ಯುವತಿಯ ಹನಿಟ್ರ್ಯಾಪ್​ ಕಾಟ, ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ವೀರ ಯೋಧ

Thursday, November 9th, 2023
ಯುವತಿಯ ಹನಿಟ್ರ್ಯಾಪ್​ ಕಾಟ, ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ವೀರ ಯೋಧ

ಮಡಿಕೇರಿ : ದೇಶದ ಗಡಿ ಕಾಯುತ್ತಿದ್ದ ವೀರ ಯೋಧ ಯುವತಿ ಪ್ರೀತಿಯ ಬಲೆಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡ ಜೀವಿತಾ ಎನ್ನುವಾಕೆ ಯೋಧನಿಗೆ ಹನಿಟ್ರ್ಯಾಪ್​ ಮಾಡಿ ಸಾಯುವಂತೆ ಮಾಡಿದ್ದಾಳೆ. ಮಡಿಕೇರಿ ನಗರದ ಉಕ್ಕುಡ ನಿವಾಸಿ ನಿವೃತ್ತ ಯೋಧ ಸಂದೇಶ್ (38) ಮಹಿಳೆಯ ಹನಿಟ್ರ್ಯಾಪ್​ಗೆ ಹೆದರಿ ಡೆತ್​ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ. ನವೆಂಬರ್ 08 ರಂದು ಮನೆ ಸಮೀಪದ ಪಂಪಿನ ಕೆರೆಯಲ್ಲಿ ಸಂದೇಶ್ ಮೃತದೇಹ ಪತ್ತೆಯಾಗಿದೆ. ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದ ಮಾಜಿ ಸೈನಿಕ ಸಂದೇಶ್ ತನ್ನ […]

ಯುವತಿಯ ನಗ್ನ ಫೋಟೋ ವೈರಲ್..ಮೂವರ ಆರೋಪಿಗಳ ಬಂಧನ!

Saturday, July 14th, 2018
arrested

ಮಂಗಳೂರು: ಯುವತಿಯನ್ನು ಪರಿಚಯಿಸಿಕೊಂಡು ಬಳಿಕ ಆಕೆಯ ಜೊತೆ  ನಗ್ನ ಫೋಟೋ ತೆಗೆಸಿ ಕೊಂಡು ವೈರಲ್ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಪೊಲೀಸರು ಬಂಧಿಸಿದ್ದಾರೆ. ಸಂದೇಶ್, ಜಗದೀಶ್ ಮತ್ತು ನವೀನ್ ಬಂಧಿತ ಆರೋಪಿಗಳು. ಸಂದೇಶ್ ಮೊದಲು ಯುವತಿಯನ್ನು ಪರಿಚಯಿಸಿಕೊಂಡು ಬಳಿಕ ಆಕೆಯ ಜೊತೆಗೆ ಸಲಿಗೆ ಹೆಚ್ಚಿಸಿಕೊಂಡಿದ್ದನಂತೆ. ನಂತರ ಆಕೆಯನ್ನ ಪುಸಲಾಯಿಸಿ ನಗ್ನ ಚಿತ್ರಗಳನ್ನು ಪಡೆದು ತನ್ನ ಸ್ನೇಹಿತರಾದ ಜಗದೀಶ್ ಮತ್ತು ನವೀನ್ ಜೊತೆ ಶೇರ್ ಮಾಡಿದ್ದಲ್ಲದೇ ಸಾಮಾಜಿಕ ಜಾಲತಾಣಕ್ಕೂ ಅಪ್ಲೋಡ್ ಮಾಡಿದ್ದ ಎಂಬ ಆರೋಪ […]

ವೃದ್ಧನ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಮನೆಗೆ ತಲುಪಿಸಿದ ಪೊಲೀಸರು!

Monday, March 5th, 2018
mangaluru

ಮಂಗಳೂರು: ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧನ ಮೃತದೇಹವನ್ನು ಪೊಲೀಸರೇ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿರುವ ಘಟನೆ ಪುತ್ತೂರು ತಾಲೂಕು ಕೊಯಿಲ ಗ್ರಾಮದ ಗುಲ್ಗೋಡಿ ಎಂಬಲ್ಲಿ ನಡೆದಿದೆ. ತರಿಕೆರೆಯ ಜಂಬದಹಳ್ಳಿಯ ಪಳನಿಸ್ವಾಮಿ (80)ಕುಸಿದು ಬಿದ್ದು ಸಾವನ್ನಪ್ಪಿದ್ದರು. ಊರಿನಲ್ಲಿ ದೈವದ ನೇಮ ಇದ್ದ ಕಾರಣ ಶವ ಹೊರಲು ಗ್ರಾಮಸ್ಥರು ಯಾರೂ ಮುಂದೆ ಬಾರದ್ದಕ್ಕೆ ಅಸಹಾಯಕವಾಗಿದ್ದ ಕುಟುಂಬಕ್ಕೆ ಪೊಲೀಸರು ನೆರವಾದರು. ಪುತ್ತೂರು ಠಾಣೆಯ ಪಿಎಸ್ಐ ಪ್ರಕಾಶ್, ಎಎಸ್ಐ ರವಿ, ಹೋಂಗಾರ್ಡ್ ಸಂದೇಶ್ ಅವರು ವೃದ್ಧನ ಮೃತದೇಹವನ್ನು ಹೊತ್ತು ಮನೆ ತಲುಪಿಸಿದರು.