ಕಾಪು ಕ್ಷೇತ್ರದ ಜನಪ್ರಿಯ ನಾಯಕ ಲಾಲಾಜಿ ಮೆಂಡನ್‌

Friday, May 11th, 2018
lalaji-mendon

ಕಾಪು: ತುಳುನಾಡಿನ ಜನತೆ ಸಜ್ಜನರು, ಆತ್ಮಾಭಿಮಾನಿಗಳು. ನಾವು ಸಮಾಜಕ್ಕೆ ನಮ್ಮಿಂದಾಗುವ ಕೊಡುಗೆಗಳನ್ನು ಸದಾ ನೀಡುತ್ತಿರುತ್ತಾರೆ ಎಂದು ನಂಬಿದವರು ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಮೆಂಡನ್‌. ಅತ್ಯಂತ ಸಜ್ಜನ, ಉತ್ತಮ ಸ್ವಭಾವದ ರಾಜಕಾರಣಿ ಎಂದೇ ಲಾಲಾಜಿ ಮೆಂಡನ್ ಅವರನ್ನು ಗುರುತಿಸಲಾಗುತ್ತದೆ. ಈ ಬಾರಿ ಮತ್ತೆ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಅವರೇ ಆಗಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರ ಈ ಬಾರಿ ಉಡುಪಿ ಜಿಲ್ಲೆಯ ಪೈಕಿ ಜಿದ್ದಿನ ಕಣ. ಕಾಂಗ್ರೆಸ್ನಿಂದ ವಿನಯಕುಮಾರ್ ಸೊರಕೆ, ಬಿಜೆಪಿಯಿಂದ […]

ನಾಮಪತ್ರ ಸಲ್ಲಿಕೆ ವೇಳೆ ಪ್ರಮುಖರ ಮುಖಾಮುಖಿ

Tuesday, April 24th, 2018
pramod-madhwaraj

ಉಡುಪಿ: ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನ ಆಗಿರುವು ದರಿಂದ ಬಹುತೇಕ ಪ್ರಮುಖರು ಇಂದೇ ನಾಮಪತ್ರ ಸಲ್ಲಿಸಲು ದಿನ ನಿಗದಿ ಪಡಿಸಿದ ಪರಿಣಾಮ ಬನ್ನಂಜೆಯ ಹಳೆ ಜಿಪಂ ಕಟ್ಟಡದಲ್ಲಿರುವ ಚುನಾವಣಾ ಕಚೇರಿ ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಯಿತು. ವಿನಯಕುಮಾರ್ ಸೊರಕೆ ನಾಮಪತ್ರ ಸಲ್ಲಿಸಿ ಹೊರಬರುತ್ತಿದ್ದಂತೆ ಲಾಲಾಜಿ ಆರ್.ಮೆಂಡನ್ ತನ್ನ ಕಾರ್ಯಕರ್ತರ ಪಡೆಯೊಂದಿಗೆ ನಾಮಪತ್ರ ಸಲ್ಲಿಸಲು ಆಗಮಿಸಿದರು. ಈ ವೇಳೆ ಕಚೇರಿಯ ಗೇಟಿನಲ್ಲಿ ಸೊರಕೆ ಹಾಗೂ ಲಾಲಾಜಿ ವೆುಂಡನ್ ಪರಸ್ಪರ ಎದುರಾದರು. ಈ ಸಂದರ್ಭದಲ್ಲಿ ಲಾಲಾಜಿ ಹಾಗೂ ಸೊರಕೆ […]

ಜನಾರ್ದನ ಪೂಜಾರಿ ಕಾಲಿಗೆರಗಿ ಆಶೀರ್ವಾದ ಪಡೆದ ಶಾಸಕ ಸೊರಕೆ

Thursday, April 19th, 2018
janardhan-poojary

ಮಂಗಳೂರು: ಉಡುಪಿ ಜಿಲ್ಲೆಯ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಅವರು ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರನ್ನು ದ.ಕ ಜಿಲ್ಲೆಯ ಬಂಟ್ವಾಳದ ಮನೆಯಲ್ಲಿ ಭೇಟಿ ಮಾಡಿ ಆಶೀರ್ವಾದ ಕೋರಿದರು. ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕರಾವಳಿಯಲ್ಲಿ ಬಿಲ್ಲವ ಸಮುದಾಯದ ಹಿರಿಯ ಮುಖಂಡರಾಗಿದ್ದು, ಸ್ವಪಕ್ಷದಲ್ಲಿನ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿ ಸುದ್ದಿಯಾಗಿದ್ದರು. ಬಿಲ್ಲವ ಸಮುದಾಯದಿಂದ ಬಂದ ಕಾಂಗ್ರೆಸ್ ಶಾಸಕ ವಿನಯಕುಮಾರ್ ಸೊರಕೆ ಅವರು ಪೂಜಾರಿ ಅವರ ಕಾಲಿಗೆರಗಿದರು, ಅವರಿಗೆ ಪೂಜಾರಿ ಶುಭ ಹಾರೈಸಿದರು […]