ಕಾಸರಗೋಡು: ಎಸ್.ಎಸ್.ಎಲ್.ಸಿ ಪರೀಕ್ಷೆ ಬುಧವಾರ ಆರಂಭ

Tuesday, March 8th, 2016
kasagod SSLC

ಕಾಸರಗೋಡು: ರಾಜ್ಯದಲ್ಲಿ ಹತ್ತನೇ ತರಗತಿಯ ಪರೀಕ್ಷೆ ಬುಧವಾರ (ಇಂದು) ಆರಂಭಗೊಳ್ಳುತ್ತಿದೆ. ರಾಜ್ಯದ 4,76,857 ಮಂದಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಿ ಭವಿಷ್ಯ ನಿರ್ಧರಿಸುವರು. ಪರೀಕ್ಷೆಗೆ 2903 ಪರೀಕ್ಷಾ ಕೇಂದ್ರಗಳನ್ನು ಸಿದ್ದಗೊಳಿಸಲಾಗಿದೆ. ಮಲೆಯಾಳ ವಿಭಾಗದಲ್ಲಿ 3,20,854 ವಿದ್ಯಾರ್ಥಿಗಳು,ಕನ್ನಡ ವಿಭಾಗದಲ್ಲಿ 3135 ಮಂದಿ ವಿದ್ಯಾರ್ಥಿಗಳು,ತಮಿಳಿನಲ್ಲಿ 2163 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮೌಲ್ಯ ಮಾಪನ ಏಪ್ರಿಲ್ 1 ರಿಂದ 12ರ ವರೆಗೆ ನಡೆಯಲಿದೆ.

ಮಾತೃಸಂಘದಿಂದ ಗ್ರಾ.ಪಂ.ಚುನಾವಣೆಯಲ್ಲಿ ಆಯ್ಕೆಯಾದ ಬಂಟ ಸದಸ್ಯರಿಗೆ ಅಭಿನಂದನೆ

Monday, July 20th, 2015
Bunts

ಮಂಗಳೂರು : ಬಂಟರ ಯಾನೆ ನಾಡವರ ಮಾತೃಸಂಘ ದ.ಕ. ವತಿಯಿಂದ ದ.ಕನ್ನಡ ಹಾಗೂ ಉಡುಪಿ ಜಿಲ್ಲೆಯ ಗ್ರಾಮಪಂಚಾಯತ್‌ಗಳಿಗೆ ಇತ್ತೀಚೆಗೆ ಜರಗಿದ ಚುನಾವಣೆಯಲ್ಲಿ ಆಯ್ಕೆಯಾದ ಬಂಟ ಸಮಾಜದ ಸದಸ್ಯರಿಗೆ ಅಭಿನಂದನಾ ಸಮಾರಂಭ ರವಿವಾರ ಬಂಟ್ಸ್‌ ಹಾಸ್ಟೆಲ್‌ನ ಎ.ಬಿ. ಶೆಟ್ಟಿ ಸಭಾಂಗಣದಲ್ಲಿ ಜರಗಿತು. ಕರ್ನಾಟಕದ ಮಾಜಿ ಸಚಿವ ಹಾಗೂ ಮಾಜಿ ಲೋಕಸಭಾ ಸದಸ್ಯ ಶ್ರೀ ಜಯಪ್ರಕಾಶ ಹೆಗ್ಡೆ ಅವರು ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತಮ್ಮ ಮೇಲಿರುವ ಹೊಣೆಗಾರಿಕೆ ಅರಿತುಕೊಂಡು ಜನರ ನಿರೀಕ್ಷೆಗಳಿಗೆ ಪೂರಕ […]