ಪಾಂಡೇಶ್ವರ : ಯುವಕನೋರ್ವ ಆತ್ಮಹತ್ಯೆ

Wednesday, September 11th, 2019
Arun-Raj

ಮಂಗಳೂರು : ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದ ಘಟನೆ ಪಾಂಡೇಶ್ವರದಲ್ಲಿ ನಡೆದಿದೆ. ಮೃತ ಯುವಕನನ್ನು ಅರುಣ್ ರಾಜ್ (31) ಎಂದು ಗುರುತಿಸಲಾಗಿದೆ. ಈತ ಕಳೆದ ಮೂರು ದಿನಗಳ ಹಿಂದೆಯೆ ನಾಪತ್ತೆಯಾಗಿದ್ದ. ಈತ ಮೂಲತಃ ಮೂಡುಬಿದ್ರೆಯನಾಗಿದ್ದು ಯುವಕನ ತಂದೆ ಸಾಗರದಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮನೆಯವರು ಈತ ತಂದೆ ಇದ್ದಲ್ಲಿ ತೆರಳಿರಬಹುದು ಅಂದುಕೊಂಡು ಸುಮ್ಮನಾಗಿದ್ದರು. ಆದರೆ ಈ ನಡುವೆ ಅರುಣ್ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಅರುಣ್ ಯಾರು ವಾಸವಿರದ ತನ್ನ ಪಾಂಡೇಶ್ವರದಲ್ಲಿರುವ ಅಜ್ಜಿಮನೆಗೆ […]

ಸುಳ್ಳು ಸುದ್ದಿ ಆರೋಪ: ‘ಪೋಸ್ಟ್ ಕಾರ್ಡ್’ ಮಹೇಶ್ ವಿಕ್ರಂ ಹೆಗ್ಡೆ ಬಂಧನ

Friday, March 30th, 2018
mahesh-vikram

ಮಂಗಳೂರು : ಸುಳ್ಳು ಸುದ್ದಿ ಪ್ರಕಟಿಸಿದ ಆರೋಪದ ಮೇಲೆ ಪೋಸ್ಟ್ ಕಾರ್ಡ್ ಡಾಟ್ ಕಾಂ ಮಾಲೀಕ ವಿಕ್ರಂ ಹೆಗ್ಡೆಯವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರು ತಮ್ಮ ವೆಬ್ ಸೈಟ್ ನಲ್ಲಿ ಜೈನ ಮುನಿ ಮೇಲೆ ಹಲ್ಲೆ ಎಂಬ ಸುದ್ದಿ ಪ್ರಕಟಿಸಿದ್ದರು. ಆದರೆ ಜೈನ ಮುನಿ, ನಂಜನಗೂಡಿನಲ್ಲಿ ಅಪಘಾತದಿಂದ ಗಾಯಗೊಂಡಿದ್ದು ಅವರ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿರಲಿಲ್ಲ ಎಂದು ಗಪ್ಪಾರ್ ಬೇಗ್ ಎಂಬುವವರು ಕ್ರೈಂ ಸೆಲ್ ಗೆ ನೀಡೀದ್ದ ದೂರಿನ ಮೇಲೆ ಹೆಗ್ಡೆಯನ್ನು ಪೊಲೀಸರು ಬಂಧಿಸಿದ್ದಾರೆ. […]

ಬೇಟೆಗೆ ತೆರಳಿದ್ದ ಯುವಕರಿಬ್ಬರು ನಾಪತ್ತೆ, ಮೂಡಬಿದ್ರೆ ಅರಣ್ಯದಲ್ಲಿ ಶೋಧ

Thursday, March 22nd, 2018
moodbidre

ಮಂಗಳೂರು: ಬೇಟೆಗೆಂದು ತೆರಳಿದ್ದ ಇಬ್ಬರು ಯುವಕರು ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ. ಮೂಡುಬಿದ್ರೆ ನಿವಾಸಿಗಳಾದ ಪ್ರವೀಣ್ ತೌರೋ (33) ಹಾಗೂ ಗ್ರೆಷನ್ (32) ನಾಪತ್ತೆಯಾದವರಾಗಿದ್ದಾರೆ. ಮೂಡುಬಿದ್ರೆಯಿಂದ 10 ಕಿ.ಮೀ ದೂರದ ಕರಿಂಜೆ ಕಾಡಿಗೆ ಸೋಮವಾರ ರಾತ್ರಿ ತೆರಳಿದ್ದರು. ಬೇಟೆಗೆಂದು ತೆರಳಿದ್ದ ಈ ಯುವಕರು ಆ ಬಳಿಕ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಪ್ರವೀಣ್ ಹಾಗೂ ಗ್ರೆಷನ್ ಬೇಟೆಗೆ ತೆರಳುವ ಸಂದರ್ಭದಲ್ಲಿ ಬಳಸಿದ್ದ ಜೀಪ್ ಕರಿಂಜೆ ಕಾಡಂಚಿನಲ್ಲಿ ಪತ್ತೆಯಾಗಿದೆ. ಆದರೆ ಕಾಡಿಗೆ ತೆರಳಿದ್ದ […]

ಮಂಗಳೂರು ವಿವಿಯಲ್ಲಿ ಫೆ.17ರಂದು ದಿಶಾ ಉದ್ಯೋಗ ಪರ್ವ

Tuesday, February 6th, 2018
udyoga

ಮಂಗಳೂರು: ನಿರುದ್ಯೋಗಿ ಯುವಜನತೆಗೆ ನೆರವಾಗಲು ಫೆ.17ರಂದು ಮಂಗಳೂರು ವಿಶ್ವವಿದ್ಯಾಲಯದಲ್ಲಿ ದಿಶಾ ಉದ್ಯೋಗ ಪರ್ವ 2018ನ್ನು ಆಯೋಜಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಶಶಿಕಾಂಥ್ ಸೆಂಥಿಲ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ, ದ.ಕ ಜಿಲ್ಲಾಡಳಿತ, ಸಿ.ಇ.ಒ.ಎಲ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದ್ರೆ ಸಹಭಾಗಿತ್ವದಲ್ಲಿ ಈ ಮೇಳ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಡಿಗ್ರಿ, ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳು ಈ ಮೇಳದಲ್ಲಿ ಭಾಗವಹಿಸಬಹುದು. ಇಂಜಿನಿಯರಿಂಗ್ ಹಾಗೂ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವಂತಿಲ್ಲ […]

ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌!

Saturday, January 27th, 2018
alwas

ಮಂಗಳೂರು: ಮೂಡುಬಿದ್ರೆಯ ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಚನಾ (18) ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಪ್ರಕರಣ ತಿರುವು ಪಡೆದುಕೊಂಡಿದೆ. ಡೆತ್ ನೋಟ್‌ನಲ್ಲಿರುವ ಅಕ್ಷರವಾಗಲೀ, ಸಹಿಯಾಗಲೀ ತಮ್ಮ ಮಗಳದ್ದಲ್ಲ ಎಂದು ರಚನಾ ಹೆತ್ತವರು ಆರೋಪಿಸಿದ್ದಾರೆ. ಇದರಿಂದ ಪ್ರಕರಣದ ಸುತ್ತು ಅನುಮಾನ ಮೂಡಿದೆ. ಐದನೇ ಮಹಡಿಯಿಂದ ಬಿದ್ದಿದ್ದೇ ಆಗಿದ್ದರೆ ರಚನಾ ದೇಹದಲ್ಲಿ ಗಂಭೀರ ಗಾಯಗಳಾಗಬೇಕಿತ್ತು. ಆದರೆ ಅಂತಹ ಯಾವುದೇ ಗುರುತರ ಗಾಯಗಳು ಆಕೆಯ ಮೈಮೇಲೆ ಆಗಿಲ್ಲ. ಅದಲ್ಲದೆ ಆಕೆ ಸರಳುಗಳಿಲ್ಲದ ಕಿಟಕಿಯಿಂದ ಹಾರಿದ್ದಾಳೆ ಎಂದು ಹೇಳುತ್ತಾರೆ. […]