿಯ ಕಾರ್ಯಕ್ರಮದ ವರದಿಯಲ್ಲಿ ಮಂಗಳೂರು ವಿಮಾನನಿಲ್ದಾಣ ದಲ್ಲಿ ಸಜೀವ ಬಾಂಬ್ ಇಟ್ಟ ಆರೋಪಿ ಆದಿತ್ಯ ರಾವ್ ಇವನಿಗೆ ಸನಾತ‌ನ ಸಂಸ್ಥೆಯ ಲಿಂಕ್ ಇದೆ. ಮಂಗಳೂರು ಬಾಂಬ್ ಪ್ರಕರಣದ ಹಿಂದೆ ಸನಾತನ ಸಂಸ್ಥೆಯ ಕೈವಾಡ ಇರುವ ಬಗ್ಗೆ ಪವರ ಟಿವಿ ಬ್ರೇಕಿಂಗ್ ವರದಿಯನ್ನು ನಿರಂತರವಾಗಿ ಪ್ರಸಾರ ಮಾಡಿತ್ತು. ಇದು ಶುದ್ದ ಸುಳ್ಳಾಗಿದೆ. ಆದಿತ್ಯರಾವ ಮತ್ತು‌ ಸನಾತನ ಸಂಸ್ಥೆಗೆ ಯಾವುದೇ ಸಂಬಂದ ಇಲ್ಲ. ಸನಾತನ […]