ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೆಜ್ಜೇನು ದಾಳಿಯಿಂದ ಆರು ಮಹಿಳೆಯರು ಗಂಭೀರ

Saturday, December 19th, 2020
honey bee

ಬ್ರಹ್ಮಾವರ : ಕೋಟ ಗ್ರಾಮ ಪಂಚಾಯತ್ ಮಿತಿಯೊಳಗಿನ ಕಾಸನಗುಂದು ಎಂಬಲ್ಲಿ  ಹೆಜ್ಜೇನು ದಾಳಿಯಿಂದಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರು ಮಹಿಳೆಯರು ಗಂಭೀರ ಗಾಯಗೊಂಡು ತೀವ್ರ  ಗಾಯಗೊಂಡ ಘಟನೆ  ಡಿಸೆಂಬರ್ 18 ಶುಕ್ರವಾರದಂದು ನಡೆದಿದೆ. ಶುಕ್ರವಾರ ಸಂಜೆ ಮಹಿಳೆಯರು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಹೆಜ್ಜೇನುಗಳು ದಾಳಿ ನಡೆಸಿದೆ. ಗಾಯಗೊಂಡ ಐವರನ್ನು ಚಿಕಿತ್ಸೆಗಾಗಿ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರು ಮಹಿಳೆಯರ ಪೈಕಿ ಓರ್ವರಾದ ಪ್ರೇಮಾ ಯಾನೆ ಬುಡ್ಡು ತೀವ್ರ ದಾಳಿಗೆ ಒಳಗಾಗಿದ್ದರಿಂದ, ಆಕೆಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಬೆಂಗಳೂರಿನ ಮಹಿಳೆ ನಾಪತ್ತೆ

Friday, February 23rd, 2018
bangaluru

ಉಡುಪಿ: ಬೆಂಗಳೂರಿನ ಹೇಸರಘಟ್ಟ ಸಿಲ್ಬೇಪುರದ ನಿವಾಸಿ ಭವಾನಿ (37) ಎಂಬವರು ಫೆ.16ರಂದು ಅವರ ಪತಿ ಎ.ಪಿ.ರಾಜ್ ಜೊತೆ ಚಿಕಿತ್ಸೆ ಗಾಗಿ ಮಣಿಪಾಲ ಆಸ್ಪತ್ರೆಗೆ ಬಂದವರು ಫೆ.17 ಸಂಜೆ 6:30ರಿಂದ ಕಾಣೆಯಾಗಿದ್ದಾರೆ. ಗೋಧಿ ಮೈಬಣ್ಣ, ದುಂಡು ಮುಖ, ದೃಢಕಾಯ ಮೈಕಟ್ಟು, 5.5 ಅಡಿ ಎತ್ತರ ಹೊಂದಿರುವ ಇವರು ಕೆಂಪು ಬಣ್ಣದ ಚೂಡಿದಾರ ಧರಿಸಿದ್ದಾರೆ. ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಇವರನ್ನು ಕಂಡಲ್ಲಿ ಮಣಿಪಾಲ ಠಾಣೆ: 0820-2570328 ಅಥವಾ ಪೊಲೀಸ್ ನಿರೀಕ್ಷಕರು ಮಣಿಪಾಲ ಠಾಣೆ: 9480805448 ಅಥವಾ ಪೊಲೀಸ್ ಉಪ ನಿರೀಕ್ಷಕರು ಮಣಿಪಾಲ […]

ಮೃತ ಮಗನ ಅಂಗಾಂಗಳನ್ನು ದಾನ ಮಾಡಿದ ಹಿಮಾಂಶು ಪೋಷಕರು

Tuesday, October 11th, 2016
Himanshu

ಮಣಿಪಾಲ: ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಅಂಗಾಗಗಳನ್ನು ‘ಗ್ರೀನ್ ಕಾರಿಡಾರ್’ ನೆರವಿನಿಂದ ಸೋಮವಾರ ಬೆ.7ಕ್ಕೆ ಬೆಂಗಳೂರಿನ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಇಲ್ಲಿಯ ಬೈಂದೂರಿನ ನಿವಾಸಿ ಹಿಮಾಂಶು ಅವರು ಮಿದುಳು ನಿಷ್ಕ್ರಿಯಗೊಂಡು (ಬ್ರೈನ್ ಡೆಡ್) ಭಾನುವಾರ(ಅ.9)ದಂದು ಮೃತಪಟ್ಟಿದ್ದರು. ವ್ಯಕ್ತಿಯ ಯಕೃತ್, ಕಾರ್ನಿಯಾ ಮತ್ತು ಮೂತ್ರಪಿಂಡಗಳನ್ನು ದಾನ ಮಾಡಲು ಅವರ ತಂದೆ ತಾಯಿ ನಿರ್ಧರಿಸಿದ ಹಿನ್ನೆಲೆಯಲ್ಲಿ ಅವರ ಅಂಗಾಂಗಳನ್ನು ದಾನ ಮಾಡಲಾಗಿದೆ. ಗ್ರೀನ್ ಕಾರಿಡಾರ್ ಸಂಸ್ಥೆ ಸಹಯೋಗದಲ್ಲಿ ಮಂಗಳೂರಿನ ಮಣಿಪಾಲ ಆಸ್ಪತ್ರೆಯಿಂದ ಝೀರೋ ಟ್ರಾಫಿಕ್ ನಲ್ಲಿ ಬಜ್ಪೆ ವಿಮಾನ ನಿಲ್ದಾಣಕ್ಕೆ […]

ಆಟೋ ರಿಕ್ಷಾ ಹಾಗೂ ಮಿನಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಹೋದರರಿಬ್ಬರ ಸಾವು

Tuesday, October 4th, 2016
accident

ಕಾರ್ಕಳ: ಆಟೋ ರಿಕ್ಷಾ ಹಾಗೂ ಮಿನಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಹೋದರರಿಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಹೆಬ್ರಿಯಲ್ಲಿ ನಡೆದಿದೆ. ಶಿವಪುರ ಕಾಚಿಲ ನಿವಾಸಿ, ರಿಕ್ಷಾ ಚಾಲಕ ಗುರುಪ್ರಸಾದ್ ಹಾಗೂ ವಸಂತ್ ದುರ್ಘಟನೆಯಲ್ಲಿ ಮೃತಪಟ್ಟ ಸಹೋದರರು. ಶಿವಪುರದಿಂದ ಹೆಬ್ರಿ ಕಡೆಗೆ ತೆರಳುತ್ತಿದ್ದ ರಿಕ್ಷಾ, ಮಿನಿ ಬಸ್ಸನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಗುರುಪ್ರಸಾದ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಗುರುಪ್ರಸಾದ್ ಅಣ್ಣ ವಸಂತ್‌ಗೂ ಗಂಭೀರ […]