ವಿರೇಂದ್ರ ಹೆಗ್ಗಡೆಯವರಿಂದ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಗೆ ಚಾಲನೆ

Friday, December 20th, 2013
Alvas Nudisiri Virasat

ಮೂಡಬಿದಿರೆ : ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 ನ್ನು ಡಾ. ಡಿ ವಿರೇಂದ್ರ ಹೆಗ್ಗಡೆಯವರು ಗುರುವಾರ ಸಂಜೆ ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಸುಂದರಿ ಆಳ್ವ ಆವರಣದಲ್ಲಿ ಸಂಜೆ 6.30 ರ ವೇಳೆಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಬತ್ತಕ್ಕೆ ಹಾಲೆರೆಯುವ ಮೂಲಕ ಇತರ ಗಣ್ಯರು ಉದ್ಘಾಟನೆಗೆ ಜತೆಗೂಡಿದರು. ಸಂಜೆ 3.30ಕ್ಕೆ ಸಾಂಸ್ಕ್ರತಿಕ ಮೆರವಣಿಗೆ ಆರಂಭಗೊಂಡಿತು. ಜನಪದ ಕಲಾವಿದೆ ನಾಡೋಜ ಸುಕ್ರಿ ಬೊಮ್ಮಗೌಡ ಮೆರವಣಿಗೆಯನ್ನು ಉದ್ಘಾಟಿಸಿದರು. ಮೆರವಣಿಗೆಯು ಚೌಟರ ಅರಮನೆಯಿಂದ ಹೊರಟು ವೆಂಕಟ್ರಮಣ ದೇವಸ್ಥಾನ, ಹನುಮಾನ್ ದೇವಸ್ಥಾನದ […]

ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್-2013ರ ಅಮಂತ್ರಣ ಪತ್ರಿಕೆ ಬಿಡುಗಡೆ

Friday, December 6th, 2013
nudisiri

ಮೂಡುಬಿದಿರೆ : ವಿದ್ಯಾಗಿರಿಯಲ್ಲಿ  ಡಿ.19ರಿಂದ 22ರವರೆಗೆ ನಡೆಯಲಿರುವ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್-2013ರ ಅಮಂತ್ರಣ ಪತ್ರಿಕೆಯನ್ನು ಗುರುವಾರ ಆಳ್ವಾಸ್ ವಿಶ್ವನುಡಿಸಿರಿ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಹಾಗೂ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ಸಾಹಿತ್ಯ, ಸಂಸ್ಕೃತಿ, ಕಲೆಗಳ ಜತೆಗೆ ಕೃಷಿ, ಜನಪದ ಬಗ್ಗೆ ಕ್ರಾಂತಿ ಮಾಡಲು ಹೊರಟಿರುವ ವಿಶ್ವನುಡಿಸಿರಿ ಸಮ್ಮೇಳನವು ಜಾಗತಿಕ ಮಟ್ಟದಲ್ಲೇ ಗಮನಸೆಳೆಯಲಿದೆ. ಡಾ.ಎಂ. ಮೋಹನ್ ಆಳ್ವರವರ ಉತ್ಸಾಹ, […]