Blog Archive

ಎ.2ರಿಂದ ಉಳ್ಳಾಲ ದರ್ಗಾದಲ್ಲಿ 20ನೇ ಉರೂಸ್‌ ನೇರ್ಚೆ

Thursday, April 2nd, 2015
ullal Uroos

ಉಳ್ಳಾಲ: ಅಸಯ್ಯಿದ್‌ ಮುಹಮ್ಮದ್‌ ಶರೀಫ‌ುಲ್‌ ಮದನಿ (ಖ.ಸಿ.) ತಂಙಳ್‌ ಅವರ 423ನೇ ವಾರ್ಷಿಕ ಮತ್ತು 20ನೇ ಪಂಚವಾರ್ಷಿಕ ಉರೂಸ್‌ ನೇರ್ಚೆ ಕಾರ್ಯಕ್ರಮ ಎ. 2ರಿಂದ 26ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಉಳ್ಳಾಲ ದರ್ಗಾ ವಠಾರದಲ್ಲಿರುವ ತಾಜುಲ್‌ ಉಲಮಾ ವೇದಿಕೆಯಲ್ಲಿ ಜರಗಲಿದೆ ಎಂದು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್‌. ಹಂಝ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಎ. 2ರಂದು ಪೂರ್ವಾಹ್ನ 11 ಗಂಟೆಗೆ ನವೀಕೃತ ಮಸೀದಿ ಉದ್ಘಾಟನೆ ಉಳ್ಳಾಲ ಖಾಝಿ ಅಸ್ಸಯ್ಯದ್‌ ಪಝಲ್‌ ಕೋಯಮ್ಮ ತಂಙಳ್‌ ಅಲ್‌ ಬುಖಾರಿ ನೇತೃತ್ವದಲ್ಲಿ […]

ಮುಡಿಪು : ಪ್ರವಾಸದ ಬಸ್ಸಿಗೆ ಮತ್ತು ಮಸೀದಿಗೆ ಕಲ್ಲು ತೂರಾಟ, 6 ಮಂದಿಯ ಬಂಧನ

Tuesday, March 17th, 2015
Mudipu School

ಉಳ್ಳಾಲ: ಮುಡಿಪು ಘಟನೆಗೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಿರುವ ಕೊಣಾಜೆ ಪೊಲೀಸರು ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮುಡಿಪು ಕಾಲೇಜಿನ ಪ್ರವಾಸದ ವಿಚಾರದಲ್ಲಿ ಹಿಂದೂ ಸಂಘಟನೆಗಳ ನಡೆಸಿದ್ದ ಪ್ರತಿಭಟನೆ ಬಳಿಕ ಅಹಿತಕರ ಘಟನೆಗಳಿಗೆ ಕಾರಣವಾಗಿತ್ತು. ಸಂಬಾರ್‌ತೋಟ ಬಳಿಯ ಮಸೀದಿಗೆ ಕಲ್ಲು ತೂರಾಟದ ವಿಚಾರದಲ್ಲಿ ಕಾರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಬಂಧಿತರನ್ನು ರಮೇಶ್‌ ತಿಲಕ್‌, ಹರಿಪ್ರಸಾದ್‌, ಪ್ರವೀಣ್‌, ದಿನೇಶ್‌, ವಿವೇಕಾನಂದ ಎಂಬವರಾಗಿದ್ದು, ಇವರು ಮಂಚಿ ಮತ್ತು ಮುಡಿಪುವಿನ […]