ದನ ಮೇಯಿಸಲು ತೆರಳಿದ್ದ ಬಾಲಕನನ್ನು ತಿಂದು ಹಾಕಿದ ಮೊಸಳೆ

Thursday, December 3rd, 2020
ದನ ಮೇಯಿಸಲು ತೆರಳಿದ್ದ ಬಾಲಕನನ್ನು ತಿಂದು ಹಾಕಿದ ಮೊಸಳೆ

ರಾಯಚೂರು: ದನ ಮೇಯಿಸಲು ತೆರಳಿದ್ದ ಬಾಲಕ ನೀರು ಕುಡಿಯಲು ಕೃಷ್ಣಾ ನದಿಗೆ ಇಳಿದಿದ್ದಾಗ  ಮೊಸಳೆ ತಿಂದು ಹಾಕಿರುವ ಹೃದಯ ವಿದ್ರಾವಕ ಘಟನೆ ರಾಯಚೂರಿನ ಡೊಂಗಾರಾಂಪುರ ಗ್ರಾಮದಲ್ಲಿ ನಡೆದಿದೆ. ಮಲ್ಲಿಕಾರ್ಜುನ (12) ಮೊಸಳೆಗೆ ಬಲಿಯಾದ ಬಾಲಕ. ಬುಧವಾರದಂದು ಮಲ್ಲಿಕಾರ್ಜುನ ತನ್ನ ಸ್ನೇಹಿತರೊಂದಿಗೆ ದನ ಮೇಯಿಸಲು ಕೃಷ್ಣ ನದಿ ದಂಡೆಯತ್ತ ಹೋಗಿದ್ದ. ಊಟ ಮಾಡಿದ ಬಳಿಕ ಬಾಯಾರಿಕೆಯಾದ ಹಿನ್ನೆಲೆ ಕೃಷ್ಣಾ ನದಿಯಲ್ಲಿ ನೀರು‌ ಕುಡಿಯಲು ಮಲ್ಲಿಕಾರ್ಜುನ ನೀರಿಗೆ ಇಳಿದಿದ್ದಾನೆ. ಈ ವೇಳೆ ಬಾಲಕನನ್ನು ಎಳೆದೊಯ್ದ ಮೊಸಳೆ ದೇಹವನ್ನ ಸಂಪೂರ್ಣವಾಗಿ ತಿಂದು ತಲೆ ಬುರುಡೆ […]

ಪ್ರೇಕ್ಷಕನಿಗೆ ಒಗ್ಗದ ‘ಮಲ್ಲಿಕಾರ್ಜುನ’

Thursday, July 14th, 2011
Mallikarjuna/ಮಲ್ಲಿಕಾರ್ಜುನ

ಬೆಂಗಳೂರು : ರವಿಚಂದ್ರನ್ ಪ್ರಥಮ ಬಾರಿಗೆ ಅಪ್ಪ ಮತ್ತು ಮಗನ ದ್ವಿಪಾತ್ರಗಳಲ್ಲಿ ನಟಿಸಿರುವ ‘ಮಲ್ಲಿಕಾರ್ಜುನ’ ಹತ್ತು ವರ್ಷಗಳ ಹಿಂದೆ ತಮಿಳಿನಲ್ಲಿ ಬಂದಿದ್ದ ‘ತವಸಿ’ ಚಿತ್ರದ ರಿಮೇಕ್. ಸಂಭಾಷಣೆಯಿಂದ ಹಿಡಿದು ಎಲ್ಲವನ್ನೂ ಆ ಚಿತ್ರದಿಂದಲೇ ಯಥಾವತ್ತಾಗಿ ತೆಗೆಯಲಾಗಿದೆ. ನಿರ್ದೇಶಕ ಮುರಳಿ ಮೋಹನ್ ಕೂಡ ಮಾಡಿರುವುದು ಅದೇ ನಕಲು. ಹಳ್ಳಿಯ ಪಾಳೇಗಾರರ ವೈಷಮ್ಯದ ಕಥೆ ಹೊಂದಿರುವ ‘ಮಲ್ಲಿಕಾರ್ಜುನ’ದಲ್ಲಿ ರವಿಚಂದ್ರನ್ ಪ್ರಥಮ ಬಾರಿಗೆ ಅಪ್ಪ ಮತ್ತು ಮಗನ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ರವಿಚಂದ್ರನ್ ಚಿತ್ರಗಳಲ್ಲಿ ಕಂಡುಬರುವ ಮೆರುಗು ಇಲ್ಲಿ ಕಿಂಚಿತ್ತೂ ಇಲ್ಲ. ಹಳೆಯ […]