ರಸ್ತೆ ಬದಿ ನಿಂತಿದ್ದ ಕಾರಿಗೆ ರಿಕ್ಷಾ ಢಿಕ್ಕಿ, ಚಾಲಕ ಸಾವು

Tuesday, October 20th, 2020
Sunil Dead

ಉಡುಪಿ :  ರಿಕ್ಷಾವೊಂದು ರಸ್ತೆ ಬದಿ ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಗುಂಡಿಬೈಲು ನಾಗನಕಟ್ಟೆ ಸಮೀಪ ಮಂಗಳವಾರ ಸಂಜೆ ವೇಳೆ ನಡೆದಿದೆ. ಮೃತರನ್ನು ಮೂಡಬೆಟ್ಟುವಿನ ಸುನೀಲ್(44) ಎಂದು ಗುರುತಿಸಲಾಗಿದೆ. ಅಂಬಾಗಿಲು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ರಿಕ್ಷಾ, ರಸ್ತೆ ಬದಿ ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಿಕ್ಷಾ ಪಲ್ಟಿಯಾಗಿದ್ದು, ಈ ವೇಳೆ ಚಾಲಕ ರಿಕ್ಷಾದಿಂದ ಹೊರಗೆ ಎಸೆಯಲ್ಪಟ್ಟರೆನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಸುನೀಲ್, ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ […]

ಪವರ್ ಟಿವಿ ಕ್ಯಾಮರಾಮನ್ ಸುನೀಲ್ ನಿಧನ

Sunday, October 4th, 2020
Sunil Pancham

ಹುಬ್ಬಳ್ಳಿ:  ಹುಬ್ಬಳ್ಳಿ-ಕಾರವಾರ ರಸ್ತೆಯ ಚಾಟ್ನಿ ಕಾಂಪ್ಲೆಕ್ಸ್ ಬಳಿ ಅಕ್ಟೋಬರ್ 01 ರಂದು ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪವರ್ ಟಿವಿ ಕ್ಯಾಮರಾಮನ್ ಸುನೀಲ್ ಪಾಚಂಗೆ (28) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಟಿ.ವಿ.9 ಸುದ್ದಿ ಸಂಸ್ಥೆಯಲ್ಲಿ ‌ಸಹಾಯಕರಾಗಿ ಕೆಲಸ ನಿರ್ವಹಿಸಿದ್ದ ಸುನೀಲ್, ನಂತರ ಪವರ್ ಟಿ.ವಿ ಯಲ್ಲಿ ಕ್ಯಾಮರಾಮನ್ ಆಗಿ ಕೆಲಸಕ್ಕೆ ಸೇರಿದ್ದರು. ಹುಬ್ಬಳ್ಳಿಯ ಸಿದ್ಧಾರೂಡ ಮಠದ ಇಂದ್ರಪ್ರಸ್ಥ ನಗರದಲ್ಲಿ ವಾಸವಿದ್ದ ಅವರು ತಾಯಿ ಉಮಾ ಗೋಪಾಲ್ ಪಾಚಂಗೆ, ಸಹೋದರ ವಿನಾಯಕ ಪಾಚಂಗೆ ಅವರನ್ನು ಅಗಲಿದ್ದಾರೆ. […]

ಅಣ್ಣ ಜೈಲಿನಲ್ಲಿದ್ದಾಗ ತಂಗಿಯನ್ನು ಪ್ರೀತಿಸಲು ಆತ ಮನೆಗೆ ಬರುತ್ತಿದ್ದ

Saturday, January 5th, 2019
Rakesh

ಮಂಗಳೂರು: ಕಾವೂರು ಬಳಿಯ ಪಂಜಿಮೊಗರಿನ ಮಾಲಾಡಿಯಲ್ಲಿ ಯುವಕನನ್ನು ಪ್ರೇಯಸಿಯ  ಸಹೋದರ ತನ್ನ ಸಹಚರರೊಂದಿಗೆ  ಸೇರಿ ಕೊಚ್ಚಿ ಕೊಲೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಉರುಂದಾಡಿಗುಡ್ಡೆ ನಿವಾಸಿ ರಾಕೇಶ್‌(26) ಎಂಬ ಯುವಕ ಕೊಲೆಯಾಗಿದ್ದು, ಆರೋಪಿಗಳಾದ ಪಂಜಿಮೊಗರು ನಿವಾಸಿ ಸುನಿಲ್‌ ಹಾಗೂ ಇತರರು ಪರಾರಿಯಾಗಿದ್ದಾರೆ. ರಾಕೇಶ್‌ ತಂದೆಯೊಂದಿಗೆ ಸ್ಟೀಲ್‌ ಬಾರ್‌ ಬೆಂಡಿಂಗ್‌ ಕೆಲಸ ಮಾಡುತ್ತಿದ್ದು, ಸುನೀಲ್ನ ತಂಗಿಯನ್ನು ಕೆಲವು ಸಮಯಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಸುನೀಲ್‌ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದಾಗ ರಾಕೇಶ್‌ ನಿತ್ಯ ಮನೆಗೆ ಬರುತ್ತಿದ್ದ. ರಾಕೇಶ್‌ ತನ್ನ ತಂಗಿಯನ್ನು ಪ್ರೀತಿಸುತ್ತಿರುವ ವಿಚಾರ ಸುನಿಲ್ […]

ಖಾಸಗಿ ಹೋಟೆಲ್‌ನಲ್ಲಿ ಬ್ಯೂಟಿಷಿಯನ್ ಆಗಿದ್ದ ರಮ್ಯಾ ಅನುಮಾನಾಸ್ಪದ ಸಾವು..!

Tuesday, June 26th, 2018
buetician

ಮೈಸೂರು: ಬ್ಯೂಟಿಷಿಯನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮೈಸೂರಿನ ದಾಮೋದರ ಬಡಾವಣೆಯಲ್ಲಿ ಸಂಭವಿಸಿದೆ. ರಮ್ಯಾ (25) ಮೃತ ದುರ್ದೈವಿ. ನೇಣುಬಿಗಿದ ಸ್ಥಿತಿಯಲ್ಲಿ ರಮ್ಯಾ ಶವ ಪತ್ತೆಯಾಗಿದೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್‌ನಲ್ಲಿ ಬ್ಯೂಟಿಷಿಯನ್ ಆಗಿದ್ದ ರಮ್ಯಾಆರು ವರ್ಷಗಳ ಹಿಂದೆ ಮೈಸೂರಿನ ಆನಂದ್ ಎಂಬುವರನ್ನು ವಿವಾಹವಾಗಿದ್ದರು. ಕಳೆದ ಎರಡು ವರ್ಷಗಳಿಂದ ಆನಂದ್‌ರಿಂದ ಬೇರೆಯಾಗಿ ಸುನೀಲ್ ಎಂಬಾತನ ಜೊತೆಗಿದ್ದರು. ಕಳೆದ ರಾತ್ರಿ ನೇಣುಬಿಗಿದ ಸ್ಥಿತಿಯಲ್ಲಿ ರಮ್ಯಾ ಶವ ಪತ್ತೆಯಾಗಿದ್ದು, ರಮ್ಯಾ ಪೋಷಕರುಸುನೀಲ್ ಕೊಲೆ ಮಾಡಿರುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ […]

ಇದು ರಾಮ v/s ಅಲ್ಲಾಹು ನಡುವಿನ ಚುನಾವಣೆ; MLA ಸುನೀಲ್ ಹೇಳಿದ್ದೇನು?

Tuesday, January 23rd, 2018
sunil

ಬಂಟ್ವಾಳ: ಇದು ಅಲ್ಲಾಹು ಮತ್ತು ಶ್ರೀರಾಮನ ನಡುವಿನ ಚುನಾವಣೆ. ರಾಮನನ್ನು ಪ್ರೀತಿಸುವ ವ್ಯಕ್ತಿಯನ್ನು ಗೆಲ್ಲಿಸ್ತೀವಾ, ಅಲ್ಲಾನನ್ನು ಪ್ರೀತಿಸುವ ವ್ಯಕ್ತಿಯನ್ನು ಗೆಲ್ಲಿಸ್ತೀವಾ ಎಂಬುದು ತೀರ್ಮಾನವಾಗಬೇಕು…ಇದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ವಿವಾದಾತ್ಮಕ ಹೇಳಿಕೆ. ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದ ಬಿಜೆಪಿ ಪರಿವರ್ತನಾ ರಾಲಿಯಲ್ಲಿ ಮಾತನಾಡುತ್ತ ಈ ಹೇಳಿಕೆ ನೀಡಿರುವುದಾಗಿ ಖಾಸಗಿ ಮಾಧ್ಯಮಗಳು ವರದಿ ಮಾಡಿವೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಾಜೇಶ್ ನಾಯಕ್ ರಾಮನಂತೆ, ಕಾಂಗ್ರೆಸ್ ಅಭ್ಯರ್ಥಿ(ರಮಾನಾಥ್ ರೈ)ಅಲ್ಲಾಹು..ಹೀಗಾಗಿ ಕ್ಷೇತ್ರದ ಜನರು […]

ಶಿವರಾಜ್ ಹತ್ಯೆ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು , ಮೂವರ ಬಂಧನ

Tuesday, January 23rd, 2018
shivaraj

ಮಂಗಳೂರು: ನಗರದಲ್ಲಿ ಭಾನುವಾರ ತಡರಾತ್ರಿ ನಡೆದ ಶಿವರಾಜ್ (39) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸುನೀಲ್ (32), ಧೀರಜ್ (25), ಗದಗ ಮೂಲದ ಮಲ್ಲೇಶ್ (23) ಎಂದು ಗುರುತಿಸಲಾಗಿದೆ. ಆರೋಪಿಗಳು ಹಳೇ ದ್ವೇಷದ ಹಿನ್ನಲೆಯಲ್ಲಿ ಶಿವರಾಜ್ ಕೊಲೆ ಮಾಡಲು ಬಂದಿದ್ದೆವು. ತಪ್ಪಿ ಶಿವರಾಜ್ ರನ್ನು ಕೊಲೆ ಮಾಡಿರುವುದಾಗಿ ಪೊಲೀಸರೆದುರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಓರ್ವ ಅಮಾಯಕ ಬಲಿ ಮಂಗಳೂರು ಹೊರವಲಯದ ತಣ್ಣೀರುಬಾವಿ ಎಂಬಲ್ಲಿ ತಡರಾತ್ರಿ ಮನೆಯ ಟೆರೇಸ್ […]