ತೌಡುಗೋಳಿ ಶ್ರೀ ದುರ್ಗಾ ಬಾಲಗೋಕುಲಕ್ಕೆ ಅಕ್ಕಿ ಹಾಗೂ ಆಹಾರದ ಕಿಟ್ ಒದಗಿಸಿಕೊಟ್ಟ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು

Tuesday, May 5th, 2020
durga balagokula

ಮಂಗಳೂರು : ಕರ್ನಾಟಕ ಕೇರಳ ಗಡಿಪ್ರದೇಶದ ತೌಡುಗೋಳಿ ಶ್ರೀ ದುರ್ಗಾ ಬಾಲಗೋಕುಲಕ್ಕೆ ಸಮಾಜ ಸೇವಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅಕ್ಕಿ ಹಾಗೂ ಆಹಾರದ ಕಿಟ್ ಒದಗಿಸಿಕೊಟ್ಟು ಅಲ್ಲಿನ ಹಲವಾರು ಮಕ್ಕಳ ಹಾಗೂ ಹೆತ್ತವರ ಪ್ರೀತಿಗೆ ಪಾತ್ರರಾದರು. ಕೊರೋನಾ ಲಾಕ್‌ಡೌನ್ ನಿಂದ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಹಳ್ಳಿ ಪ್ರದೇಶದ ಕೂಲಿಮಾಡಿ ಜೀವನ ನಡೆಸುವ ಮತ್ತು ಮಧ್ಯಮವರ್ಗದ ಜನರ ಸಂಕಷ್ಟ ಹೇಳತೀರದು. ಇದನ್ನು ಮನಗಂಡ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಲಾಕ್‌ಡೌನ್ ಆರಂಭದ ದಿನಗಳಿಂದಲೇ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ […]

ಶ್ರೀ ದುರ್ಗಾ ಬಾಲಗೋಕುಲ ಪ್ರಥಮ ವಾರ್ಷಿಕೋತ್ಸವದಲ್ಲಿ, ಮನಸೂರೆಗೊಂಡ ಮಕ್ಕಳ ನೃತ್ಯ ವೈವಿದ್ಯ

Monday, October 15th, 2018
Sri Durga Balagokula

ಮಂಗಳೂರು : ಶ್ರೀ ದುರ್ಗಾ ಬಾಲಗೋಕುಲದ ಪ್ರಥಮ ವಾರ್ಷಿಕೋತ್ಸವದ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮವನ್ನು ಶ್ರೀ ದುರ್ಗಾದೇವಿ ಕ್ಷೇತ್ರ ತೌಡುಗೋಳಿ ಇದರ ವಠಾರದಲ್ಲಿ ಬೆಳಗ್ಗೆ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಗೋವಿಂದ ಗುರುಸ್ವಾಮಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ವರ್ಕಾಡಿ ನೀರೋಳಿಕೆ ಶ್ರೀ ಮಾತಾ ಸೇವಾಶ್ರಮದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು, ಹರೀಶ್ ಕನ್ನಿಗುಳಿ, ನಾರಾಯಣ ಭಟ್ ಲಾಡ, ಶ್ರೀ ದುರ್ಗಾ ಬಾಲಗೋಕುಲದ ಅಧ್ಯಕ್ಷೆ ಪ್ರತಿಭಾ ದಿನೇಶ್, ಕಾರ‍್ಯದರ್ಶಿ ಶಿವರಾಜ್, ಉಪಾಧ್ಯಕ್ಷರಾದ ದಿನೇಶ್ ಗುರಿಕಾರ ಮರಿಕಾಪು, ಕೋಶಾಧಿಕಾರಿ ಮಮತಾ ತೌಡುಗೋಳಿ, […]