ಕಾರ್ಯಕ್ಷಮತೆಯನ್ನು ಅಧ್ಯಯನ ಮಾಡಲು ಕರಾರಸಾ ನಿಗಮಕ್ಕೆ ಟಾಟಾ ಮೋಟಾರ್ಸ್ ಉಚಿತವಾಗಿ ಬಿ ಎಸ್ -6 ಚಾಸಿಸ್ ವಿತರಣೆ

Thursday, August 5th, 2021
bmtc

ಬೆಂಗಳೂರು : ಕರಾರಸಾ ನಿಗಮಕ್ಕೆ ಟಾಟಾ ಮೋಟಾರ್ಸ್ ರವರು ಉಚಿತವಾಗಿ ಬಿಎಸ್ -6 ಚಾಸಿಸ್ ಅನ್ನು ಉಚಿತವಾಗಿ ಕಾರ್ಯಕ್ಷಮತೆಯನ್ನು ಅಧ್ಯಯನ ಮಾಡಲು ನೀಡಿರುತ್ತಾರೆ. ಬಿಎಸ್ -6 ವಾಹನದ ಕಾರ್ಯಾಚರಣೆಯನ್ನು ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಮಾಡಲಾಗುತ್ತಿದೆ. ಈ ಚಾಸಿಸ್ನ ಅಂದಾಜು ವೆಚ್ಚ ರೂ. 27 ಲಕ್ಷಗಳಾಗಿದೆ. ಇದು ಬಿಎಸ್ – 6 ಮಾದರಿಯ ಚಾಸ್ಸಿಯಾಗಿದ್ದು, 4 ಸಿಲಿಂಡರ್, 5 ಲೀ 180 ಎಚ್ಪಿ ಇಂಜಿನ್ ಆಗಿರುತ್ತದೆ. ಇದರ ವೀಲ್ಬೇಸ್ 224″ ಇರುತ್ತದೆ. ಹಾಗೂ ಬಿಎಸ್ -4 ಗೆ […]

ಸಚಿವರ ಉಪಸ್ಥಿತಿಯಲ್ಲಿಕೊರೋನಾ ನಿರ್ಮೂಲನೆಗಾಗಿ ಧನ್ವಂತರಿ ಹೋಮ

Thursday, June 3rd, 2021
Danwantari Homa

ಬೆಂಗಳೂರು  :  ಬೆಂಗಳೂರಿ‌ನ ಕೆಂಗೇರಿ ಉಪನಗರ ದಲ್ಲಿರುವ ಗಾಯತ್ರಿ ಮಂದಿರದಲ್ಲಿ ಕೆಂಗೇರಿ ಬ್ರಾಹ್ಮಣರ ಸಂಘದ ವತಿಯಿಂದ ಲೋಕ ಕಲ್ಯಾಣ ಹಾಗೂ ಕೊರೋನಾ ನಿರ್ಮೂಲನೆಗಾಗಿ ಧನ್ವಂತರಿ ಹೋಮ ಮಾಡಲಾಗಿದೆ. ಸಚಿವ ಎಸ್‌ ಟಿ ಸೋಮಶೇಖರ್ ಉಪಸ್ಥಿತಿಯಲ್ಲಿ ಕೊರೋನಾ ನಿರ್ಮೂಲನೆಗಾಗಿ ಹೋಮ ನಡೆಸಲಾಗಿದೆ.  ಹೋಮದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಭಾಗಿದ್ದರು,

ಬೆಂಗಳೂರಿನ ಕೆಂಗೇರಿ ಸ್ಯಾಟಲೈಟ್​ ಟೌನ ಸಂತ ಫ್ರಾನ್ಸಿಸ್​ ಅಸೀಸಿ ಚರ್ಚ್​ ಮೇಲೆ ದುಷ್ಕರ್ಮಿಗಳ ದಾಳಿ

Tuesday, January 21st, 2020
santa-prancis

ಬೆಂಗಳೂರು : ನಗರದ ಕೆಂಗೇರಿ ಸ್ಯಾಟಲೈಟ್ ಟೌನ ಸಂತ ಫ್ರಾನ್ಸಿಸ್ ಅಸೀಸಿ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ. ಚರ್ಚ್ ಒಳಗೆ ನುಗ್ಗಿದ ಕೆಲವು ಕಿಡಿಗೇಡಿಗಳು, ಗಾಜಿನ ಆವರಣವನ್ನು ಪುಡಿಪುಡಿ ಮಾಡಿದ್ದು, ಕೆಲವು ಧಾರ್ಮಿಕ ವಸ್ತುಗಳ ಮೇಲೆ ದಾಳಿ ನಡೆಸಿದ್ದಾರೆ. ಯಾರು ಯಾವಾಗ ಈ ಘಟನೆ ಮಾಡಿದ್ದಾರೆ ಎಂಬುದು ಇನ್ನು ಬೆಳಕಿಗೆ ಬಂದಿಲ್ಲ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚ್ನ ಗುರು ಫಾ.ಸತೀಶ್ ಅವರಿಂದ ಮಾಹಿತಿ […]

ನೆಟ್ಟಣ : ರೈಲಿನಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪಿ ಬಂಧನ

Thursday, October 24th, 2019
mangu

ಕಡಬ : ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪಿಯನ್ನು ಹಾಗೂ ಆತನ ಜೊತೆಗಿದ್ದ ಎನ್ನಲಾದ ಮತ್ತೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರದಂದು ಸುಬ್ರಹ್ಮಣ್ಯ ರೋಡ್ – ಮಂಗಳೂರು ರೈಲಿನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಬೆಂಗಳೂರಿನ ಕೆಂಗೇರಿ ನಿವಾಸಿ ಮಂಜು(27) ಎಂದು ಗುರುತಿಸಲಾಗಿದೆ. ನೆಟ್ಟಣದಿಂದ ಮಂಗಳೂರಿಗೆ ತೆರಳುತ್ತಿದ್ದ ರೈಲಿನ ಮಹಿಳಾ ಬೋಗಿಗೆ ಹತ್ತಿದ ಆರೋಪಿಯು ಮಹಿಳೆ ಒಬ್ಬರೇ ಇರುವುದನ್ನು ಕಂಡು ಮಾನಭಂಗಕ್ಕೆ ಯತ್ನಿಸಿದ್ದು, ಈ ವೇಳೆ ಮಹಿಳೆಯು ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದಾರೆ. ತಕ್ಷಣವೇ […]

ಹುಡುಗಿಯರಿಗೆ ಚಾಕು ತೋರಿಸಿ ದರೋಡೆ ಮಾಡುತ್ತಿದ್ದ ಆರೋಪಿ ಬಂಧನ!

Thursday, September 20th, 2018
arrested

ಬೆಂಗಳೂರು: ಒಂಟಿಯಾಗಿ ತೆರಳುವ ಹುಡುಗಿಯರನ್ನು ಟಾರ್ಗೆಟ್ ಮಾಡಿ ಚಾಕು ತೋರಿಸಿ ದರೋಡೆ ಮಾಡುತ್ತಿದ್ದ ಕಳ್ಳನನ್ನು ಕೆಂಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ಸರ್ಕಲ್ ನಿವಾಸಿ ದಿನೇಶ್ ಬಂಧಿತ ಆರೋಪಿ. ಈತ ಬೆಂಗಳೂರಿನಲ್ಲಿರುವ ಉತ್ತರ ಭಾರತ ಮೂಲದ ಯುವತಿಯರಿಗೆ ಚಾಕು ತೋರಿಸಿ ದರೋಡೆ ಮಾಡುತ್ತಿದ್ದ. ಇದನ್ನು ಸಾರ್ವಜನಿಕರು ನೋಡಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಕೆಂಗೇರಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.