ಒಂಟಿ ಮಹಿಳೆ ವಾಸಿಸುತ್ತಿದ್ದ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ ಮಾಡಿದ ಅಪರಿಚಿತ

Friday, October 9th, 2020
Robery

ಮಂಗಳೂರು : ವಿಟ್ಲ ಮೇಗಿನಪೇಟೆಯಲ್ಲಿ ಒಂಟಿ ಮಹಿಳೆ ವಾಸಿಸುತ್ತಿದ್ದ ಮನೆಯೊಂದಕ್ಕೆ ನುಗ್ಗಿ ಅಪರಿಚಿತ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನಲ್ಲಿ ಶುಕ್ರವಾರ ಬೆಳಗಿನ ಜಾವ  ನಡೆದಿದೆ. ಮೇಗಿನಪೇಟೆ ನಿವಾಸಿ ಲಲಿತಾ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಅವರ ಮನೆಯ ಮುಂಬಾಗಿಲು ಮೂಲಕ ಅಪರಿಚಿತ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ, ಕೃತ್ಯ ಎಸಗಿದ್ದಾನೆ. ಬಳಿಕ ಬಾಯಿಗೆ ಬಟ್ಟೆ ತುರುಕಿ, ಕೈಕಟ್ಟಿ ಹಾಕಿ ಒಂದು ಜೊತೆ ಕಿವಿಯೋಲೆ ದರೋಡೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ವಿಟ್ಲ ಎಸ್ಐ ವಿನೋದ್ ಕುಮಾರ್ ರೆಡ್ಡಿ ಮತ್ತು […]

ಮುಂಬೈ ನಿವಾಸಿಗೆ ವಂಚಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆ

Wednesday, October 9th, 2013
Anil-Kumar-Sharma

ಮಂಗಳೂರು: ಮುಂಬೈ ನಿವಾಸಿಗೆ ವಂಚಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆಗೈದ ತಂಡವನ್ನು ಬರ್ಕೆ ಪೊಲೀಸರು ಪತ್ತೆ ಹಚ್ಚಿದ್ದು, ಮೂವರನ್ನು ಬಂಧಿಸಿ ದ್ದಾರೆ. ಬಂಧಿತ ಆರೋಪಿಗಳನ್ನು ಮೂಲತಃ ಉತ್ತರ ಪ್ರದೇಶದವನಾದ ಪ್ರಸ್ತುತ ಜಪ್ಪಿನಮೊಗರಿನಲ್ಲಿ ವಾಸವಾ ಗಿರುವ ಅನಿಲ್‌ಶರ್ಮಾ, ವಾಮಂ ಜೂರಿನ ರಿಚಿ ಯಾನೆ ರಿಚ್ಮಂಡ್, ಮತ್ತು ಜೆಪ್ಪು ಕುಡ್ಪಾಡಿಯ ವಿಜೇಶ್ ಕುಮಾರ್ ಯಾನೆ ವಿಜು ಎಂದು ಗುರುತಿಸ ಲಾಗಿದೆ. ಬಂಧಿತರಿಂದ  ಬೆಳ್ಳಿಯ ಆಭರಣಗಳು, ಚಿನ್ನಾಭರಣಗಳು, ನಗದು ಸೇರಿದಂತೆ ಒಟ್ಟು 765000/- ಮೌಲ್ಯದ ಸ್ವತ್ತುಗಳು ಮತ್ತು ಸ್ವಿಫ್ಟ್ ಕಾರು ಹಾಗೂ […]

ಪ್ರವಾಸಿ ಕಾರಿಗೆ ಡಿಕ್ಕಿ ಹೊಡೆಸಿ ಚಿನ್ನಾಭರಣ ದರೋಡೆ ಆರೋಪಿಗಳ ಸೆರೆ

Tuesday, February 5th, 2013
Sulya robbery

ಮಂಗಳೂರು : ಸುಳ್ಯ ತಾಲೂಕಿನ ಕಲ್ಲುಗುಂಡಿ ಎಂಬಲ್ಲಿ ಪ್ರವಾಸಿ ಕಾರಿಗೆ ಡಿಕ್ಕಿ ಹೊಡೆಸಿ ಅದರಲಿದ್ದ ಪ್ರಯಾಣಿಕರ ಚಿನ್ನಾಭರಣವನ್ನು ದರೋಡೆ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಬೆಂಗಳೂರು  ವಿದ್ಯಾರಣ್ಯಪುರದ ತಿಂಡ್ಲು ನಿವಾಸಿಗಳಾದ ಮಂಜುನಾಥ (೨೪), ಚಂದ್ರಶೇಖರ (೨೫), ಮತ್ತು ಶ್ರೀನಿವಾಸ (೨೧), ಬಂಧಿಸಲ್ಪಟ್ಟಿದ್ದು ಇನ್ನೊಬ್ಬ ಆರೋಪಿ ರಮೇಶ್ (೨೭), ತಲೆಮರೆಸಿಕೊಂಡಿದ್ದಾನೆ. ಬೆಂಗಳೂರಿನವರಾದ ಸೋಮವಾರಪೇಟೆಯ ಹೊಸೂರು ಮಾದಾಪುರದ ನಾಗರಾಜ ಎಂಬವರು ತಮ್ಮ ಪತ್ನಿ ಹಾಗೂ ಮಗನೊಂದಿಗೆ ಬೆಂಗಳೂರಿನಿಂದ ಕಾರನ್ನು ಬಾಡಿಗೆಗೆ ಮಾಡಿಕೊಂಡು ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ತೆರಳಿದ್ದರು. […]