ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Wednesday, February 3rd, 2016
satish

ಪೆರ್ಲ: ವಿವಾಹಿತ ಯುವಕನೋರ್ವನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾದ ಘಟನೆ ಒಡ್ಯದಲ್ಲಿ ನಡೆದಿದೆ. ಕುರೆಡ್ಕ ಐತ್ತಪ್ಪ ನಾಯ್ಕರ ಪುತ್ರ ಸತೀಶ(35)ಮೃತದೇಹ ಒಡ್ಯ ಸಮೀಪದ ಮಾಯಿಲಕ್ಕಾನದಲ್ಲಿರುವ ಇವರ ಮನೆಯಲ್ಲಿ ಅಜೀರ್ಣಾವಸ್ಥೆಯಲ್ಲಿ ಪತ್ತೆಯಾಗಿದೆ. ಶರೀರದಲ್ಲಿ ಯಾವುದೇ ಗಾಯಗಳಿಲ್ಲದಿರುವುದರಿಂದ ಮರಣಕ್ಕೆ ಸ್ಪಷ್ಟ ಕಾರಣ ತಿಳಿಯದಿರುವುದರಿಂದ ಉನ್ನತ ವೈದ್ಯಕೀಯ ಪರೀಕ್ಷೆಗೆ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮೃತದೇಹ ಕೊಂಡೊಯ್ಯಲಗಿದೆ. ಸತೀಶ್ ಈ ಹಿಂದೆ ನಲ್ಕದಲ್ಲಿ ಹೋಟೆಲ್ ನಡೆಸುತ್ತಿದ್ದರು. ಮಾಯಿಲಕ್ಕಾನದಿಂದ ಮದುವೆಯಾಗಿ ಪತ್ನಿ ಗೃಹದಲ್ಲಿ ಇವರು ವಾಸಿಸುತ್ತಿದ್ದರು. ಇತ್ತೀಚೆಗೆ ಪತ್ನಿ ಮನೆಯಿಂದ ಸ್ವಲ್ಪ […]

ಚರಂಡಿಯಲ್ಲಿ ಸಿಲುಕಿದ್ದ ಶವವನ್ನು ಜೆಸಿಬಿ ಯಂತ್ರದ ಮೂಲಕ ಆಸ್ಪತ್ರೆವರೆಗೆ ಸಾಗಿಸಿದ ಪೊಲೀಸರು

Tuesday, July 30th, 2013
Dead Body in JCB

ಲಖನೌ : ಫಿರೋಜಾಬಾದ್ ಪಟ್ಟಣದ ನಳಬಂದನ್ ಪ್ರದೇಶದಲ್ಲಿ ಭಾನುವಾರ ಚರಂಡಿಯೊಂದರಲ್ಲಿ ಸಿಲುಕಿದ್ದ ಶವವನ್ನು ಜೆಸಿಬಿ ಯಂತ್ರದ ಮೂಲಕ ಹೊರ ತೆಗೆದು, ನಂತರ ಅದರಲ್ಲೇ ಆಸ್ಪತ್ರೆವರೆಗೆ ಸಾಗಿಸಿದ ಪ್ರಕರಣವೊಂದು ಉತ್ತರ ಪ್ರದೇಶದದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪೋಲಿಸರನ್ನು ಅಮಾನತು ಮಾಡಲಾಗಿದೆ. ತ್ಯಾಜ್ಯ ತುಂಬಿದ್ದ ದೊಡ್ಡ ಚರಂಡಿಯಲ್ಲಿ 18 ವರ್ಷದ ಯುವಕನ ನಗ್ನ ಶವವೊಂದು ಇರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ತ್ಯಾಜ್ಯ ಹೊರತೆಗೆಯುವ ಜೆಸಿಬಿ ಯಂತ್ರಕ್ಕಾಗಿ ನಗರ ಪಾಲಿಕೆಗೆ ಮನವಿ ಸಲ್ಲಿಸಿದರು. […]