ಉಡುಪಿ : ಹುಂಜದ ಜೊತೆ ನವಿಲಿನ ಫೈಟ್ ಸಖತ್ ವೈರಲ್

Thursday, July 23rd, 2020
peacock

ಉಡುಪಿ : ಕುಂದಾಪುರದಲ್ಲಿ ವ್ಯಕ್ತಿಯೊಬ್ಬರ‌ ಮನೆ‌ ಮುಂದೆ ನವಿಲು-ಕೋಳಿ ಕಾಳಗ ನಡೆದಿದ್ದು, ಸ್ಥಳೀಯರು ಆಶ್ಚರ್ಯಚಕಿತರಾಗಿ ಈ ದೃಶ್ಯವನ್ನುಸೆರೆ ಹಿಡಿದಿದ್ದಾರೆ.  ಟಗರು, ಬುಲ್, ಕೋಳಿ ಕಾಳಗ ಸಾಮಾನ್ಯ. ಆದರೆ ನವಿಲು ಹುಂಜದ ಜೊತೆ ಕಾಳಗ ಮಾಡಿರುವುದು ಅಲ್ಲಿದ್ದವರಿಗೆ ಆಶ್ಚರ್ಯ ಮೂಡಿಸಿದೆ. ಇನ್ನು ವಯ್ಯಾರಕ್ಕೆ ಹೆಸರಾದ ನವಿಲಿನ ಫೈಟ್ ಹುಂಜದ ಜತೆ ಈಗ ವೈರಲ್ ಆಗಿದೆ. ಹೆಣ್ಣುಕೋಳಿ ಸುತ್ತ ಗಿರಕಿ ಹೊಡೆಯುತ್ತಿದ್ದ ಹುಂಜಕ್ಕೂ ಬೋರ್ ಆಗಿರಬೇಕು. ಮತ್ತೊಂದು ಹುಂಜದ ಜೊತೆಗೆ ಫೈಟ್ ಮಾಡೋದನ್ನ ಬಿಟ್ಟು ನವಿಲಿನ ವಿರುದ್ಧ ಕಾದಟಕ್ಕಿಳಿದಿತ್ತು. ಮಳೆ ಬಂದ್ರೆ […]

ನೀರುಮಾರ್ಗದ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆಗೆ ಬಂದ ನವಿಲು

Wednesday, May 15th, 2019
Peacock

ಮಂಗಳೂರು : ಮಂಗಳೂರು ಹೊರವಲಯದ ನೀರುಮಾರ್ಗದ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉತ್ಸವದ ಸಂದರ್ಭದಲ್ಲಿ ದೇವರಿಗೆ ಅರ್ಪಿಸಿದ ಧ್ವಜಸ್ತಂಭಕ್ಕೆ ತೈಲಧಿವಾಸ ಪೂಜೆಯಲ್ಲಿ ಸುಬ್ರಹ್ಮಣ್ಯನ ವಾಹನ ನವಿಲು ಪ್ರತ್ಯಕ್ಷವಾಗಿ ಭಕ್ತರಲ್ಲಿ ಅಚ್ಚರಿಯನ್ನು ಮೂಡಿಸಿದೆ. ಸೋಮವಾರ ನವಿಲು ಯಾವುದೇ ಅಳುಕಿಲ್ಲದೇ ಭಕ್ತರ ಜೊತೆ ಪೂಜೆಯಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದೆ. ದೇವರ ಪೂಜೆ ಸಂದರ್ಭದಲ್ಲಿ ನವಿಲು ದೇಗುಲದ ಒಳಭಾಗದ ಅಂಗಣದಲ್ಲಿ ಪ್ರದಕ್ಷಿಣೆ ಹಾಕಿದ್ದಲ್ಲದೆ, ಜನರ ಜೊತೆಯೇ ನಡೆದುಬಂದಿದ್ದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ, ಸುಬ್ರಹ್ಮಣ್ಯನಿಗೆ ಗರ್ಭಗುಡಿಯಲ್ಲಿ ಪೂಜೆ ನಡೆಯುತ್ತಿದ್ದಾಗ ಮುಂಭಾಗದಲ್ಲಿ ನವಿಲು ನಿಂತಿರುವುದು […]

ರಾಷ್ಟ್ರ ಪಕ್ಷಿ ನವಿಲನ್ನು ಕೊಂದು ಗರಿಗಳನ್ನು ಮಂಗಳೂರು ನಗರದಲ್ಲಿ ಮಾರಾಟ

Thursday, October 2nd, 2014
ರಾಷ್ಟ್ರ ಪಕ್ಷಿ ನವಿಲನ್ನು ಕೊಂದು ಗರಿಗಳನ್ನು ಮಂಗಳೂರು ನಗರದಲ್ಲಿ ಮಾರಾಟ

ಮಂಗಳೂರು : ರಾಜಸ್ಥಾನ ಮೂಲದ ಕೆಲವೊಂದು ವ್ಯಕ್ತಿಗಳು ಅಲ್ಲಿ ಯಥೇಚ್ಛವಾಗಿ ಸಿಗುವ ನವಿಲುಗಳ ಆಹಾರದಲ್ಲಿ ಅಮಲು ಪದಾರ್ಥಗಳನ್ನು ಬೆರೆಸಿ ಅವುಗಳನ್ನು ಹಿಡಿದು ಕೊಂದು ತಿಂದು ಅವುಗಳ ಗರಿಗಳನ್ನು ದೇಶಾದ್ಯಂತ ಮುಕ್ತವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಪರಿಸರ ಸಂರಕ್ಷಣಾ ಒಕ್ಕೂಟ ತಿಳಿಸಿದೆ. ಮಂಗಳೂರು ನಗರದಲ್ಲಿ ಈಗ ಜಾತ್ರಾ ಸಮಯ ಆದುದರಿಂದ ಈ ರಾಜಸ್ಥಾನದ ಜನರು ಹೊರೆಗಟ್ಟಲೆ ನವಿಲು ಗರಿಗಳನ್ನು ತಂದು ಸಾರ್ವಜನಿಕವಾಗಿ ಮಾರಾಟ ಮಾಡುತ್ತಿದ್ದಾರೆ. ಅವರನ್ನು ವಿಚಾರಿಸಿದರೆ ತಾವುಗಳು ಬಿದ್ದ ಗರಿಗಳನ್ನು ತಂದು ಮಾರಾಟ ಮಾಡುತ್ತಿರುವುದಾಗಿ ತಿಳಿಸುತ್ತಾರೆ. ಇದು […]