Blog Archive

ಉಡುಪಿ : ರಸ್ತೆಯಲ್ಲೇ ಪಾರ್ಕಿಂಗ್‌; ಸಾರ್ವಜನಿಕರಿಗೆ ತೊಂದರೆ

Saturday, September 21st, 2019
udupi

ಉಡುಪಿ : ಜಿಲ್ಲೆಯಲ್ಲಿ ಪಾರ್ಕಿಂಗ್‌ ಸಮಸ್ಯೆಗೆ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರಿಂದಾಗಿ ದಿನನಿತ್ಯ ಓಡಾಡುವ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ. ಮಣಿಪಾಲದಿಂದ ಅಲೆವೂರು ಸಂಪರ್ಕಿಸುವ ರಸ್ತೆ ಮತ್ತು ಎಂ.ಜೆ. ಸಿ.ಯಿಂದ ಬರುವ ರಸ್ತೆ ಮೂರು ಕಡೆಗಳಿಂದ ಕೂಡುತ್ತವೆ. ಈ ಭಾಗದಲ್ಲಿಯೇ ಬಿಎಸ್‌ಎನ್‌ ಎಲ್‌ ಕಚೇರಿ , ಸಿಂಡಿಕೇಟ್‌ ಬ್ಯಾಂಕಿನ ಮುಖ್ಯ ಕಚೇರಿ ಇವೆ. ಈ ರಸ್ತೆಯಲ್ಲಿ ಬಸ್‌, ಕಾರು, ದ್ವಿಚಕ್ರ ವಾಹನಗಳನ್ನು ರಸ್ತೆಗೆ ಹೊಂದಿಕೊಂಡೇ ನಿಲ್ಲಿಸುವುದರಿಂದ ವಾಹನಗಳ ಸರಾಗ ಓಡಾಟಕ್ಕೆ ಅಡಚಣೆಯಾಗುತ್ತಿದೆ. ಈ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು […]

ಕಾರು ಪಲ್ಟಿಯಾಗಿ ಬೆಂಕಿ : ಐವರು ಸಜೀವ ದಹನ

Saturday, September 14th, 2019
chithur

ಚಿತ್ತೂರು :ತಿರುಪತಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕಾರು ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬೆಂಗಳೂರು ಮೂಲದ ಐವರು ಸಜೀವ ದಹನವಾದ ದಾರುಣ ಘಟನೆ ಶನಿವಾರ ಚಿತ್ತೂರಿನ ಪಲಮನೇರು ಮಂಡಲಂ ಬಳಿ ನಡೆದಿದೆ. ಕಾರಿನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಾಗ ಬೆಂಕಿ ಹೊತ್ತಿಕೊಂಡಿತ್ತು. ಕಾರಿನಿಂದ ಹೊರ ಬರಲಾಗದೆ ಐವರು ಸಜೀವ ದಹನವಾಗಿದ್ದರು. ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ. ಸಾವನ್ನಪ್ಪಿದವರನ್ನು ಬೆಂಗಳೂರಿನ ಜಾಹ್ನವಿ, ರಾಮ್, ಕಲಾ, ಸಾಯಿ ಆಶ್ರೀತ್ ಹಾಗೂ ಪವನ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ […]

ಜೂಜಾಟ ಆಡುತ್ತಿದ್ದ 8 ಮಂದಿ ಬಂಧನ ​​: ನಗದು, ಕಾರು, ದ್ವಿಚಕ್ರ ವಾಹನ ವಶ

Friday, September 6th, 2019
joojata

ಮಂಗಳೂರು : ನಗರದ ಬೆಂದೂರ್ ವೆಲ್ಕುಮಾರ್ ಇಂಟರ್ ನ್ಯಾಷನಲ್ ಲಾಡ್ಜ್ನಲ್ಲಿ ಜೂಜಾಟ ಆಡುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕಲ್ಕರ ಹೌಸ್ ನಿವಾಸಿ ಪ್ರವೀಣ್(41), ಪೆರ್ಮನ್ನೂರು ಗ್ರಾಮದ ನಿವಾಸಿ ನವೀನ್ (35), ತಲಪಾಡಿಯ ಪಂಜರ ಹೌಸ್ ನಿವಾಸಿ ನವೀನ್ ಆಳ್ವ (39), ಸೂಪಿಕಾನದ ಹಳೆಕಳ ಹೌಸ್ ನಿವಾಸಿ ಬಶೀರ್(52), ಕಂಡೇವ್ ಹೌಸ್ ನ ಸತೀಶ(33), ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸುಜೀರ್ ಹೌಸ್ ನಿವಾಸಿ ವಿಜಯ ಕುಮಾರ್ (38), […]

ಬೈಂದೂರಿನಲ್ಲಿ ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ : ಓರ್ವ ಸಾವು, ಮೂವರು ಗಂಭೀರ

Saturday, August 31st, 2019
car

ಬೈಂದೂರು : ಕಾರುಗಳ ನಡುವಿನ ಮುಖಾಮುಖಿ ಢಿಕ್ಕಿಯಲ್ಲಿ ಭಟ್ಕಳದ ಹೋಟೆಲ್ ಉದ್ಯಮಿ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಯ್ಕನಕಟ್ಟೆ ಎಂಬಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಭಟ್ಕಳದಲ್ಲಿ ಹೋಟೆಲ್ ನಡೆಸುತ್ತಿರುವ ನೂರುಲ್ ಅಮೀನ್(48) ಮೃತಪಟ್ಟವರು.ಇಂದು ಮುಂಜಾನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಅವರು ಅಲ್ಲಿಂದ ಭಟ್ಕಳದತ್ತ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ನೂರುಲ್ ಅಮೀನ್ ಅವರ ಮಾರುತಿ ಸ್ವಿಪ್ಟ್ ಕಾರು ರಸ್ತೆಯ ಡಿವೈಡರ್ ಹಾರಿ ಎದುರಿನಿಂದ ಬರುತ್ತಿದ್ದ ಇಯಾನೋ […]

ಬೈಕ್-ಕಾರಿನ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು

Thursday, August 29th, 2019
bike-car-dikki

ಮೈಸೂರು : ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಂಜನಗೂಡು- ಗುಂಡ್ಲುಪೇಟೆ ಹೆದ್ದಾರಿಯ ಸಿಂಧುವಳ್ಳಿ ಪುರ ಬಳಿ ನಡೆದಿದೆ. ಕಿರಣ್ ಕುಮಾರ್ ಹಾಗೂ ಪ್ರತಾಪ್ ಮೃತ ದುರ್ದೈವಿಗಳು, ಇವರು ಗುಂಡ್ಲುಪೇಟೆಯ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳೆಂದು ಗುರುತಿಸಲಾಗಿದೆ. ಮೈಸೂರಿನಿಂದ ಗುಂಡ್ಲುಪೇಟೆ ಕಡೆಗೆ ಹೆದ್ದಾರಿಯಲ್ಲಿ ಬರುವಾಗ, ಗುಂಡ್ಲುಪೇಟೆಯಿಂದ ವೇಗವಾಗಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಪುಡಿ ಪುಡಿಯಾಗಿದೆ. ಇನ್ನು ಯುವಕರು ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ […]

ಮನೆ ಮೇಲೆ ಬಿದ್ದ ಕಾರು… ಮನೆ, ಕಾರು ಜಖಂ!

Saturday, July 21st, 2018
car-fell-down

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಓಮಿನಿ ಕಾರೊಂದು ರಸ್ತೆಯ ಕೆಲಭಾಗದಲ್ಲಿದ್ದ ಮನೆ ಮೇಲೆ ಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದ ಹಳುವಳ್ಳಿ ಗ್ರಾಮದ ಬಳಿ ನಡೆದಿದೆ. ಕಾರಿನಲ್ಲಿ ಪ್ರವಾಸಿಗರಿದ್ದು ಮಾರುತಿ ಕಾರು ಸಂಪೂರ್ಣ ಜಖಂ ಆಗಿದೆ. ಕಾರು ಹೊರನಾಡು ದೇವಸ್ಥಾನದಿಂದ ಬರುವ ವೇಳೆಯಲ್ಲಿ ಈ ಅವಘಡ ಜರುಗಿದೆ. ಕಾರಿನಲ್ಲಿದ್ದ ಪ್ರವಾಸಿಗರಿಗೆ ಸಣ್ಣ ಪುಟ್ಟ ಗಾಯಾಳಾಗಿದ್ದು, ಗಾಯಾಳುಗಳಿಗೆ ಕಳಸ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸ್ಥಳೀಯರ ಸಹಾಯದಿಂದ ಕಾರನ್ನು ಮೇಲೆತ್ತಲಾಗಿದ್ದು, ಕಳಸ ಪೋಲಿಸರು ಸ್ಥಳಕ್ಕೆ ಆಗಮಿಸಿ […]

ಶಾರ್ಟ್‌ ಸರ್ಕ್ಯೂಟ್‌ಗೆ ಕಾರು ಧಗಧಗ… ನೋಡು ನೋಡ್ತಿದ್ದಂತೆ ಹೊತ್ತಿ ಉರಿಯಿತು!

Saturday, June 2nd, 2018
short-circute

ಮಂಗಳೂರು: ನೋಡು ನೋಡ್ತಿದ್ದಂತೆ ಕಾರುವೊಂದು ಹೊತ್ತಿ ಉರಿದಿರುವ ಘಟನೆ ಮಂಗಳೂರಿನ ಹೊರವಲಯದ ಕಾವೂರ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ರಸ್ತೆ ಮಧ್ಯೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದಾರೆ. ಬಜ್ಪೆಯ ಜಯರಾಜ್ ಎಂಬುವವರಿಗೆ ಸೇರಿದ ಐ 10 ಕಾರ್ ಇದಾಗಿದ್ದು, ಬೆಂಕಿಗೆ ಆಕಸ್ಮಿಕವಾಗಿ ನಡೆದ ಶಾರ್ಟ್‌ ಸರ್ಕ್ಯೂಟ್‌ ಎಂದು ಹೇಳಲಾಗಿದೆ.

ಲೈಟ್ ಕಂಬಕ್ಕೆ ಕಾರು ಢಿಕ್ಕಿ: ನಾಲ್ವರಿಗೆ ಗಾಯ

Monday, January 15th, 2018
accident

ಕಾಸರಗೋಡು: ಆಲ್ಟೊ ಕಾರೊಂದು ರಸ್ತೆ ಬದಿಯ ಲೈಟ್ ಕಂಬಕ್ಕೆ ಢಿಕ್ಕಿ ಹೂಡೆದು ನಾಲ್ವರು ಗಾಯಗೊಂಡ ಘಟನೆ ಉದುಮ ರೈಲ್ವೆ ಗೇಟ್ ಬಳಿ ಇಂದು ಬೆಳಗ್ಗೆ ನಡೆದಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ವೆಸ್ಟ್ ಎಳೇರಿಯ ಎಂಬಲ್ಲಿನ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸೋಲಾರ್ ದೀಪ ಅಳವಡಿಸಲು ಹಾಕಲಾಗಿದ್ದ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿದ್ದ ಫೈಝಲ್, ಆಯಿಷಾ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಫೈಝಲ್ ಗಲ್ಫ್ ನಿಂದ ಆಗಮಿಸಿದ್ದು, ಅವರನ್ನು ಕರೆದುಕೊಂಡು ಬರುತ್ತಿದ್ದಾಗ […]

ಕಾರು ಹಾಗೂ ಟ್ರಕ್ ಡಿಕ್ಕಿ: ನಾಲ್ವರು ಸ್ಥಳದಲ್ಲೇ ದಾರುಣ ಸಾವು

Wednesday, January 4th, 2017
Car-truck-collision

ಮಂಗಳೂರು: ಬೆಳ್ಳಂಬೆಳಗ್ಗೆ ಕಾರು ಹಾಗೂ ಟ್ರಕ್ ನಡುವೆ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ತಂದೆ, ತಾಯಿ, ಮಗ ಹಾಗೂ ಓರ್ವ ಯುವಕ ಸೇರಿದಂತೆ ಒಟ್ಟು ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಇಲ್ಲಿನ ಮಂಜೇಶ್ವರದ ಎ.ಜೆ ಆಂಗ್ಲ ಮಾಧ್ಯಮ ಶಾಲಾ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ 4ರ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೇರಳದ ತ್ರಿಶೂರು ನಿವಾಸಿಗರಾದ ಡಾ. ರಾಮನಾರಾಯಣ ಸಿಕೆ (52) ಪತ್ನಿ ವತ್ಸಲ, ಮಗ ರಂಜಿತ್‌ (20) ಮತ್ತು […]

ಮೋದಿ ಹೆಸರಿದ್ದ ಅನುಮಾನಾಸ್ಪದ ಕಾರು ತಡೆದ ಸ್ಥಳೀಯರು

Saturday, August 13th, 2016
Modi-vichar-manch

ಮುಳ್ಳೇರಿಯ: ‘ನರೇಂದ್ರ ಮೋದಿ ವಿಚಾರ್ ಮಂಚ್’ ಎಂಬ ಬೋರ್ಡ್ ತೂಗಿಸಿ ಬಂದ ಕಾರನ್ನು ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ತಡೆದ ಘಟನೆ ಗುರುವಾರ ಮುಳ್ಳೇರಿಯಾದಲ್ಲಿ ನಡೆದಿದೆ. ಕಾಸರಗೋಡು ಆರ್‌ಟಿಒ ಕಛೇರಿ ಯಲ್ಲಿ ನೋಂದಾಯಿಸಲ್ಪಟ್ಟ ಕಾರಿನಲ್ಲಿ ನರೇಂದ್ರ ಮೋದಿ ವಿಚಾರ್ ಮಂಚ್, ಕೇರಳ ಸ್ಟೇಟ್ ಪ್ರೆಸಿಡೆಂಟ್ ‘ಯುವ’ ಎಂದು ಬೋರ್ಡ್ ತೂಗಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಈ ಕಾರು ಮುಳ್ಳೇರಿಯ ಪರಿಸರದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಕಾರನ್ನು ತಡೆದು ಹಿಡಿಯಲಾಯಿತು. ಕಾರಿನಲ್ಲಿದ್ದ ಚೆನ್ನೈ ನಿವಾಸಿ ರಾದಾ ಮುಹಮ್ಮದ್ ನನ್ನು […]