ಮಾಸ್ಕ್ ಧರಿಸಲು ನಿರಾಕರಿಸಿದ ವೈದ್ಯ, ಸಾಂಕ್ರಾಮಿಕ ಕಾಯ್ದೆಯಡಿ ಪ್ರಕರಣ ದಾಖಲು

Wednesday, May 19th, 2021
Srinivasa kakkilaya

ಮಂಗಳೂರು : ಕದ್ರಿಯ ಜಿಮ್ಮಿಸ್ ಸೂಪರ್ ಮಾರ್ಕೆಟ್‌ನಲ್ಲಿ ಕೊರೊನಾ ನಿಯಮವನ್ನು ಉಲ್ಲಂಘಿಸಿ ಮಾಸ್ಕ್ ಧರಿಸಲು ನಿರಾಕರಿಸಿದಕ್ಕೆ ಕದ್ರಿ ಪೊಲೀಸ್ ಠಾಣೆಯಲ್ಲಿ ಸಾಂಕ್ರಾಮಿಕ ಕಾಯ್ದೆಯಡಿ ಡಾ.ಶ್ರೀನಿವಾಸ ಕಕ್ಕಿಲಾಯ ವಿರುದ್ಧ ಪ್ರಕರಣ ದಾಖಲಾಗಿದೆ. ಬುಧವಾರ ಬೆಳಿಗ್ಗೆ 8.45 ರ ಸುಮಾರಿಗೆ ಸೂಪರ್‌ ಮಾರ್ಕೆಟ್‌ಗೆ ಡಾ.ಶ್ರೀನಿವಾಸ್ ಕಕ್ಕಿಲಾಯ ಮಾಸ್ಕ್ ಧರಿಸದೇ ಬಂದಿದ್ದರು, ಸೂಪರ್ ಮಾರ್ಕೆಟ್‌ನಲ್ಲಿರುವಾಗ ಮಾಸ್ಕ್ ಧರಿಸದಿದ್ದಾಗ ದಯವಿಟ್ಟು ಮಾಸ್ಕ್ ಧರಿಸಿ, ಇಲ್ಲಿ ಎಲ್ಲರಿಗೂ ಒಂದೇ ನಿಯಮ ಎಂದು ಸಿಬ್ಬಂದಿಯೊಂಬರು ಹೇಳಿದಕ್ಕೆ ವಾಗ್ವಾದಕ್ಕೆ ಇಳಿದ ವೈದ್ಯ ಮಾಸ್ಕ್ ಧರಿಸಲು ನಿರಾಕರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. […]

ಕದ್ರಿ ಪಾರ್ಕ್​ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನ!

Tuesday, November 27th, 2018
Kasaragod-lovers

ಮಂಗಳೂರು: ನಗರದ ಕದ್ರಿ ಪಾರ್ಕ್ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಸಂಜೆ ನಡೆದಿದೆ. ಕಾಸರಗೋಡಿನ ಹರ್ಷಿತ್ ಕುಮಾರ್ ಹಾಗೂ ಆತನ ಪ್ರಿಯತಮೆ ಆತ್ಮಹತ್ಯೆಗೆ ಯತ್ನಿಸಿದವರು. ಇಂದು ಸಂಜೆ ಕದ್ರಿ ಪಾರ್ಕ್ಗೆ ಬಂದ ಪ್ರೇಮಿಗಳಿಬ್ಬರು, ಸ್ವಲ್ಪ ಹೊತ್ತು ಪಾರ್ಕ್ನಲ್ಲಿ ಸುತ್ತಾಡಿ ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ […]

ಡಾ. ಉಲ್ಲಾಸ್ ಕಾರಂತ್‌ ಬಳಸುತ್ತಿದ್ದ ಕಾರಿಗೆ ಬೆಂಕಿ

Friday, December 22nd, 2017
ullas-karanth

ಮಂಗಳೂರು: ವನ್ಯಜೀವಿ ಸಂಶೋಧನಾ ತಜ್ಞ ಡಾ. ಉಲ್ಲಾಸ್ ಕಾರಂತರು ಮಂಗಳೂರಿಗೆ ಬಂದಾಗ ಓಡಾಟಕ್ಕೆ ಬಳಸುತ್ತಿದ್ದ ಕಾರು ನಗರದ ಬೆಸೆಂಟ್ ಜಂಕ್ಷನ್ ಬಳಿ ಗುರುವಾರ ಬೆಂಕಿ ತಗುಲಿ ಭಾಗಶಃ ಸುಟ್ಟುಹೋಗಿದೆ. ಕಾರಿನ ಚಾಲಕ ರಘುರಾಮ್ ಅಪಾಯದಿಂದ ಪಾರಾಗಿದ್ದಾರೆ. ಇದು ಬೆಂಗಳೂರಿನಲ್ಲಿರುವ ಡಾ. ಶಿವರಾಮ ಕಾರಂತರ ಪುತ್ರ ಉಲ್ಲಾಸ್ ಕಾರಂತರ ಮಾಲೀಕತ್ವದ ಕಾರು ಇದಾಗಿದೆ. ಉಲ್ಲಾಸ್ ಕಾರಂತರು ಮಂಗಳೂರಿಗೆ ಬಂದಾಗಲೆಲ್ಲಾ ಓಡಾಟಕ್ಕೆ ಈ ಕಾರನ್ನು ಉಪಯೋಗಿಸುತ್ತಿದ್ದರು. ಚಾಲಕ ರಘುರಾಮ್ ಅವರು ಕಾರಂತರ ಮನೆತನಕ್ಕೆ ಸೇರಿದವರಾಗಿದ್ದು, ಮಂಗಳೂರಿನ ಬೆಸೆಂಟ್ ಕಾಲೇಜು ಸಮೀಪ […]

ಅಪ್ರಾಪ್ತ ಬಾಲಕನ ಮೇಲೆ ಆಸ್ಪತ್ರೆ ಸೆಕ್ಯೂರಿಟಿ ಗಾರ್ಡ್‌ನಿಂದ ಲೈಂಗಿಕ ದೌರ್ಜನ್ಯ

Thursday, July 20th, 2017
Security

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ತಾಯಿಯನ್ನು ನೋಡಿಕೊಳ್ಳಲು ಬಂದಿದ್ದ ಬಾಲಕನಿಗೆ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್‌ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದ್ದು, ಈ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಗೋಳ್ತಮಜಲಿನ ಸೀತಾರಾಮ ಶೆಟ್ಟಿ (35) ಬಂಧಿತ ಆರೋಪಿ. ಸುರತ್ಕಲ್‌ ಕೃಷ್ಣಾಪುರ ಮೂಲದ ಮಹಿಳೆಯೋರ್ವರು ಅಪಘಾತಕ್ಕೊಳಗಾಗಿ ಕಳೆದ 5-6 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರನ್ನು ನೋಡಿಕೊಳ್ಳಲು ಮಂಗಳವಾರ ಅವರ ಅಪ್ರಾಪ್ತ ವಯಸ್ಕ ಪುತ್ರ ಆಸ್ಪತ್ರೆಗೆ ಬಂದಿದ್ದ. ರಾತ್ರಿ ವೇಳೆ ಆತನಿಗೆ ಮಲಗಲು […]

ಹದಿನಾಲ್ಕು ಲಕ್ಷ ಬೆಲೆ ಬಾಳುವ ವಜ್ರದ ಉಂಗುರ ಹಾಗೂ ಬ್ರಿಟಿಷ್ ಪೌಂಡ್ ಕಳವು

Friday, November 25th, 2016
Diamond-ring

ಮಂಗಳೂರು: ಹದಿನಾಲ್ಕು ಲಕ್ಷ ಬೆಲೆ ಬಾಳುವ ವಜ್ರದ ಉಂಗುರ ಹಾಗೂ ಬ್ರಿಟಿಷ್ ಪೌಂಡ್ ಕಳ್ಳತನವಾಗಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯೂಸುಫ್ ಎಂಬುವರು ಲೋಬೊ ಲೇನ್‌ನಲ್ಲಿರುವ ಮನೆ ಮೇವದಲ್ಲಿ ತನ್ನ ಸಹೋದರ ವಹಾಜ್ ಯೂಸುಫ್ ಕೊಠಡಿಯ ಲಾಕರಿನಲ್ಲಿ ಈ ವಜ್ರದ ಉಂಗುರ ಮತ್ತು ಪೌಂಡ್ ಇರಿಸಿದ್ದರು. ಲಾಕರ್‌ನಿಂದ ಈ ವಸ್ತುಗಳು ಕಳ್ಳತನವಾಗಿವೆ. ಯೂಸುಫ್‌ಗೆ ವಜ್ರದುಂಗರ ಮದುವೆ ನಿಶ್ಚಿತಾರ್ಥದಲ್ಲಿ ಗಿಫ್ಟ್‌ ಆಗಿ ದೊರೆತಿತ್ತು ಎಂದಿದ್ದಾರೆ. ಪ್ರಕರಣ ದಾಖಲಿಸಿರುವ ಕದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.