ಕಾರ್ಮಿಕ ಸಾವು : ಸಂಬಂಧಿಕರ ಬಗ್ಗೆ ಮಾಹಿತಿ ಒದಗಿಸಲು ಮನವಿ

Thursday, December 5th, 2019
prabhu

ಮಡಿಕೇರಿ :  ಬಿರುನಾಣಿ ಗ್ರಾಮದ ಅಣ್ಣಳಮಾಡ ಮುತ್ತಪ್ಪ ಎಂಬವರ ಲೈನ್ ಮನೆಯಲ್ಲಿ ವಾಸವಿದ್ದ ಕೂಲಿ ಕಾರ್ಮಿಕ ಪ್ರಭು (45) ಎಂಬುವವರು ಮೃತಪಟ್ಟಿದ್ದು, ಮೃತರ ಸಂಬಂಧಿಕರು ಯಾರು  ಈ ವರೆಗೆ ಲಭ್ಯವಾಗಿಲ್ಲ. ಶವದ ಕತ್ತಿನ ಭಾಗ ತಲೆಯ ಬಲಭಾಗ, ಬಲಪಕ್ಕೆ ಎಲುಬಿನ ಭಾಗ, ಬಲ ಎದೆಯ ಬಳಿ, ಬಲ ಮೊಣಕಾಲು ಬಿಳಿ ಗಾಯವಾಗಿರುವುದು  ಕಂಡು ಬಂದಿದೆ. ಮೃತರ ವಾರಸುದಾರರಿದ್ದಲ್ಲಿ ಶ್ರೀಮಂಗಲ ಪೊಲೀಸ್ ಠಾಣೆಯ ಆರಕ್ಷಕ ಉಪನೀರಿಕ್ಷಕರನ್ನು ಸಂಪರ್ಕಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.