ಹೊಸ ಮೊಬೈಲ್ ಫೋನ್ ಅವಾಂತರ, ಮಂಜೇಶ್ವರದ ಒಂದೇ ಮನೆಯಿಂದ ಮೂವರು ಯುವತಿಯರು ನಾಪತ್ತೆ

Thursday, August 20th, 2020
missing

ಮಂಗಳೂರು: ಮಂಜೇಶ್ವರ ಸಮೀಪದ ಮೀಯಪದವು ಎಂಬಲ್ಲಿ ಒಂದೇ ಮನೆಯಿಂದ ಮೂವರು ಯುವತಿಯರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರು 16, 17 ಹಾಗೂ 21 ವಯಸ್ಸಿನ ಸೋದರಿಯಾರಾಗಿದ್ದು ಮನೆಯವರು ಮತ್ತು ಅಕ್ಕ ಪಕ್ಕದವರಲ್ಲಿ ಆತಂಕಕ್ಕೆ  ಕಾರಣವಾಗಿದೆ. ಆಗಸ್ಟ್ 16ರಂದು ಮೂರು ಮಂದಿ ಜೊತೆಯಲ್ಲೇ ಆಸ್ಪತ್ರೆಗೆಂದು ಹೋಗಿದ್ದು ಬಳಿಕ ವಾಪಸ್ ಆಗಿಲ್ಲ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಯುವತಿಯರ  ನಾಪತ್ತೆಗೆ ಹೊಸ ಮೊಬೈಲ್ ಫೋನ್ ಎಂದು ಹೇಳಲಾಗುತ್ತಿದೆ. ಮೂವರಲ್ಲಿ ಓರ್ವ ಯುವತಿ ಕೆಲದಿನಗಳಿಂದ ಹೊಸ ಮೊಬೈಲ್ ಫೋನ್ ಬಳಸುತ್ತಿದ್ದು ಈ ಬಗ್ಗೆ ಮನೆಮಂದಿ ವಿಚಾರಿಸಿದ್ದರು. […]

ಅಕ್ರಮ ಗೋಸಾಗಾಟಗಾರರಿಂದದ ಪೊಲೀಸರ ಕೊಲೆಗೆ ಯತ್ನ: ಆರೋಪಿಗಳು ಪರಾರಿ

Friday, November 4th, 2016
trafficking cattle

ಮೂಡಬಿದಿರೆ: ಪಡು ಕೊಣಾಜೆಯ ಮೇಕಾರು ಬಳಿ ಅಕ್ರಮ ಗೋಸಾಗಾಟಗಾರರು ಪೊಲೀಸರ ಮೇಲೆ ಕಾರು ಹಾಯಿಸಿ, ಕೊಲೆಗೆ ಯತ್ನಿಸಿದ ಘಟನೆ ಗುರುವಾರ ಮುಂಜಾನೆ ನಡೆದಿದೆ. ಅನಿವಾರ್ಯವಾಗಿ ಪೊಲೀಸರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಕ್ವಾಲಿಸ್‌ ಜೀಪು, 7 ದನಗಳು ಮತ್ತು ಕ್ವಾಲಿಸ್‌ನಲ್ಲಿದ್ದ ಆರೋಪಿಗಳು ಬಳಸಿರುವ ಕೈಗವಸು, ಎರಡು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಮಾರ್ಗವಾಗಿ ಶಿರ್ತಾಡಿ ಕಡೆಗೆ ವಾಹನದಲ್ಲಿ ಅಕ್ರಮ ಗೋಸಾಗಾಟ ಮಾಡುವ ಖಚಿತ ಮಾಹಿತಿಯ ಪ್ರಕಾರ ಮೂಡಬಿದಿರೆಯ ಇನ್ಸ್‌ಪೆಕ್ಟರ್‌ ರಾಮಚಂದ್ರ […]

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಫೋನ್, ಗಾಂಜಾ ಪತ್ತೆ

Wednesday, May 18th, 2011
ಮಂಗಳೂರು ಜಿಲ್ಲಾ ಕಾರಾಗೃಹ

ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳು ಅಕ್ರಮ ವ್ಯವಹಾರ ಹಾಗೂ  ಕ್ರಿಮಿನಲ್ ಚಟುವಟಿಕೆ ಗಳಲ್ಲಿ ತೊಡಗಿದ್ದಾರೆ ಎಂಬ ದೂರಿನ ಅನ್ವಯ ಎಸಿಪಿ ರವೀಂದ್ರ ಗಡಾದಿ ಅವರ ನೇತ್ರತ್ವದಲ್ಲಿ ಇಂದು ಮಧ್ಯಾಹ್ನ ಅನಿರೀಕ್ಷಿತ ದಾಳಿ ನಡೆಸಿದ ಪೊಲೀಸರು ಜೈಲಿನಲ್ಲಿದ್ದ ಖೈದಿಗಳಿಂದ ಸಿಮ್ ಕಾರ್ಡ್, ಎರಡು ಮೊಬೈಲ್ ಫೋನ್ ಹಾಗೂ ಎರಡು ಪ್ಯಾಕೇಟ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಖೈದಿಗಳಿಗೆ ಗಾಂಜಾ ಹಾಗೂ ಮೊಬೈಲ್ ಫೋನ್ ಸಿಗುವಲ್ಲಿ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗಿಯಾಗಿರುವ ಬಗ್ಗೆ ಸಂಶಯವಿದ್ದು ತನಿಖೆಯಿಂದ ತಿಳಿದು ಬರಬೇಕಿದೆ. […]