ಡಾ| ದೇವದಾಸ್ ರೈಗೆ ರೋಟರಿ ಅಂತರಾಷ್ಟ್ರೀಯ ಪ್ರದಾನ

Monday, June 21st, 2021
Devadas Rai

ಮಂಗಳೂರು : ರೋಟರಿ ಜಿಲ್ಲಾ 3181ರ 2 ದಿನಗಳ ಅವಧಿಯ ವಾರ್ಷಿಕ ಸಮ್ಮೇಳನ “ಅಭಯ” ತಾ. 19, 20 ಜೂನ್‌ರಂದು ನಗರದ ಎ-1 ಲಾಗಿಕ್ಸ್ ಸಭಾಂಗಣದಲ್ಲಿ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮದ ಮೂಲಕ ಸರಳವಾಗಿ ಜರಗಿತು. ರೋಟರಿ  ಅಂತರಾಷ್ಟ್ರೀಯ ಸಂಸ್ಥೆಯ ನಿರ್ದೇಶಕ ರೋ| ಭರತ್ ಪಾಂಡ್ಯ ಉದ್ಘಾಟಿಸಿದರು. ದೇಶದ ವಿವಿಧ ಪ್ರದೇಶದ ರೋಟರಿ ಸಂಸ್ಥೆಯ ಉನ್ನತ ಪದಾಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಂಸ್ಥೆಯ ಧ್ಯೇಯ, ಉದ್ದೇಶಗಳು, ವಿವಿಧ ಸೇವೆಗಳ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ಅತಿಥಿ ಉಪನ್ಯಾಸಕರಾಗಿ […]

ಪೋಲಿಯೋ ದಿನಾಚರಣೆ: ಪೋಲಿಯೋ ಮುಕ್ತ ಭಾರತ ಅಭಿಯಾನ

Wednesday, October 24th, 2018
rotary-club

ಮಂಗಳೂರು: ಪೋಲಿಯೋ ದಿನಾಚರಣೆಯ ಅಂಗವಾಗಿ ಪೋಲಿಯೋ ಮುಕ್ತ ಭಾರತ ಅಭಿಯಾನವನ್ನು ರೋಟರಿ ಸಂಸ್ಥೆಯು ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಆಯೋಜಿಸಿತ್ತು. ಇದಕ್ಕೂ ಮುನ್ನ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಜಾಥಾ ನಡೆಯಿತು. ಈ ಸಂದರ್ಭ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ, ನಮ್ಮ ದೇಶ 2014ರಿಂದ ಪೋಲಿಯೋ ಮುಕ್ತ ಭಾರತವೆಂದು ಘೋಷಣೆಗೊಂಡಿತು. ಕಳೆದ ಏಳು ವರ್ಷಗಳಿಂದ ನಮ್ಮ ದೇಶದಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ಕಂಡುಬಂದಿಲ್ಲ. ನಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಇನ್ನೂ ಪೋಲಿಯೋ […]

ನವೆಂಬರ್ 6 ರಂದು ರೋಟರಿ ವತಿಯಿಂದ ’ಗೋಕುಮ ನಿರ್ಗಮನ’

Friday, November 3rd, 2017
gokula nirgamana

ಮಂಗಳೂರು: ಕೊಲ್ಯದ ರೋಟರಿ ಸಮುದಾಯ ದಳದವರ ವತಿಯಿಂದ ಇದೇ ನವೆಂಬರ್ 6 ರ ಸೋಮವಾರ ದಂದು ಸಂಜೆ 6.30 ಕ್ಕೆ ಮಂಗಳೂರಿನ ಡಾನ್ ಬಾಸ್ಕೋ ಹಾಲ್ ನಲ್ಲಿ, ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದೆಯರು ಅಭಿನಯಿಸುವ ’ಗೋಕುಲ ನಿರ್ಗಮನ’ನೃತ್ಯ ನಾಟಕವನ್ನು ಆಯೋಜಿಸಿದೆ. ಪುತಿನ ಅವರು ರಚಿಸಿದ ಈ ನಾಟಕಕ್ಕೆ ವಿದ್ದು ಉಚಿಲ್ ನಿರ್ದೇಶನವಿದ್ದು, ಈಗಾಗಲೇ ಪ್ರಥಮ ಪ್ರದರ್ಶನದಲ್ಲಿ ಯಶಸ್ಸನ್ನು ಕಂಡಿದೆ. ಸಭಾ ಕಾರ್ಯಕ್ರಮದಲ್ಲಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಜಗದೀಶ್ ಶೆಟ್ಟಿ, ಭಾರತೀಯ ರೆಡ್‌ಕ್ರಾಸ್ ಸೊಸಾಯಿಟಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ, […]