ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತುಳು ಸಂಘ ಉದ್ಘಾಟನೆ

Saturday, October 6th, 2018
alwas-clg

ಮೂಡಬಿದ್ರೆ: ವಿದ್ಯಾರ್ಥಿಗಳು ಸತ್ಯ ಹಾಗೂ ನ್ಯಾಯದಿಂದ, ಸನ್ಮಾರ್ಗದಲ್ಲಿ ನಡೆದಾಗ ಭವಿಷ್ಯದಲ್ಲಿ ಯಶಸ್ಸು ಲಭ್ಯವಾಗುತ್ತದೆ ಎಂದು ಶತಾಯುಷಿ ಮಿಜಾರುಗುತ್ತು ಆನಂದ್ ಆಳ್ವ ಹೇಳಿದರು. ಇವರು ಆಳ್ವಾಸ್ ಇಂಜಿನಿಯರಿಂಗ್ ಹಾಗೂ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ತುಳು ಸಂಘ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವಜನಾಂಗವು ಕೇವಲ ಸಂಪತ್ತಿಗೆ ಕೇಂದ್ರಿಕೃತವಾಗಿದ್ದು, ಭಾಂದವ್ಯಗಳಿಂದ ವಂಚಿತರಾಗಿರುತ್ತಾರೆ. ಆದರೆ ತುಳುನಾಡ ಜನರು ಈ ದುಸ್ಥಿತಿಯನ್ನು ಎದುರಿಸದೇ ಕೂಡು ಕುಟುಂಬದ ಪ್ರೀತಿ ಭಾಂದವ್ಯದಲ್ಲಿ ಬೆಳೆದಿದ್ದು, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಅವರು ಹೇಳಿದರು. ತುಳು ಸಾಹಿತ್ಯ […]