ಕೊರೊನಾ 19- ವಿದ್ಯಾರ್ಥಿಯೊಬ್ಬ ಗೆಳೆಯನನ್ನು ಸೂಟ್ ಕೇಸಿನಲ್ಲಿ ತುಂಬಿಸಿ ರೂಮಿಗೆ ತಂದ !

Sunday, April 12th, 2020
suit case

ಮಂಗಳೂರು: ನಗರದ ಆರ್ಯಸಮಾಜ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ವಿದ್ಯಾರ್ಥಿಯೊಬ್ಬ ಗೆಳೆಯ ನನ್ನು ಸೂಟ್ ಕೇಸಿನಲ್ಲಿ ತುಂಬಿಸಿ ತನ್ನ ರೂಮಿಗೆ ತಂದ ಘಟನೆ ಭಾನುವಾರ ನಡೆದಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ  ನಗರದ ಆರ್ಯಸಮಾಜ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ  ವಾಸ್ತವ್ಯ ಇರುವವರು ಹೊರತುಪಡಿಸಿ ಇತರರಿಗೆ ಪ್ರವೇಶ ನಿರಾಕರಿಸಲಾಗಿತ್ತು. ವಿದ್ಯಾರ್ಥಿ ಮಾತ್ರ ತನ್ನ ಗೆಳೆಯನನ್ನು ರೂಮಿಗೆ ಕರೆತರುತ್ತೇನೆ ಎಂದು ಚಾಲೆಂಜ್ ಮಾಡಿದ್ದ. ಅಪಾರ್ಟ್ ಮೆಂಟ್ ನವರು ಬಿಡದೆ ಇದ್ದರು ಯುವಕ ರವಿವಾರ ಬೆಳಗ್ಗೆ ತನ್ನ ಗೆಳೆಯನನ್ನು ಸೂಟ್ ಕೇಸಿನಲ್ಲಿ ತುಂಬಿಸಿ ರೂಮಿಗೆ ಕೊಂಡೊಯ್ಯುವ ಪ್ರಯತ್ನ […]

ಮಂಗಳೂರು : ಸಲೂನ್ ನಲ್ಲಿ ವೇಶ್ಯಾವಟಿಕೆ, ಐವರು ಹುಡುಗಿಯರ ರಕ್ಷಣೆ

Thursday, October 31st, 2019
emblish saloon

ಮಂಗಳೂರು :  ನಗರದ ಕಂಕನಾಡಿಯ ಎಂಪೋರಿಯಂ ವಾಣಿಜ್ಯ ಸಂಕೀರ್ಣ ದಲ್ಲಿರುವ ಎಂಬಲ್ಲಿಸ್ ಸಲೂನ್ ಮತ್ತು ಸ್ಪಾ ಎಂಬ ಹೆಸರಿನಲ್ಲಿ  ವೇಶ್ಯಾವಟಿಕೆ ನಡೆಯುತಿದ್ದ ಇಬ್ಬರನ್ನು ಕದ್ರಿ ಪೊಲೀಸರು ಗುರುವಾರ (31/10/19 ರಂದು) ಬಂಧಿಸಿದ್ದಾರೆ. ಬಂಧಿತ ಇಬ್ಬರು ಪಿಂಪ್ ಗಳನ್ನು ವಾಲಿದ್ ಖಾನ್ 34 ವರ್ಷ, ವಾಸ ಮಂಗಳಾದೇವಿ ಮಂಗಳೂರು ,  ಇಸ್ತಿಕಾರ್ 38, ವರ್ಷ, ಉತ್ತರ ಪ್ರದೇಶ. ಮಹಿಳಾ ಪಿಂಪ್ ಶೀಮತಿ ವಿನೋಧ ತಲೆಮರೆಸಿಕೊಂಡಿರುತ್ತಾರೆ. ಇವರ ವಿರುದ್ಧ ( ಮಹಿಳಾ ಪಿಂಪ್ ವಿನೋಧ ಈ ಹಿಂದೆ ಕದ್ರಿ ಠಾಣಾ ಮೊಕದ್ದಮೆ ಸಂಖ್ಯೆ […]

ಜೆ.ಆರ್.ಲೋಬೋಯಿಂದ ಡೆಬಿಟ್ ಕಾರ್ಡ್ ಮಾಹಿತಿ… ಖಾತೆಯಿಂದಲೇ 49,000 ರೂ. ಲಪಟಾ!

Saturday, July 7th, 2018
j-r-lobo

ಮಂಗಳೂರು: ಮಾಜಿ ಶಾಸಕ ಜೆ.ಆರ್.ಲೋಬೋ ಅವರ ಡೆಬಿಟ್ ಕಾರ್ಡ್ ಮಾಹಿತಿ ಪಡೆದ ಖದೀಮನೋರ್ವ, ಅವರ ಬ್ಯಾಂಕ್ ಖಾತೆಯಿಂದಲೇ 49,000 ರೂ. ಲಪಟಾಯಿಸಿದ್ದಾನೆ. ಲೋಬೋ ಅವರ ಮೊಬೈಲ್ಗೆ ವ್ಯಕ್ತಿಯೋರ್ವ ಕರೆ ಮಾಡಿ ಸ್ಟೇಟ್ ಬ್ಯಾಂಕಿನಿಂದ ಮಾತನಾಡುವುದಾಗಿ ಸುಳ್ಳು ಹೇಳಿದ್ದಾನೆ. ನಿಮ್ಮ ಖಾತೆಯನ್ನು ಅಪ್ಡೇಟ್ ಮಾಡುತ್ತೇನೆಂದು ನಂಬಿಸಿದ್ದ ಆತ ಬಳಿಕ ಮಾಜಿ ಶಾಸಕರ ಎಟಿಎಂ ಕಾರ್ಡ್ನ ಒಟಿಪಿ ನಂಬರ್ ಪಡೆದು ಒಟ್ಟು 49,000 ರೂ. ಹಣವನ್ನು ಮೂರು ಕಂತುಗಳಾಗಿ ಡ್ರಾ ಮಾಡಿಕೊಂಡಿದ್ದಾನೆ. ವಂಚಕನ ಮಾತನ್ನು ನಂಬಿದ ಲೋಬೋ ಅವರು ಪಿನ್ […]

ಪಂಪವೆಲ್ಲ್ ಬಳಿ ಭೀಕರ ಅಪಘಾತ

Monday, January 1st, 2018
pumpwell

ಮಂಗಳೂರು: ಹೊಸ ವರ್ಷದ ಸ್ವಾಗತದ ಆಚರಣೆ ಜೋರಾಗಿದ್ದ ಮಂಗಳೂರಿ‌ನಲ್ಲಿ, ಐವರಿದ್ದ ಟಾಟ ಸುಮೋ ವಾಹನ ರಸ್ತೆ ಮಧ್ಯದಲ್ಲೇ ಪಲ್ಟಿಯಾಗುವ ಮೂಲಕ ಹೊಸ ವರ್ಷಕ್ಕೆ ಅಪಘಾತದ ಸ್ವಾಗತ ದೊರೆತಿದೆ. ನಗರದ ಪಂಪ್ ವೆಲ್ ಕರ್ಣಾಟಕ ಬ್ಯಾಂಕ್‌ ಎದುರುಗಡೆ ಕುಂದಾಪುರದಿಂದ ಪಂಪ್ ವೆಲ್ ಕಡೆಗೆ ಬರುತ್ತಿದ್ದ ಟಾಟ ಸುಮೋ ವಾಹನ ಎದುರುಗಡೆಯಿಂದ ವಿರುದ್ಧ ಧಿಕ್ಕಿನಲ್ಲಿ ಬಂದ ಬೈಕನ್ನು ತಪ್ಪಿಸುವ ಧಾವಂತದಲ್ಲಿ ರಸ್ತೆ ಮಧ್ಯವೇ ಪಲ್ಟಿಯಾಗಿದೆ. ಸುಮೋ ವಾಹನದಲ್ಲಿ ಕೇರಳ, ಹಾಸನ, ಚಿಕ್ಕಮಗಳೂರು ನಿವಾಸಿಗಳಾದ ಮಂಜು, ಸುಧೀಶ್, ಶಂಕರ್ ಸೇರಿದಂತೆ ಇನ್ನಿಬ್ಬರು […]

ಕಂಕನಾಡಿ ನಿರ್ಮಾಣ ಹಂತದ ಕಟ್ಟಡದಲ್ಲಿ ಇಬ್ಬರು ಯುವಕರ ಶವ ಪತ್ತೆ

Thursday, February 16th, 2017
kankanady

ಮಂಗಳೂರು: ನಗರದ ಕಂಕನಾಡಿ ಬೈಪಾಸ್ ನಲ್ಲಿನ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಸುಮಾರು 40 ವರ್ಷ ಪ್ರಾಯದ ಇಬ್ಬರು ಅಪರಿಚಿತ ಪುರುಷರ ಮೃತದೇಹ ಭಾಗಶ: ಕೊಳೆತ ಸ್ಥಿತಿಯಲ್ಲಿ ಬುಧವಾರದಂದು ಪತ್ತೆಯಾಗಿವೆ. ಮೂರು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಇದು ಆತ್ಮಹತ್ಯೆಯೋ, ಕೊಲೆಯೋ ಇನ್ನು ತಿಳಿದು ಬಂದಿಲ್ಲ. ಕಟ್ಟಡದ ಆರನೇ ಮಹಡಿಯಲ್ಲಿ ಅಂಗಾತ ಮಲಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿವೆ. ಶವದ ಬಳಿ ಮರದ ದೊಣ್ಣೆಗಳೂ ಪತ್ತೆಯಾಗಿವೆ. ಕಟ್ಟಡದ ಕಾಮಗಾರಿ ಕಳೆದ ಕೆಲ ವರ್ಷಗಳಿಂದ ಸ್ಥಗಿತಗೊಂಡಿದೆ. ಸ್ಥಳಕ್ಕೆ ಆಗಮಿಸಿರುವ ಕದ್ರಿ ಪೊಲೀಸರು […]

ಭಜನಾ ಮಂದಿರಕ್ಕೆ ನುಗ್ಗಿದ ಕಳ್ಳರು, ಬೆಳ್ಳಿ ಪ್ರಭಾವಳಿ ಸಹಿತ 2.74 ಲಕ್ಷ ರೂ. ವೌಲ್ಯದ ಸೊತ್ತು ಕಳವು

Monday, August 1st, 2011
Rama bajana-Mandhir/ ರಾಮ ಭಜನಾ ಮಂದಿರಕ್ಕೆ ನುಗ್ಗಿದ ಕಳ್ಳರು

ಮಂಗಳೂರು : ಯೆಯ್ಯಾಡಿ ಸಮೀಪದ ಶರ್ಬತ್‌ಕಟ್ಟೆ ಬಳಿ ಇರುವ ಶ್ರೀರಾಮ ಭಜನಾ ಮಂದಿರದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಬೆಳ್ಳಿ ಮತ್ತು ಚಿನ್ನಾಭರಣ ,ಕಾಣಿಕೆ ಹುಂಡಿಯ ನಗದು ಸೇರಿದಂತೆ ಒಟ್ಟು 2.74 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ದೋಚಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಭಜನಾ ಮಂದಿರದ ಹೊರ ಬಾಗಿಲಿನ ಬೀಗ ಮುರಿದ ಕಳ್ಳರು ಗರ್ಭಗುಡಿಯ ಕಿಟಕಿಯ ಸರಳು ಬಗ್ಗಿಸಿ ಒಳ ನುಗ್ಗಿದ್ದಾರೆ. ರಾಮದೇವರ ಮೂರ್ತಿಗೆ ಅಳವಡಿಸಿದ 2 ಕೆಜಿ ಬೆಳ್ಳಿ ಪ್ರಭಾವಳಿ, ಅರ್ಧ ಕೆಜಿ […]