ನೇತ್ರಾವತಿ ಸೇತುವೆಯಿಂದ ಹಾರಿ ಯುವಕನೋರ್ವ ಆತ್ಮಹತ್ಯೆ

Saturday, August 17th, 2019
sadaashiva

ಮಂಗಳೂರು : ನೇತ್ರಾವತಿ ಸೇತುವೆಯಿಂದ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿರುವ ಘಟನೆ ಆ.16 ರ ಶುಕ್ರವಾರ ತಡರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿರುವ ಯುವಕ ಕಡಬದ ನಿವಾಸಿ 29 ವರ್ಷದ ಸದಾಶಿವ ಎಂದು ತಿಳಿದುಬಂದಿದೆ. ಈತ ನಿನ್ನೆ ರಾತ್ರಿ 9.30 ರ ಸುಮಾರಿಗೆ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮೃತ ಗಣೇಶ್ ಕುಟುಂಬವರ್ಗಕ್ಕೆ ಶಾಸಕ ರಾಜೇಶ್ ನಾಯಕ್ ಸಾಂತ್ವನ

Friday, May 25th, 2018
rajesh-naik

ಸುಳ್ಯ: ಇತ್ತೀಚೆಗೆ ಸುಳ್ಯದಲ್ಲಿ ನಡೆದ ವಿದ್ಯುತ್ ಅವಘಡದಲ್ಲಿ ಬಂಟ್ವಾಳ ತಾಲೂಕಿನ ಸುವರ್ಣನಾಡಿನ ಗಣೇಶ್ ಮುಗುಳಿಯ ಎಂಬವರು ಮೃತಪಟ್ಟಿದ್ದರು. ಅವರ ಮನೆಗೆ ಬಂಟ್ವಾಳದ ಶಾಸಕರಾದ ರಾಜೇಶ್ ನಾೈಕ್ ಉಳಿಪ್ಪಾಡಿಯವರು ಭೇಟಿ ನೀಡಿ, ಕುಟುಂಬವರ್ಗಕ್ಕೆ ಸಾಂತ್ವಾನ ಹೇಳಿ ಮೆಸ್ಕಾಂ ಅಧಿಕಾರಿಗಳಿಗೆ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಸಂಗಬೆಟ್ಟುವಿನ ಮಾಜಿ ತಾ.ಪಂ ಸದಸ್ಯರಾದ ಪ್ರಭಾಕರ ಪ್ರಭು, ಬಿಜೆಪಿ ರೈತಮೋರ್ಚಾದ ನಂದರಾಮ ರೈ,ಪಂಜಿಕಲ್ಲು ಗ್ರಾ.ಪಂ ಉಪಾಧ್ಯಕ್ಷರಾದ ಲಕ್ಷ್ಮಣ್ ಪಂಜಿಕಲ್ಲು, ಸದಸ್ಯರಾದ ಬಾಲಕಕೃಷ್ಣ ಪೂಜಾರಿ, ಕೃಷ್ಣಪ್ಪ ಪೂಜಾರಿ, ಸುರೇಶ್ […]

ಎಂಡೋ ಸಂತ್ರಸ್ಥ ಪ್ರದೇಶಗಳಿಗೆ ಭೇಟಿ ನೀಡಿದ ಪಿಣರಾಯಿ ವಿಜಯನ್

Sunday, January 17th, 2016
endo victims

ಪೆರ್ಲ: ಸಿಪಿಎಂ ಪ್ಯಾಲಿಟ್ ಬ್ಯೂರೋ ಸದಸ್ಯ,ರಾಜ್ಯ ಕಾರ್ಯದರ್ಶಿ ಪಿಣರಾಯಿ ವಿಜಯನ್ ಎಂಡೋ ಸಂತ್ರಸ್ಥ ಪ್ರದೇಶಗಳಾದ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡ್ರೆ, ಸ್ವರ್ಗ, ವಾಣೀನಗರ, ಬೋವಿಕ್ಕಾನ ಬಡ್ಸ್ ಕೇಂದ್ರಗಳ ಸಹಿತ ವಿವಿಧ ಪ್ರದೇಶಗಳನ್ನು ಗುರುವಾರ ಸಂದರ್ಶನ ನಡೆಸಿದರು. ತಮ್ಮ ಭೇಟಿಯ ಆರಂಭದಲ್ಲಿ ಪೆರ್ಲ ಕನ್ನಟಿಕಾನ ಬಡ್ಸ್ ಶಾಲೆಗೆ ಭೇಟಿ ನೀಡಿದ ಅವರು ಅಲ್ಲಿನ ಭಿನ್ನಚೇತನ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿದರು.ಬಳಿಕ ಇತ್ತೀಚೆಗೆ ನಿಧನರಾದ ಸ್ವರ್ಗ ಬೈರಡ್ಕದ ಸಿಪಿಐ ನಾಯಕ ಎಂ.ಕೆ.ಬಾಲಕೃಷ್ಣನ್ ರ ಮನೆಗೆ ಭೇಟಿ ನೀಡಿ ಕುಟುಂಬ […]