ವಿಜಯ ಕರ್ನಾಟಕ ಪತ್ರಿಕೆಯ ಉಪ ಸಂಪಾದಕಿ ಕರ್ಕಿಕೋಡಿ ಸೀತಾಲಕ್ಷ್ಮೀ ನಿಧನ

Tuesday, May 12th, 2020
vijayalakshmi

ಮಂಗಳೂರು : ವಿಜಯ ಕರ್ನಾಟಕ ಪತ್ರಿಕೆಯ  ಹಿರಿಯ ಉಪ ಸಂಪಾದಕಿಯಾಗಿ, ಸಾಹಿತಿ ವಿ.ಗ. ನಾಯಕ ಅವರ ಪುತ್ರಿ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೆದುಳಿನ ಸಮಸ್ಯೆಯಿಂದ ಮಂಗಳವಾರ ನಿಧನರಾದರು. ಕಳೆದೊಂದು ವರ್ಷದಿಂದ ಮೆದುಳಿನ ಸಮಸ್ಯೆ  ಅವರನ್ನು ಕಾಡುತ್ತಿತ್ತು. ಅವರು  ಕಳೆದ 19 ವರ್ಷಗಳಿಂದ ವಿಜಯ ‌ಕರ್ನಾಟಕ ಮಂಗಳೂರು ಕಚೇರಿಯಲ್ಲಿ ವರದಿಗಾರ್ತಿಯಾಗಿ, ಹಿರಿಯ ಉಪಸಂಪಾದಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವಳಿ ಸ್ನಾತಕೋತ್ತರ ಪದವಿಗಳು, ಅವಳಿ ಪಿಎಚ್ ಡಿ ಮಹಾಪ್ರಬಂಧಗಳು, ಬೃಹತ್ ಎಂ.ಫಿಲ್ ಗ್ರಂಥಗಳ ಜತೆಗೆ 15ಕ್ಕೂ ಅಧಿಕ ಕೃತಿಗಳನ್ನು ರಚಿಸಿದ ಸೀತಾಲಕ್ಷ್ಮಿ […]

ವಿಶ್ವೇಶ್ವರ ಭಟ್ ವಿಜಯ ಕರ್ನಾಟಕಕ್ಕೆ ರಾಜೀನಾಮೆ

Wednesday, December 8th, 2010
ವಿಶ್ವೇಶ್ವರ ಭಟ್

ಬೆಂಗಳೂರು  : ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬುಧವಾರ ಮಧ್ಯಾಹ್ನ ಅವರು ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಆಡಳಿತ ವರ್ಗಕ್ಕೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದು, ರಾಜೀನಾಮೆ ಅಂಗೀಕೃತವಾಗಿದೆ ಎಂದು ವಿಶ್ವಸನೀಯವಾಗಿ ಗೊತ್ತಾಗಿದೆ. ಕಳೆದ ಹತ್ತು ವರ್ಷಗಳಿಂದ ಸಂಪಾದಕರಾಗಿ ಪತ್ರಿಕೆಯ ಚುಕ್ಕಾಣಿ ಹಿಡಿದು ವಿಜಯ ಕರ್ನಾಟಕವನ್ನು ಮುನ್ನಡೆಸಿದ್ದ ಭಟ್ಟರ ರಾಜೀನಾಮೆ ನಿರ್ಧಾರ ಪತ್ರಿಕೆಯ ಅಸಂಖ್ಯಾತ ಓದುಗರನ್ನು ಮತ್ತು ಅವರ ಅಭಿಮಾನಿ ವರ್ಗವನ್ನು ಬೆಚ್ಚಿಬೀಳಿಸಿದೆ. ಅಲ್ಲದೆ, ಸಮರ್ಥವಾದ […]