ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಉಪಶಮನ ನಿಗಾ ಘಟಕದ ಕಾರ್ಯಾಗಾರ

Thursday, August 4th, 2011
Father Muller Medical College workshop /ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು

ಮಂಗಳೂರು : ನಗರದ ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಇದರ ಗ್ರಂಥಿ ವಿಜ್ಞಾನ ಮತ್ತು ನರ್ಸಿಂಗ್ ವಿಭಾಗವು ಉಪಶಮನ ನಿಗಾ ಘಟಕದ ವಿಷಯದಲ್ಲಿ ಆಯೋಜಿಸಿದ ಕಾರ್ಯಾಗಾರವನ್ನು ಬುಧವಾರ ಅವರು ಜಿಲ್ಲಾಧಿಕಾರಿ ಡಾ| ಎನ್‌. ಎಸ್‌. ಚನ್ನಪ್ಪ ಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಬಡ ಜನರು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರಿಗೆ ವೈದ್ಯಕೀಯ ಚಿಕಿತ್ಷೆಗಳು ಸೇವೆಯಾಗಿ ಸಿಗಬೇಕು ಎಂದು ಹೇಳಿದರು. ವೈದ್ಯಕೀಯ ಕ್ಷೇತ್ರ ವಾಣಿಜ್ಯೀಕರಣಗೊಂಡಿರುವ ಕಾರಣ ಎಲ್ಲರಿಗೂ ಸಮಾನ ವೈದ್ಯಕೀಯ ಸೇವೆಗಳು ಲಭ್ಯವಾಗುತ್ತಿಲ್ಲ. […]