ಬಸ್ ನಿರ್ವಾಹಕ ದೇವದಾಸ್‌ರವರ ನಿವಾಸಕ್ಕೆ ಕೆಎಸ್ಆರ್‌ಟಿಸಿ ವರ್ಕರ್ಸ್‌ ಯೂನಿಯನ್‌ ಪದಾಧಿಕಾರಿಗಳು ಭೇಟಿ

Friday, October 7th, 2016
devadas-home

ಮಂಗಳೂರು: ಯುವತಿಯೊಂದಿಗೆ ಚಿಲ್ಲರೆ ವಿಚಾರದಲ್ಲಿ ನ್ಯಾಯ ಸಿಗದೆ ಅವಮಾನಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಬಸ್ ನಿರ್ವಾಹಕ ದೇವದಾಸ್‌ರವರ ನಿವಾಸಕ್ಕೆ ಕೆಎಸ್ಆರ್‌ಟಿಸಿ ವರ್ಕರ್ಸ್‌ ಯೂನಿಯನ್‌ ಪದಾಧಿಕಾರಿಗಳು ಮತ್ತು ಆಲಂಕಾರು ವ್ಯಾಪ್ತಿಯ ಸಾಮಾಜಿಕ ಕಾರ್ಯಕರ್ತರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ವೇಳೆ ದೇವದಾಸ್‌ರವರ ಪತ್ನಿ ಅಂಗನವಾಡಿ ಕಾರ್ಯಕರ್ತೆ ಉಷಾ ತನ್ನ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುವಂತೆ ಮನವಿ ಮಾಡಿದರು. ನಾವು ಕೇವಲ ಏಳು ಸೆಂಟ್ಸ್ ಜಾಗದಲ್ಲಿ ಸಣ್ಣ ಮನೆ ಮಾಡಿ ಪತಿ ದೇವದಾಸ್‌ರವರ ಸಂಪಾದನೆಯಲ್ಲಿ ನಮ್ಮ ಜೀವನ ಸಾಗಿಸುತ್ತಿದ್ದೆವು. […]

ಚಿಲ್ಲರೆ ವಿವಾದದಿಂದ ಮನನೊಂದು ನದಿಗೆ ಹಾರಿದ ಕಂಡೆಕ್ಟರ್‌: ಇನ್ನೂ ಪತ್ತೆಯಾಗದ ಮೃತದೇಹ

Tuesday, September 27th, 2016
condacter

ಸುಬ್ರಹ್ಮಣ್ಯ: ಯುವತಿಯೊಂದಿಗಿನ ಚಿಲ್ಲರೆ ವಿವಾದದಿಂದ ಮನನೊಂದು ನದಿಗೆ ಹಾರಿದ ಕೆಎಸ್ಸಾರ್ಟಿಸಿ ಬಸ್‌ ಕಂಡೆಕ್ಟರ್‌ ಮಂಗಳೂರು ಗುರುಪುರ ನಿವಾಸಿ ದೇವದಾಸ್‌ (47) ಅವರಿಗಾಗಿ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ಎರಡನೇ ದಿನವಾದ ಸೋಮವಾರವೂ ತೀವ್ರ ಶೋಧ ನಡೆಯಿತು. ಆದರೆ ದೇವದಾಸ್‌ ಅವರ ಸುಳಿವು ಲಭಿಸಿಲ್ಲ. ಸೋಮವಾರ ಮುಂಜಾನೆಯೇ ಪುತ್ತೂರಿನ ಅಗ್ನಿಶಾಮಕ ದಳ ಮತ್ತು ಗುಂಡ್ಯದ 15 ಮಂದಿ ನುರಿತ ಈಜುಗಾರನ್ನು ಒಳಗೊಂಡ ಮುಳುಗು ತಜ್ಞರ ತಂಡ ಕುಮಾರಧಾರೆಯಲ್ಲಿ ಮತ್ತೆ ಕಾರ್ಯಾಚರಣೆ ನಡೆಸಿತು. ಸಂಜೆ 6 ಗಂಟೆಯ ತನಕ ನಿರಂತರವಾಗಿ ಅಗ್ನಿ […]

ಹೆಸರಾಂತ ಗಾಯಕ ದೇವದಾಸ್ ಬಿ.ಬಿಲ್ಲವ ನಿಧನ

Saturday, March 7th, 2015
Devadas

ಮುಂಬಯಿ : ಬಿಲ್ಲವ ಸೇವಾ ಸಂಘ ಕುಂದಾಪುರ (ರಿ.) ಮುಂಬಯಿ ಇದರ ಸಕ್ರಿಯ ಸದಸ್ಯ, ಮುಂಬಯಿ ಉಪನಗರದ ಭಾಂಡೂಪ್ ನಿವಾಸಿ ಆಗಿದ್ದು ಮೂಲತಃ ಕುಂದಾಪುರ ತಾಲೂಕು ಹಳೆ ಅಳಿವೆಯ ಟಿ.ಎಸ್ ಹೌಸ್ ನಿವಾಸಿ, ಹೆಸರಾಂತ ಗಾಯಕ ದೇವದಾಸ್ ಬಿ.ಬಿಲ್ಲವ (44) ಅವರು ಇತ್ತೀಚೆಗೆ ಹೃದಯಾಘಾತ ವಿಧಿವಶರಾದರು. ಮೃತರು ಡಾ| ರಾಜ್‌ಕುಮಾರ್ ಅವರ ಬಹುತೇಕ ಗಾನ-ಗೀತೆಗಳನ್ನು ಹಾಡುತ್ತಾ ಸಂಗೀತಾಭಿಮಾ ನಿಗಳ ಪ್ರೀತಿ ಪಾತ್ರರಾಗಿದ್ದು, ಅಪ್ಪಟ ಕಲಾಪ್ರೇಮಿ ಆಗಿದ್ದ ಇವರು ಉದಯೋನ್ಮುಖ ಗಾಯಕರಾಗಿ ಹಲವಾರು ಸಭೆ-ಸಮಾರಂಭಗಳಲ್ಲಿ ತಮ್ಮ ಸೊಗಸಾದ ಕಂಠದಿಂದ […]