ಅನಾಥಾಶ್ರಮಕ್ಕೆ ದೇಣಿಗೆ ನೀಡಲು ಹೊರಟ ಮಹಿಳೆ ನಿಗೂಢ ನಾಪತ್ತೆ !
Wednesday, March 3rd, 2021ಉಳ್ಳಾಲ : ವಿದೇಶದಿಂದ ಬಂದ ಗರ್ಭಿಣಿ ಮಹಿಳೆಯೊಬ್ಬರು ಕಲ್ಲಾಪುವಿನಲ್ಲಿರುವ ಅನಾಥಾಶ್ರಮ ಶಾಲೆಗೆ ದೇಣಿಗೆ ಹಣವನ್ನು ನೀಡಲು ಹೋಗಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ. ಮಾರ್ಚ್ 2 ರ ಮಂಗಳವಾರ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಗರ್ಭಿಣಿಯನ್ನು ಸೋಮೇಶ್ವರ ಒಂಬತ್ತುಕೆರೆ ನಿವಾಸಿ ಇಬ್ರಾಹಿಂ ಎಂಬವರ ಪತ್ನಿ ಹಿನಾಜ್(25) ಎಂದು ಗುರುತಿಸಲಾಗಿದೆ. ಹಿನಾಜ್ ಪತಿಯೊಂದಿಗೆ ವಿದೇಶದಲ್ಲಿದ್ದರು ಮತ್ತು ಕೆಲವು ವಾರಗಳ ಹಿಂದೆ ತಮ್ಮ ತವರೂರಿಗೆ ಮರಳಿದ್ದರು. ಪ್ರತಿಜ್ಞೆಯನ್ನು ಪೂರೈಸಲು ಹಣವನ್ನು ಹಸ್ತಾಂತರಿಸಲು […]