ಪ್ರಮೋದ್‌ ಮುತಾಲಿಕ್‌ ಶಿವಸೇನೆಯಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ

Thursday, November 2nd, 2017
pramod muthalik

ಮಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ, ರಾಜ್ಯದ ಗಡಿ ವಿಚಾರದಲ್ಲಿ ಪದೇಪದೇ ತಗಾದೆ ತೆಗೆದು ಮಹಾರಾಷ್ಟ್ರ ಪರ ದನಿ ಎತ್ತುವ ಶಿವಸೇನೆ ಪಕ್ಷದ ಟಿಕೆಟ್‌ನಿಂದಲೇ ಸ್ಪರ್ಧಿಸಲು ಇದೀಗ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಮುಂದಾಗಿದ್ದಾರೆ! ಈ ವಿಚಾರವನ್ನು ಖುದ್ದು ಮುತಾಲಿಕ್‌ ಅವರೇ ತಿಳಿಸಿದ್ದಾರೆ. ಮಂಗಳೂರಿಗೆ ಸೋಮವಾರ ಭೇಟಿ ನೀಡಿದ್ದ ವೇಳೆ ಉದಯವಾಣಿಯೊಂದಿಗೆ ಮಾತನಾಡಿದ ಅವರು ಮುಂದಿನ ಚುನಾವಣೆಯಲ್ಲಿ ತಮ್ಮ ಸಂಘಟನೆ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ಹೇಳಿದ್ದಿಷ್ಟು: “ಶಿವಸೇನೆಯನ್ನು ಕರ್ನಾಟಕದಲ್ಲಿ ಕಟ್ಟುವ ನೆಲೆಯಲ್ಲಿ ಹಾಗೂ […]

ಹಿಂದೂ ವಿರೋಧಿ ಕೋಮು ಹಿಂಸೆ ತಡೆ ಶಾಸನ ಜಾರಿಯನ್ನು ನಿಲ್ಲಿಸಬೇಕು : ಮುತಾಲಿಕ್

Monday, August 1st, 2011
ಹಿಂದೂ ವಿರೋಧಿ ಕೋಮು ಹಿಂಸೆ ತಡೆ ಶಾಸನ ಜಾರಿಯನ್ನು ನಿಲ್ಲಿಸಬೇಕು : ಮುತಾಲಿಕ್

ಮಂಗಳೂರು : ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಭಾನುವಾರ ಕೇಂದ್ರ ಸರಕಾರ ಕೋಮು ಹಿಂಸೆ ತಡೆ ಶಾಸನ ಜಾರಿಗೆ ತರುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳನ್ನು ಒಗ್ಗೂಡಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ. ಪತ್ರಕರ್ತರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ದೇಶದಲ್ಲೂ ಇಂತಹ ಶಾಸನ ಜಾರಿಗೊಳಿಸಿಲ್ಲ. ಬಹುಸಂಖ್ಯಾಕರನ್ನು ದಮನ ಮಾಡುವ ಹಾಗೂ ಮತ ಗಳಿಸುವ ಉದ್ದೇಶದಿಂದ ಈ ಕಾನೂನು ಜಾರಿಗೆ ತರಲಾಗುತ್ತಿದೆ. ಯಾವುದೇ ಹಿಂದೂ ನಾಯಕರನ್ನು, ಸಂಘಟನೆಗಳನ್ನು ಗುರಿಯಾಗಿಟ್ಟುಕೊಂಡು ಈ ಶಾಸನ ರಚಿಸಲಾಗಿದೆ. […]