ನಟಿ ಪೂಜಾ ಮದುವೆ ಬ್ರೇಕ್ ಆಫ್ ಗೆ ಉಡುಪಿ ಉದ್ಯಮಿಯ ಕೈವಾಡ

Saturday, December 29th, 2012
Pooja Gandhi

ಮಂಗಳೂರು : ಮುಂಗಾರು ಮಳೆ ಹುಡುಗಿಯ ಕನಸಲ್ಲಿ ಕಾರ್ಮೋಡ ಕವಿದಿದೆ. ನಿಶ್ಚಿತಾರ್ಥವಾದ ಮೂವತ್ತೈದೇ ದಿನಕ್ಕೆ ಪೂಜಾ ಗಾಂಧಿ ಎಂಗೇಜ್ಮೆಂಟ್ ಮುರಿದು ಬಿದ್ದಿದೆ. ಇದು ನಿರೀಕ್ಷಿತವಾ? ಇಂತಹ ಅನುಮಾನವನ್ನು ಮದುವೆ ಆಗಬೇಕಿದ್ದ ಆನಂದಗೌಡ ಅವರೆ ವ್ಯಕ್ತಪಡಿಸುತ್ತಾರೆ. ನಾನು ಮತ್ತು ಪೂಜಾ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿಲ್ಲ. ನಮ್ಮಿಬ್ಬರ ಭೇಟಿ ಆಗಿದ್ದು ಕೇವಲ ಒಂಭತ್ತು ತಿಂಗಳ ಹಿಂದೆ. ಅದೂ ಪತ್ರಕರ್ತರೊಬ್ಬರ ಮೂಲಕ. ಆಕೆಗೆ ಬೇರೊಬ್ಬರ ಜತೆ ಸ್ನೇಹವಿತ್ತು ಅಂತ ಗೊತ್ತಾಗಿ, ಒಂದು ಸಾರಿ ದೂರವಾಗಿದ್ದೆವು. ಮತ್ತೆ ಹೊಂದಾಣಿಕೆ ಮಾಡಿಕೊಂಡು ಹೋಗೋಣ […]

ಮುರಿದುಬಿದ್ದ ನಟಿ ಪೂಜಾಗಾಂಧಿ ಮದುವೆ ನಿಶ್ಚಿತಾರ್ಥ

Thursday, December 20th, 2012
Pooja Gandhi

ಬೆಂಗಳೂರು :ಮಳೆ ಹುಡುಗಿಯಾಗಿ ಮಿಂಚಿ, ರಾಜಕಾರಣದಲ್ಲಿಯೂ ಛಾಪು ಮೂಡಿಸುತ್ತಿರುವ ನಟಿ ಪೂಜಾ ಗಾಂಧಿ ಮದುವೆ ನಿಶ್ಚಿತಾರ್ಥ ನವೆಂಬರ್ 15ರಂದು ರಿಯಲ್ ಎಸ್ಟೇಟ್ ಉದ್ಯಮಿ ಆನಂದ್ ಗೌಡ ಅವರೊಂದಿಗೆ ನೆರವೇರಿತ್ತು ಆದರೆ ಇದೀಗ ಮದುವೆ ನಿಶ್ಚಿತಾರ್ಥ ಒಂದೇ ತಿಂಗಳಲ್ಲಿ ಮುರಿದುಬಿದ್ದಿದೆ. ನಿಶ್ಚಿತಾರ್ಥ ಮುರಿದು ಬೀಳಲು ಕಾರಣಗಳೇನೆಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಪೂಜಾ ಗಾಂಧಿ ತಾಯಿಗೆ ಹಣದಾಸೆ ಜಾಸ್ತಿ, ಹೀಗಾಗಿ ತಾನು ದೂರ ಸರಿದಿರುವುದಾಗಿ ಆನಂದ ಗೌಡ ಅವರು ಮಾಧ್ಯಮಗಳಿಗೆ ಹೇಳಿರುವುದು ಒಂದು ಕಡೆಯಾದರೆ, ಇದೇ ವೇಳೆ, ಈ ಕುರಿತು […]

ತೆನೆ ಹೊತ್ತ ಮಹಿಳೆ ಪೂಜಾಗಾಂಧಿ ಕೆಜೆಪಿ ಸೇರ್ಪಡೆ

Saturday, December 8th, 2012
Pooja Gandhi KJP

ಬೆಂಗಳೂರು :ಕಳೆದ ಆರು ತಿಂಗಳ ಹಿಂದೆಯಷ್ಟೆ ಜೆಡಿಎಸ್‌ ಮೂಲಕ ರಾಜಕೀಯಕ್ಕೆ ಪಾದಾರ್ಪಣೆಮಾಡಿದ್ದ ಮಳೆ ಹುಡುಗಿ ಪೂಜಾಗಾಂಧಿ ಈಗ ಪಕ್ಷ ಬದಲಾಯಿಸಿದ್ದಾರೆ. ಎರಡು ತಿಂಗಳ ಹಿಂದೆ ತಮ್ಮ ವಿರುದ್ಧ ಆರೋಪ ಕೇಳಿಬಂದಾಗ ಪಕ್ಷದ ಯಾವೊಬ್ಬ ಪ್ರಮುಖ ನಾಯಕರೂ ತಮ್ಮ ಬೆಂಬಲಕ್ಕೆ ಬಂದಿರಲಿಲ್ಲ ಆದ್ದರಿಂದ ಜೆಡಿಎಸ್‌ಗೆ ರಾಜೀನಾಮೆ ನೀಡಿ ಕೆಜೆಪಿಗೆ ಸೇರ್ಪಡೆಗೊಂಡಿದುದಾಗಿ ತಿಳಿಸಿದರು. ಶುಕ್ರವಾರ ಮಲ್ಲೇಶ್ವರದಲ್ಲಿರುವ ಕೆಜೆಪಿ ಕಚೇರಿಯಲ್ಲಿ ಪಕ್ಷದ ಬಾವುಟ ಹಿಡಿಯುವ ಮೂಲಕ ನೂತನ ಪಕ್ಷಕ್ಕೆ ಸೇರ್ಪಡೆಗೊಂಡ ಅವರನ್ನು ಕೆಜೆಪಿ ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯೆ ಐಶ್ವರ್ಯ ಅವರು […]

ಪೂಜಾ ಗಾಂಧಿಗೆ ಹೊಸ ಚಿತ್ರವೊಂದರಲ್ಲಿ ಸೆಕ್ಷೀ ಪಾತ್ರ ಸಿಕ್ಕಿದೆಯಂತೆ.

Wednesday, September 28th, 2011
pooja-gandhi

ಬೆಂಗಳೂರು : ಇದುವರೆಗೆ ಮೈ ತುಂಬಾ ಬಟ್ಟೆ ಹಾಕಿಕೊಂಡು ನಟಿಸುತ್ತಿದ್ದ ‘ಮಳೆ’ ಹುಡುಗಿ ಪೂಜಾ ಗಾಂಧಿಗೆ ಹೊಸ ಚಿತ್ರವೊಂದರಲ್ಲಿ ಸೆಕ್ಷೀ ಪಾತ್ರ ಸಿಕ್ಕಿದೆಯಂತೆ. ಮುಂಗಾರು ಮಳೆಯ ನಂತರ ಒಂದಷ್ಟು ಜನಪ್ರಿಯತೆಯನ್ನು ಈಗಲೂ ಉಳಿಸಿಕೊಂಡಿರುವ ನಾಯಕಿ ಈಕೆ. ಸದ್ಯ ಆಕೆ ಒಪ್ಪಿಕೊಂಡ ಚಿತ್ರಗಳು ಖಾಲಿಯಾಗಿವೆ. ಅನಿರೀಕ್ಷಿತವಾಗಿ ಬಂದಿರುವ ಆಫರ್ ಒಂದನ್ನು ಕಣ್ಮುಚ್ಚಿ ಒಪ್ಪಿಕೊಂಡಿರುವ ಆಕೆ ಇದುವರೆಗೂ ನಟಿಸಿರದಷ್ಟು ವಿಭಿನ್ನವಾದ ಮತ್ತು ಮಾದಕ ಪಾತ್ರವನ್ನು ಇದರಲ್ಲಿ ಮಾಡುತ್ತಿದ್ದಾರಂತೆ! ‘ಕೋಟೆ’ ಖ್ಯಾತಿಯ ನಿರ್ದೇಶಕ ಶ್ರೀನಿವಾಸ ರಾಜು. ಅವರು ನಿರ್ಮಿಸುತ್ತಿರುವ ‘ದಂಡುಪಾಳ್ಯ’. ಸಿನಿಮಾದಲ್ಲಿ […]