ಸಹಪಾಠಿಗಳೊಂದಿಗೆ ಮಾನ್ಯದ ದೇವರಕೆರೆಯ ಕೆರೆಗಿಳಿದ ಯುವಕ ಮೃತ್ಯು

Monday, July 25th, 2016
Shiyasi

ಬದಿಯಡ್ಕ: ಸಹಪಾಠಿಗಳೊಂದಿಗೆ ಮಾನ್ಯದ ದೇವರಕೆರೆಯ ಕೆರೆ ನೀರಿನಲ್ಲಿ ಸ್ನಾನಕ್ಕಿಳಿದ ವೇಳೆ ಯುವಕ ಮುಳುಗಿ ಮೃತಪಟ್ಟಘಟನೆ ಭಾನುವಾರ ನಡೆದಿದೆ. ಮಧ್ಯಾಹ್ನದ ವೇಳೆ ಸ್ನಾನಕ್ಕಿಳಿದು ಕಾಣದಾದ ಯುವಕನ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಎರಿಯಾಲ್ ಎಡಚ್ಚೇರಿಯ ಎ ಎಂ ಮಹಮ್ಮುದ್ ಸೈಫುನ್ನೀಸಾ ದಂಪತಿ ಪುತ್ರ ಶಿಯಾಸಿ(21) ಮೃತಪಟ್ಟ ದುರ್ದೈವಿ. ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕನ ಮೃತದೇಹವನ್ನು ಅಗ್ನಿಶಾಮಕ ದಳದ ಸಹಾಯದಿಂದ ಮೇಲಕ್ಕೆತ್ತಲಾಯಿತು. ರಜಾದಿನ ಆದಿತ್ಯವಾರದಂದು ಸಹಪಾಠಿಗಳೊಂದಿಗೆ ಪುಟ್‌ಬಾಲ್ ಆಡಲು ತೆರಳಿದ್ದ ಶಿಯಾಸ್ ಆಟದ ನಂತರ ಸ್ನಾನ ಮಾಡಲೆಂದು ನೀರಿನ ಕೆರೆಗೆ ಇಳಿದಿದ್ದ ಎನ್ನಲಾಗಿದೆ, […]

ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Wednesday, February 3rd, 2016
satish

ಪೆರ್ಲ: ವಿವಾಹಿತ ಯುವಕನೋರ್ವನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾದ ಘಟನೆ ಒಡ್ಯದಲ್ಲಿ ನಡೆದಿದೆ. ಕುರೆಡ್ಕ ಐತ್ತಪ್ಪ ನಾಯ್ಕರ ಪುತ್ರ ಸತೀಶ(35)ಮೃತದೇಹ ಒಡ್ಯ ಸಮೀಪದ ಮಾಯಿಲಕ್ಕಾನದಲ್ಲಿರುವ ಇವರ ಮನೆಯಲ್ಲಿ ಅಜೀರ್ಣಾವಸ್ಥೆಯಲ್ಲಿ ಪತ್ತೆಯಾಗಿದೆ. ಶರೀರದಲ್ಲಿ ಯಾವುದೇ ಗಾಯಗಳಿಲ್ಲದಿರುವುದರಿಂದ ಮರಣಕ್ಕೆ ಸ್ಪಷ್ಟ ಕಾರಣ ತಿಳಿಯದಿರುವುದರಿಂದ ಉನ್ನತ ವೈದ್ಯಕೀಯ ಪರೀಕ್ಷೆಗೆ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮೃತದೇಹ ಕೊಂಡೊಯ್ಯಲಗಿದೆ. ಸತೀಶ್ ಈ ಹಿಂದೆ ನಲ್ಕದಲ್ಲಿ ಹೋಟೆಲ್ ನಡೆಸುತ್ತಿದ್ದರು. ಮಾಯಿಲಕ್ಕಾನದಿಂದ ಮದುವೆಯಾಗಿ ಪತ್ನಿ ಗೃಹದಲ್ಲಿ ಇವರು ವಾಸಿಸುತ್ತಿದ್ದರು. ಇತ್ತೀಚೆಗೆ ಪತ್ನಿ ಮನೆಯಿಂದ ಸ್ವಲ್ಪ […]