ವ್ಯಕ್ತಿಯನ್ನು ಅಪಹರಿಸಿ ಚಿನ್ನ ದರೋಡೆ, 11 ಮಂದಿ ಅಂತಾರಾಜ್ಯ ದರೋಡೆಕೋರರ ಬಂಧನ

Friday, May 28th, 2021
Moodabidre Dacoity

ಮಂಗಳೂರು :  ಮಂಗಳೂರು ಸಿಸಿಬಿ ಮತ್ತು ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ಅಪಹರಿಸಿ ಚಿನ್ನ  ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ 11 ಮಂದಿ ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ. ಜೋಕಟ್ಟೆ ತೋಕೂರು ನಿವಾಸಿಗಳಾದ ಅಬ್ದುಲ್ ಸಲಾಂ ಯಾನೆ ಪಟೌಡಿ ಸಲಾಂ (34), ಮುಹಮ್ಮದ್ ಶಾರೂಕ್ (26), ಬೆಂಗಳೂರು ಜೆಎಚ್‌ಬಿಸಿಎಸ್ ಲೇಔಟ್‌ನ ಸಯ್ಯದ್ ಹೈದರಲಿ (29), ಬೆಂಗಳೂರು ಜೆಪಿ ನಗರದ ಆಸಿಫ್ ಅಲಿ (28), ಮುಂಬೈನವರಾದ ಶೇಖ್ ಸಾಜಿದ್ ಹುಸೇನ್ (49), ಅಬ್ದುಲ್ಲಾ ಶೇಖ್ (22), ಶಾಬಾಸ್ […]

ಸಹೋದರನ ಮನೆಯಲ್ಲಿದ್ದ ವಿವಾಹಿತೆಯೋರ್ವಳು ನಾಪತ್ತೆ

Monday, February 6th, 2017
Shanthi-priya-D'Souza

ಮಂಗಳೂರು: ತನ್ನ ಸಹೋದರನ ಮನೆಯಲ್ಲಿದ್ದ ವಿವಾಹಿತೆಯೋರ್ವಳು ಪುಚ್ಚಮೊಗರಿನಿಂದ ಕಾಣೆಯಾದ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪುಚ್ಚಮೊಗ್ರು ಗ್ರಾಮದ ರೇಂಜರ್ ಕೋಡಿ ಎಂಬಲ್ಲಿಯ ಅರುಣ್ ಡಿಸೋಜಾ ಎಂಬವರ ಸಹೋದರಿ ಶಾಂತಿ ಪ್ರಿಯಾ ಡಿಸೋಜಾ (28) ನಾಪತ್ತೆ ಆಗಿರುವವಳು. ಸಹೋದರನ ಮನೆಯಲ್ಲಿದ್ದ ಇವರು ಜ. 26ರಂದು ಕಾಣೆಯಾಗಿದ್ದು, ಅಂಗಡಿಗೆಂದು ತೆರಳಿದ್ದ ಅರುಣ್ ಅವರು ವಾಪಾಸು ಬಂದಾಗ ಮನೆಯಲ್ಲಿರಲಿಲ್ಲ. ಶಾಂತಿ ಪ್ರಿಯಾ ಡಿಸೋಜಾ ಅವರನ್ನು 7 ತಿಂಗಳ ಹಿಂದೆ ಸಾಣೂರು ಅಲ್ವಿನ್ ಎಂಬವರಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಕಾಣೆಯಾಗಿರುವ […]

ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿ ನಾಪತ್ತೆ

Tuesday, December 20th, 2016
Nandan Gouda

ಮಂಗಳೂರು: ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿಯೊಬ್ಬ ಸಂಜೆ ಮರಳಿ ಹಾಸ್ಟೆಲ್‌ಗೆ ವಾಪಾಸ್ಸಾಗದೆ ನಾಪತ್ತೆಯಾಗಿದ್ದಾನೆ. ಬೆಂಗಳೂರಿನ ಕದರೇಗೌಡ ಎಂಬುವರ ಮಗ ನಂದನ್ ಗೌಡ (17) ನಾಪತ್ತೆಯಾದ ವಿದ್ಯಾರ್ಥಿ. ಎಂದಿನಂತೆ ಶುಕ್ರವಾರ ಬೆಳಗ್ಗೆ ಈತ ಇಲ್ಲಿನ ಪುತ್ತಿಗೆಯ ನಂದಿನಿ ಹಾಸ್ಟೆಲ್‌‌ನಿಂದ ಕಾಲೇಜಿಗೆ ತೆರಳಿದ್ದ. ಮಧ್ಯಾಹ್ನ ವಾಪಸ್‌‌ ಹಾಸ್ಟೆಲ್‌‌ಗೆ ಬರದೆ ನಾಪತ್ತೆಯಾಗಿದ್ದಾನೆ. ಮರುದಿನ ಈತ ತನ್ನ ತಂದೆಯ ಮೊಬೈಲ್‌ಗೆ ಕರೆ ಮಾಡಿದ್ದರೂ ಏನು ವಿಷಯ ತಿಳಿಸಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.