ಮಂಗಳೂರು ನಗರ ಪೊಲೀಸ್ ಕಮಿಶನರೇಟ್ ನ ಶ್ವಾನ ಸುಧಾ ಇನ್ನಿಲ್ಲ

Saturday, July 24th, 2021
Dog-Sudha

ಮಂಗಳೂರು: ಹಲವಾರು ಅಪರಾಧ ಕೃತ್ಯಗಳಲ್ಲಿ ಆರೋಪಿಗಳ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ ನಗರ ಪೊಲೀಸ್ ಕಮಿಶನರೇಟ್ ನ ಶ್ವಾನದಳದ ಸದಸ್ಯೆ ಸುಧಾ ಮೃತಪಟ್ಟಿದೆ. ಡೊಬರ್ ಮನ್ ಶ್ವಾನ 2011 ಮಾರ್ಚ್ 15 ರಂದು ಜನಿಸಿತ್ತು. 2013 ಏ.2ರಂದು ಸೇವೆಗೆ ಸೇರಿತ್ತು. ಸಂದೀಪ್ ಎಂಬವರು ಈ ಶ್ವಾನದ ನಿರ್ವಹಣೆ ಮಾಡುತ್ತಿದ್ದರು. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಮೊದಲಾದ ಹಿರಿಯ ಅಧಿಕಾರಿಗಳು ಮೃತ ಶ್ವಾನಕ್ಕೆ ಅಂತಿಮ ನಮನ ಸಲ್ಲಿಸಿದರು.

ಶ್ರೀಗಂಧದ ಮರವನ್ನು ಕದಿಯಲು ಮನೆಯ ಯಜಮಾನನನ್ನೇ ಕೊಂದ ಕಳ್ಳರು

Monday, October 5th, 2020
ShivaBasappa

ಚಾಮರಾಜನಗರ: ಮರ ಕಳ್ಳರು ಮನೆ ಮುಂದಿದ್ದ ಶ್ರೀಗಂಧದ ಮರವನ್ನು ಕದಿಯಲು ಮನೆಯ ಯಜಮಾನ ವೃದ್ಧನನ್ನು ಕೊಂದಿರುವ ಘಟನೆ ಚಾಮರಾಜನಗರ ತಾಲೂಕಿನ ಚಂದಕವಾಡಿಯಲ್ಲಿ ನಡೆದಿದೆ. ಚಂದಕವಾಡಿ ಗ್ರಾಮದ ವೃದ್ಧ ಶಿವಬಸಪ್ಪ(75) ಕೊಲೆಯಾದವರು. ಮನೆ ಮುಂದೆ ಇದ್ದ ಶ್ರೀಗಂಧದ ಮರವನ್ಬು ಕದಿಯಲು ಬಂದಿದ್ದ ವೇಳೆ ಮನೆ ಹೊರಗಡೆ ಮಲಗಿದ್ದ ವೃದ್ಧ ಶಿವಬಸಪ್ಪನ ಕೈ-ಕಾಲು ಕಟ್ಟಿ, ಪಂಚೆಯಿಂದ ಉಸಿರುಗಟ್ಟಿಸಿ ಕೊಂದು ಮಾಳವೊಂದರಲ್ಲಿ ಬಿಸಾಡಿದ್ದಾರೆ ಎಂದು ತಿಳಿದುಬಂದಿದೆ. ಶ್ವಾನದಳ ವೃದ್ಧನ ಮೃತದೇಹ ಪತ್ತೆ ಮಾಡಿದೆ. ಕಳ್ಳರು ಶ್ರೀಗಂಧದ ಮರವನ್ನು ಅರ್ಧ ಕತ್ತರಿಸಿ ಪರಾರಿಯಾಗಿದ್ದಾರೆ. ಚಾಮರಾಜನಗರ ನಗರದ […]

ಬೀಗ ಹಾಕಿದ ಮನೆಗೆ ನುಗ್ಗಿ 52,000 ರೂ. ಕಳ್ಳತನ

Wednesday, September 7th, 2016
Theft-manjeshwara

ಮಂಜೇಶ್ವರ: ಬೀಗ ಹಾಕಿದ ಮನೆಯೊಂದರ ಹಿಂಬಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನೊಳಗಿರಿಸಿದ್ದ ನಗದನ್ನು ಕಳವು ಗೈದು ಬಳಿಕ ಮನೆಯೊಳಗೆ ಕೆಂಪು ಮೆಣಸನ್ನು ಹಾಕಿ ಪರಾರಿಯಾದ ಘಟನೆ ಉದ್ಯಾವರ ಜುಮಾ ಮಸೀದಿ ಪರಿಸರದಲ್ಲಿ ನಡೆದಿದೆ. ಉದ್ಯಾವರ ಜುಮಾ ಮಸೀದಿ ಸಮೀಪವಾಸಿ ಗಲ್ಫ್ ಉದ್ಯೋಗಿ ಇಬ್ರಾಹಿಂ ಎಂಬವರ ಮನೆಗೆ ನುಗ್ಗಿದ ಕಳ್ಳರು ಮಕ್ಕಳ ಶಾಲಾ ಕಾಲೇಜಿನ ಶುಲ್ಕ ಪಾವತಿಸಲು ಕಪಾಟಿನಲ್ಲಿ ಇಟ್ಟಿದ್ದ 52 ಸಾವಿರ ರೂ. ವನ್ನು ಕಳವುಗೈದಿದ್ದಾರೆ. ಇಬ್ರಾಹಿಂ ರ ಪತ್ನಿ ಹಾಗೂ ಮಕ್ಕಳು ಶಾಲೆಗೆ ಹಾಗೂ […]