ಕದ್ರಿ ಶ್ರೀ ಮಂಜುನಾಥ ದೇವರಿಗೆ ಸಂಭ್ರಮದ ಬ್ರಹ್ಮಕಲಶಾಭಿಷೇಕ

Saturday, May 11th, 2019
Kadri Manjunatha

ಮಹಾನಗರ: ಕದ್ರಿ ಮಠಾಧೀಶ ಶ್ರೀ ರಾಜಾ ನಿರ್ಮಲ ನಾಥ್‌ ಜೀ ಅವರ ಉಪಸ್ಥಿತಿ ಯಲ್ಲಿ ದೇರೆ ಬೈಲ್‌ ಬ್ರಹ್ಮಶ್ರೀ ವಿಟಲದಾಸ್‌ ತಂತ್ರಿಯವರ ನೇತೃತ್ವದಲ್ಲಿ ಕದ್ರಿ ಶ್ರೀ ಮಂಜುನಾಥ ದೇವರಿಗೆ  ಬೆಳಗ್ಗೆ 7 ಗಂಟೆಯಿಂದಲೇ ಕಲಶಾಭಿಷೇಕ ಪ್ರಾರಂಭವಾಗಿ, 9.35ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ಗುರುವಾರ ನಡೆಯಿತು. ಬಳಿಕ ಪ್ರಾಚೀನ ಮೂರ್ತಿಗಳಿಗೆ ವಿಶೇಷ ಕಲಶಾಭಿಷೇಕ, ಅವಸ್ರುತ ಬಲಿ ಜರಗಿ ಶ್ರೀ ದೇವರಿಗೆ ಮಹಾ ಪೂಜೆ ನಡೆ ಯಿತು. ಸಹಸ್ರಾರು ಭಕ್ತರು ಬ್ರಹ್ಮಕಲ ಶಾಭಿಷೇಕವನ್ನು ಕಣ್ತುಂಬಿಕೊಂಡು ಶ್ರೀ ದೇವರ ದರ್ಶನ ಪಡೆದರು. […]

ಕದ್ರಿ ಶ್ರೀ ಮಂಜುನಾಥ ದೇವರ ವಾರ್ಷಿಕ ಮಹೋತ್ಸವ

Wednesday, January 23rd, 2019
Kadri Manjunataha

ಮಂಗಳೂರು : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಮಹೋತ್ಸವ ಜನವರಿ 15 ರಿಂದ ನಡೆಯುತ್ತಿದ್ದು  ಸಾವಿರಾರು ಭಕ್ತರು ಮಂಜುನಾಥನ ದರ್ಶನ ಪಡೆದರು. ಜಾತ್ರೋತ್ಸವದ  ಅಂಗವಾಗಿ ಮಂಗಳವಾರ ಮನ್ಮಹಾರಥೋತ್ಸವ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ದೇವರ ಉತ್ಸವಮೂರ್ತಿ ರಥಾರೋಹಣವಾಯಿತು. ಸಂಜೆ ಶ್ರೀಮನ್ಮಹಾರಥೋತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ಉತ್ಸವ, ಮಹಾಪೂಜೆ, ಭೂತಬಲಿ ಮತ್ತು ಕವಾಟ ಬಂಧನ ಜರಗಿತು. ಜ. 23ರಂದು ಅವಭೃಥ ಉತ್ಸವ ನಡೆಯಲಿದ್ದು, ಬೆಳಗ್ಗೆ 7 ಗಂಟೆಗೆ ಶ್ರೀ ಮಂಜುನಾಥ ದೇವರ ಕವಾಟೋದ್ಘಾಟನೆ ಮತ್ತು ಮಹಾಪೂಜೆ ಅನಂತರ ತುಲಾಭಾರ […]

ಲೋಕಕಲ್ಯಾಣಾರ್ಥವಾಗಿ ಕದ್ರಿ ಶ್ರೀ ಮಂಜುನಾಥದೇವರಿಗೆ ಸಾಮೂಹಿಕ ಸೀಯಾಳಾಭಿಷೇಕ

Tuesday, June 24th, 2014
siyala abhisheka

ಮಂಗಳೂರು : ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ಕದ್ರಿ ಶ್ರೀ ಮಂಜುನಾಥದೇವರಿಗೆ ಸಾಮೂಹಿಕ ಸೀಯಾಳಾಭಿಷೇಕವು ದೇವಳದ ಮೊಕ್ತೇಸರ ಶ್ರೀ ಎ.ಜೆ. ಶೆಟ್ಟಿ ಅವರ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ನಡೆಯಿತು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮಹಾಬಲ ಮಾರ್ಲ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾರ್ಪೋರೇಟರ್ಗಳಾದ ಅಶೋಕ್ಡಿ.ಕೆ.,ರೂಪಾ ಡಿ. ಬಂಗೇರ, ಜಿ.ಎಸ್.ಬಿ. ಸಮಾಜದ ವಿನೋದ್ ಶೆಣೈ, ದೇವಳದ ವ್ಯವಸ್ಥಾಪನಾ ಸಮಿತಿಯಸದಸ್ಯರು, ಕದ್ರಿ ವಿಶ್ವನಾಥಆಚಾರ್ಯ, ದಿನೇಶ್ದೇವಾಡಿಗ, ಸಾಮಾಜಿಕ ಮುಖಂಡ ಎಂ.ಬಿ. ಪುರಾಣಿಕ್, ಉದಯವಾಣಿ ಬಳಗದ […]