ದೇವರ ಸೇವೆಯೊಂದಿಗೆ ಸಮಾಜ ಸೇವೆ ಮಾಡುವ ಸೌಭಾಗ್ಯ ನಮಗೊದಗಿದೆ – ಶ್ರೀನಿವಾಸ ಸಫಲ್ಯ

Sunday, December 27th, 2020
Shani Pooja

ಮುಂಬಯಿ : ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಮಾಡಲು ಭಾಗ್ಯ ಬೇಕು. ಈ ಒಂದು ಅವಕಾಶದಿಂದ ನಾವು ದೇವರ ಸೇವೆಯೊಂದಿಗೆ ಸಮಾಜ ಸೇವೆ ಮಾಡುವಂತಾಗಿದೆ. ಈ ಸೌಭಾಗ್ಯವು ಈ ಪೂಜಾ ಸಮಿತಿಯ ಮೂಲಕ ನಮಗೆ ದೊರಕಿದೆ. ನಾವು ಮಾಡುತ್ತಿರುವ ಎಲ್ಲಾ ಸೇವೆಗಳು ದೇವರಿಗೆ ಸಮರ್ಪಿತವಾಗಿರಬೇಕು. ಒಗ್ಗಟ್ಟಿನಿಂದ ಎಲ್ಲಾ ಕೆಲಸಗಳನ್ನು ಮಾಡಬೇಕಾಗಿದೆ. ಮುಂದಿನ ವರ್ಷ ಚಾರಿಟೇಬಲ್ ಟ್ರಷ್ಟಗೆ 25ನೇ ವರ್ಷ. ಜನವರಿ 4 ರಿಂದ 6 ರ ತನಕ ಶನಿದೇವರ ಪುನರ್ಪ್ರತಿಷ್ಥೆ ಹಾಗೂ ವಾರ್ಷಿಕ ಪೂಜೆ ನಡೆಯಲಿದೆ. ಮುಂದಿನ ವರ್ಷಗಳಲ್ಲಿ […]

ನಿಧನ : ಕಲ್ಯಾಣಿ ಹಿರಿಯಣ್ಣ ಶೆಟ್ಟಿ ಮಲಾಡ್

Sunday, May 3rd, 2020
Kalyani-shetty

ಮುಂಬಯಿ : ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ದಿ. ಹಿರಿಯಣ್ಣ ಶೆಟ್ಟಿ ಯವರ ಧರ್ಮಪತ್ನಿ ಕುತ್ಯಾರ್ ಉಪ್ಪರಿಗೆ ಮನೆ ಕಲ್ಯಾಣಿ ಹಿರಿಯಣ್ಣ ಶೆಟ್ಟಿ (76) ಇವರು ಮೇ. 2 ರಂದು ಹೃದಯಘಾತ ದಿಂದ ಮಲಾಡ್ ಪಶ್ಚಿಮ ದ ಸ್ವಗೃಹದಲ್ಲಿ ನಿಧನ ಹೊಂದಿದರು. ಬೊಂಬೆ ಬಂಟ್ಸ್ ಅಸೋಷಿಯೇಶನಿನ ಉಪಾಧ್ಯಕ್ಷರಾದ ಸಿಎ ಸುರೇಂದ್ರ ಕೆ ಶೆಟ್ಟಿ ಯವರ ಅತ್ತೆ ಕಲ್ಯಾಣಿ ಶೆಟ್ಟಿ ಯವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಸಂಮಂಧಿಕರನ್ನು ಅಗಲಿದ್ದಾರೆ.