ಮೈಸೂರು ದಸರಾ ಕ್ರೀಡಾಕೂಟ ಉದ್ಘಾಟಿಸಿದ : ಪಿ.ವಿ.ಸಿಂಧು

Wednesday, October 2nd, 2019
PV-Sindhu

ಮೈಸೂರು : ಕ್ರೀಡಾಪಟುಗಳು ಪಿ.ವಿ.ಸಿಂಧು ಅವರನ್ನು ಮಾದರಿಯಾಗಿಸಿಕೊಂಡು ಪರಿಶ್ರಮದಿಂದ ಯಶಸ್ಸು ಸಾಧಿಸಿ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಶುಭ ಹಾರೈಸಿದರು. ದಸರಾ ಮಹೋತ್ಸವದ ಅಂಗವಾಗಿ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ದಸರಾ ಕ್ರೀಡಾಕೂಟ ಹಾಗೂ ಮುಖ್ಯಮಂತ್ರಿ ಕಪ್‌ – 2019 ಉದ್ಘಾಟಿಸಿ ಅವರು ಮಾತನಾಡಿದರು. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಕ್ರೀಡಾಪಟು ಪಿ.ವಿ.ಸಿಂಧು ಮಾತನಾಡಿ, ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಎಲ್ಲ ಕ್ರೀಡಾಪಟುಗಳೂ ಕಠಿಣ ಪರಿಶ್ರಮದಲ್ಲಿ ತೊಡಗುವ ಮೂಲಕ ತಮ್ಮ ಗುರಿ ತಲುಪಿ ಎಂದು ಸಲಹೆ ನೀಡಿದರು. […]

ಪಿಬಿಎಲ್ ಬ್ಯಾಡ್ಮಿಂಟನ್​ ಲೀಗ್​: ಭಾರಿ ಮೊತ್ತಕ್ಕೆ ಸೈನಾ ನೆಹ್ವಾಲ್​, ಪಿ.ವಿ. ಸಿಂಧು

Tuesday, October 9th, 2018
badmitton

ನವದೆಹಲಿ:ಭಾರತದ ಬ್ಯಾಡ್ಮಿಂಟನ್ ಸ್ಟಾರ್ಗಳಾದ ಸೈನಾ ನೆಹ್ವಾಲ್, ಸಿಂಧೂ ಹಾಗೂ ಕಿಡಂಬಿ ಶ್ರೀಕಾಂತ್ ಪ್ರಸಕ್ತ ವರ್ಷದ ಪಿಬಿಎಲ್ನಲ್ಲಿ ಭಾರಿ ಮೊತ್ತಕ್ಕೆ ಹರಾಜಾಗಿದ್ದಾರೆ. ಗರಿಷ್ಠ ಬೆಲೆ ಪಡೆದ ದೇಶಿ ಹಾಗೂ ವಿದೇಶಿ ಪ್ಲೇಯರ್ಸ್: ಒಟ್ಟು 9 ತಂಡಗಳು ಭಾಗವಹಿಸಿದ್ದ 2018ರ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಹರಾಜಿನಲ್ಲಿ (ಪಿಬಿಎಲ್‌) ಸೈನಾ ನೆಹ್ವಾಲ್‌ ನಾರ್ತ್‌ ಈಸ್ಟರ್ನ್ ವಾರಿಯರ್ ತಂಡಕ್ಕೂ ಪಿ.ವಿ. ಸಿಂಧು ಹೈದರಾಬಾದ್‌ ಹಂಟರ್ ತಂಡಕ್ಕೂ, ಶ್ರೀಕಾಂತ್‌ ಬೆಂಗಳೂರು ರ‍್ಯಾಪ್ಟರ್ ತಂಡಕ್ಕೆ ಮತ್ತೊಬ್ಬ ಯುವ ಆಟಗಾರ ಪ್ರಣಯ್‌ ಅವರನ್ನು ಡೆಲ್ಲಿ ಡ್ಯಾಶರ್ ಖರೀದಿಸಿತು. […]

ತಾಯ್ನಾಡಿಗೆ ಆಗಮಿಸಿದ ಪಿ.ವಿ. ಸಿಂಧು ಅವರಿಗೆ ಹೈದರಾಬಾದ್‌ನಲ್ಲಿ ಅದ್ದೂರಿ ಸ್ವಾಗತ

Monday, August 22nd, 2016
Hyderabad-reception

ಹೈದರಾಬಾದ್‌: ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದು, ಸೋಮವಾರ ತಾಯ್ನಾಡಿಗೆ ಆಗಮಿಸಿರುವ ಪಿ.ವಿ. ಸಿಂಧು ಅವರನ್ನು ಹೈದರಾಬಾದ್‌ನಲ್ಲಿ ಸಂಭ್ರಮದಿಂದ ಸ್ವಾಗತಕೋರಿ, ಮೆರವಣಿಗೆ ನಡೆಸಲಾಯಿತು. ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬೆಳಿಗ್ಗೆ ಬಂದಿಳಿದ ಸಿಂಧು ಹಾಗೂ ಕೋಚ್ ಪುಲ್ಲೇಲ ಗೋಪಿಚಂದ್ ಅವರನ್ನು ಸ್ವಾಗತಿಸಿ, ಹೂವುಗಳಿಂದ ಅಲಂಕರಿಸಿರುವ ತೆರೆದ ವಾಹನದಲ್ಲಿ ವಿಮಾನನಿಲ್ದಾಣದಿಂದ ಗಚ್ಚಿಬೌಲಿ ಮೈದಾನದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ತಂದೆ ಪಿ.ವಿ. ರಮಣ ಹಾಗೂ ಪಿ. ವಿಜಯಾ ಮತ್ತು ತೆಲಂಗಾಣ ಸರ್ಕಾರದ ಸಚಿವರು ಸೇರಿದಂತೆ ಉಪ […]