ಚರ್ಚ್‌ಗಳಲ್ಲಿ ಸರಳವಾಗಿ ಕ್ರಿಸ್ಮಸ್ ಆಚರಣೆ, ವಿದ್ಯುತ್‌ ದೀಪಗಳಿಂದ ಕಂಗೊಳಿಸಿದ ಚರ್ಚುಗಳು

Saturday, December 25th, 2021
Kanthi Church

ಮಂಗಳೂರು : ಸರಕಾರದ ಮಾರ್ಗಸೂಚಿಯಂತೆ ಚರ್ಚ್‌ಗಳಲ್ಲಿ ಸರಳವಾಗಿ ಕ್ರಿಸ್ಮಸ್ ಕಾರ್ಯಕ್ರಮವನ್ನು ಕ್ರೈಸ್ತ ಧರ್ಮೀಯರು ಆಚರಿಸಿದರು. ಮಂಗಳೂರು ನಗರದ ಚರ್ಚ್‌ಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಚರ್ಚ್‌ಗಳನ್ನು ಹಬ್ಬದ ಸಂಭ್ರಮದಲ್ಲಿ ವಿದ್ಯುತ್‌ ದೀಪಗಳಿಂದ ಕಂಗೊಳಿಸಿದೆ. ಚರ್ಚ್ ಆವರಣ, ಕ್ರೈಸ್ತರ ಮನೆಗಳು, ಪ್ರಮುಖ ಉದ್ಯಮ, ಅಂಗಡಿ, ಹೋಟೆಲ್‌ಗಳ ಎದುರು ಆಕರ್ಷಕ ಕ್ರಿಬ್‌ (ಗೋದಲಿ)ಗಳು, ಕ್ರಿಸ್ಮಸ್‌ ಟ್ರೀ ಮತ್ತು ಅಲಂಕೃತ ನಕ್ಷತ್ರ ಗಮನ ಸೆಳೆಯುತ್ತಿತ್ತು. ಶುಕ್ರವಾರ ರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಬಲಿ ಪೂಜೆಗಳೊಂದಿಗೆ ಸಂಭ್ರಮದ ಕ್ರಿಸ್ಮಸ್‌ ಆಚರಣೆ […]

ಗುಡ್‌ಪ್ರೈಡೆ ಪ್ರಯುಕ್ತ ಮಂಗಳೂರು ಬಿಷಪ್‌ರವರ ವೆನಲಾಕ್ ಅಸ್ಪತ್ರೆಗೆ ಭೇಟಿ

Friday, April 14th, 2017
goodfriday

ಮಂಗಳೂರು  : ಸಂತ ಕ್ರಿಸ್ಟೋಪರ್ ಎಸೇಸಿಯೇಷನ್ ಮಂಗಳೂರು ಇವರ 50ನೇ ವರ್ಷದ ವಾರ್ಷಿಕ ಅಚರಣೆಯ ಪ್ರಯುಕ್ತ ಜಿಲ್ಲಾ ವೆನಲಾಕ್ ಆಸ್ಪತ್ರೆಯ ಮಕ್ಕಳ ವಾರ್ಡಿಗೆ ಗುಡ್‌ಪ್ರೈಡೆಯಂದು ಭೇಟಿ ನೀಡಿ ಅಲ್ಲಿಯ ವಾರ್ಡಿಗೆ 2 ಗಾಲಿ ಕುರ್ಚಿಗಳು ದಾನವಾಗಿ ನೀಡಲಾಯಿತು. ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಂಗಳೂರು ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಅತೀ ವಂದನೀಯ ಎಲೋಷಿಯಸ್ ಪಾವ್ಲ್ ಡಿಸೋಜರವರು ಮಾತಾನಾಡಿ ನಾವು ಇಂದು ಯೇಸು ಕ್ರಿಸ್ತರು ಮರಣ ಹೊಂದಿದ ದಿನವಾಗಿದ್ದು  ವಿಶೇಷ ಪ್ರಾರ್ಥನೆ, ಉಪವಾಸದಿಂದ ಭಕ್ತಿಯಿಂದ ಆಚರಿಸುವ ದಿನ. ಪರರಿಗೋಸ್ಕರ ತಮ್ಮ […]

ಮಂಗಳೂರು ಬಿಷಪ್ ರನ್ನು ಬೇಟಿ ಮಾಡಿದ ಕಾಸರಗೋಡು ಲೋಕಸಭಾ ಅಭ್ಯರ್ಥಿ ಸಿದ್ದೀಕ್

Monday, April 7th, 2014
Siddiq Kasargod

ಮಂಗಳೂರು : ಕಾಸರಗೋಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಸಿದ್ದೀಕ್ ರವರು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಗುರು ಬಿಷಪ್ ಡಾ. ಅಲೋಸಿಯಸ್ ಪೌಲ್ ಡಿ.ಸೋಜರವರನ್ನು ಮಂಗಳೂರು ಬಿಷಪ್ ಹೌಸ್ನಲ್ಲಿ ಭೇಟಿಯಾಗಿ ಅವರ ಆಶೀರ್ವಚನ ಪಡೆದರು. ಅವರೊಂದಿಗೆ ಕೇರಳ ಸರಕಾರದ ಗ್ರಾಮೀಣವೃದ್ಧಿ, ಸಂಸ್ಕೃತಿ, ಯೋಜನೆ ಮತ್ತು ಎನ್.ಆರ್.ಐ. ಸಚಿವರಾದ ಶ್ರೀ ಕೆ.ಸಿ.ಜೋಸೆಫ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಜೆ.ಆರ್. ಲೋಬೊ, ಕಾಸರಗೋಡು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀಧರನ್ ಮೊದಲಾದವರು ಉಪಸ್ಥಿತರಿದದರು.