ಮತ ಎಣಿಕೆಯ ಬೆನ್ನಲ್ಲೆ ವ್ಯಾಪಕ ಹಿಂಸಾಚಾರ; ದಿಕ್ಕೆಟ್ಟ ಜನತೆ

Thursday, May 19th, 2016
Kerala Counting

ಕುಂಬಳೆ: ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆಯ ದಿನವಾದ ಗುರುವಾರ ಜಿಲ್ಲೆಯಾದ್ಯಂತ ಹಲವೆಡೆ ವ್ಯಾಪಕ ಹಿಂಸಾಚಾರಗಳು ನಡೆದು ಜನ ಸಾಮಾನ್ಯರು ಅಕ್ಷರಶಃ ಕಂಗೆಟ್ಟು ಸಂಕಷ್ಟ ಅನುಭವಿಸಿದ ಸ್ಥಿತಿ ನಿರ್ಮಾಣವಾಯಿತು. ಮಂಜೇಶ್ವರ,ಕಾಸರಗೋಡು ಮತ್ತು ಉದುಮ ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ ನಡೆದ ಕಾಸರಗೋಡು ಸರಕಾರಿ ಕಾಲೇಜಿನ ಆವರಣದಲ್ಲಿ ಗುರುವಾರ ಬೆಳಿಗ್ಗೆಯೇ ಜಮಾಯಿಸಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರು ತೀವ್ರ ಕುತೂಹಲಿಗಳಾಗಿ ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾತರಿಸುತ್ತಿದ್ದು ಕಂಡುಬಂತು.ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಲ್ಲಿ ಜಮಾಯಿಸಿದ್ದ ಕಾರ್ಯಕರ್ತರ ಮುಗಿಲುಮುಟ್ಟಿದ […]

ದಕ್ಷಿಣ ಕನ್ನಡ ವಿದ್ಯುತ್ ಗುತ್ತಿಗೆದಾರರ ಸಂಘದಲ್ಲಿ ಕೋಟ್ಯಾಂತರ ರೂ. ಅಕ್ರಮ ವ್ಯವಹಾರ

Thursday, October 15th, 2015
Urban Pinto

ಮಂಗಳೂರು : ಇದು ವಿದ್ಯುತ್ ಕಾಮಗಾರಿ ತೆಗೆದುಕೊಳ್ಳುವ ವ್ಯಕ್ತಿಗಳು ಸರಕಾರಕ್ಕೆ ಕೊಟ್ಟ ಶಾಕ್‌ನ ಕಥೆ. ಕರ್ನಾಟಕ ರಾಜ್ಯ ಪರವಾನಿಗೆ ಹೊಂದಿದ ವಿದ್ಯುತ್ ಗುತ್ತಿಗೆದಾರರ ಸಂಘ ಎಂದು ಒಂದಿದೆ ಎಂದು ನಿಮಗೆಲ್ಲ ಗೊತ್ತಿರಬಹುದು. ಅವರ ವ್ಯವಹಾರವೇನು ಎನ್ನುವುದನ್ನು ನಿಮಗೆ ಹೇಳುವ ಮೊದಲು ಆ ಸಂಘದವರ 420 ಕೆಲಸದ ಬಗ್ಗೆ ನಿಮಗೆ ಗೊತ್ತಾಗಲೇಬೇಕು. ನಿಮ್ಮ ಮನೆಗೆ ಹೊಸದಾಗಿ ವಿದ್ಯುತ್ ಸಂಪರ್ಕ ಬೇಕು ಎಂದು ಅಂದುಕೊಳ್ಳಿ. ನೀವು ಮಂಗಳೂರಿನವರಾದರೆ ಮೆಸ್ಕಾಂ ಕಚೇರಿಗೆ ಹೋಗುತ್ತೀರಿ. ಅಲ್ಲಿ ಅರ್ಜಿ ಕೇಳುತ್ತೀರಿ. ಆದರೆ ಅಲ್ಲಿ ಮೆಸ್ಕಾಂ […]