ಹುಬ್ಬಳ್ಳಿ: ಎಸ್.ಡಬ್ಲೂ.ಆರ್ ಹೊಸ ಆವಿಷ್ಕಾರ: ಸೈಕಲ್ ಪೆಡಲ್ ಟ್ರಾಲಿ ಶೋಧನೆ

Thursday, August 6th, 2020
cycle pedal

ಹುಬ್ಬಳ್ಳಿ: ನೈಋತ್ಯ ರೈಲ್ವೇ ವಲಯದಲ್ಲಿ ಹೊಸ ಆವಿಷ್ಕಾರದ ಮೂಲಕ ವಿನೂತನ ಪ್ರಯತ್ನವೊಂದು ನಡೆದಿದ್ದು ಸೈಕಲ್ ಪೆಡಲ್ ಮೂಲಕ ಟ್ರಾಲಿಯನ್ನು ಆವಿಷ್ಕಾರ ಮಾಡಿದೆ. ಹೌದು…ಮೊದಲು ಯಂತ್ರಚಾಲಿತ ಟ್ರಾಲಿಯನ್ನು ನಡೆಸಲಾಗುತಿತ್ತು ಆದರೇ ಈಗ ಸೈಕಲ್ ಪೆಡಲ್ ಮೂಲಕವೇ ರೈಲ್ವೇ ಟ್ರ್ಯಾಕ್ ಮೇಲೆ ಟ್ರಾಲಿ ನಡೆಸುವ ಪ್ರಯತ್ನ ನಡೆಸಿದೆ. ಅಲ್ಲದೇ ರೈಲ್ವೇ ಟ್ರ್ಯಾಕ್ ವೀಕ್ಷಣೆ ಹಾಗೂ ಕಾಮಗಾರಿ ಪರಿಶೀಲನೆ, ಸಿಗ್ನಲ್ ಸೇರಿದಂತೆ ರೈಲ್ವೇಗೆ ಸಂಬಂಧಿಸಿದ ಎಲ್ಲ ರೀತಿಯ ಪರಿಶೀಲನೆ ನಡೆಸಬಹುದಾಗಿದ್ದು,ಹುಬ್ಬಳ್ಳಿ ವರ್ಕ್ ಶಾಪ್ ನಲ್ಲಿ ತಯಾರಿಸಿದ ಸೈಕಲ್ ಪೆಡಲ್ ಟ್ರಾಲಿಯನ್ನು ರೈಲ್ವೇ […]

ಚಿಕ್ಕಮಗಳೂರು : ಕೆರೆಯಲ್ಲಿ ಸೈಕಲ್ ತೊಳೆದು, ಬಳಿಕ ಈಜಲು ನೀರಿಗೆ ಇಳಿದ ಮೂವರು ಬಾಲಕರು ನೀರುಪಾಲು

Tuesday, October 8th, 2019
chikkamagaluru

ಚಿಕ್ಕಮಗಳೂರು : ಆಯುಧ ಪೂಜೆಯ ಹಿನ್ನೆಲೆ ಕೆರೆಯಲ್ಲಿ ತಮ್ಮ ಸೈಕಲ್‍ಗಳನ್ನು ತೊಳೆದು, ಬಳಿಕ ಈಜಲು ನೀರಿಗೆ ಇಳಿದಿದ್ದ ಮೂವರು ಬಾಲಕರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ. ಹೌಸಿಂಗ್ ಬೋರ್ಡ್ ನಿವಾಸಿಗಳಾದ ಮುರುಳಿ(15), ಜೀವಿತ್(14), ಚಿರಾಗ್(15) ಮೃತ ದುರ್ದೈವಿಗಳು. ಸೋಮವಾರ ಆಯುಧ ಪೂಜೆ ಇದ್ದ ಕಾರಣಕ್ಕೆ ಸಂಜೆ ತಮ್ಮ ಸೈಕಲ್‍ಗಳನ್ನು ತೊಳೆಯಲೆಂದು ಬಿಳೇಕಲ್ಲಳ್ಳಿ ಗ್ರಾಮದ ಕಂಚಿಕಟ್ಟೆ ಕೆರೆ ಬಳಿ ಮೂವರು ಬಾಲಕರು ತೆರೆಳಿದ್ದರು. ಹೀಗೆ ಕೆರೆಯಲ್ಲಿ ಸೈಕಲ್ ತೊಳೆದ ಬಳಿಕ ಈಜಲು ಬಾಲಕರು ನೀರಿಗೆ […]

ಸೈಕಲ್ ಏರಿ ತೈಲ ಬೆಲೆ ಏರಿಕೆಯನ್ನು ವಿರೋಧಿಸಿದ ಐವನ್ ಡಿಸೋಜ

Monday, September 10th, 2018
Bundh

ಮಂಗಳೂರು : ಇಂಧನಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ನೀಡಿದ್ದ ಕರೆಯ ಮೇರೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಹಂಪನಕಟ್ಟೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯ ಸಂದರ್ಭ ಎತ್ತಿನಗಾಡಿ, ಬೈಕ್‌ನಲ್ಲಿ ಅಡುಗೆ ಅನಿಲ ಸಿಲಿಂಡರ್, ಕಟ್ಟಿಗೆಯನ್ನಿಟ್ಟು ವಿನೂತನವಾಗಿ ಪ್ರತಿರೋಧವನ್ನು ಪ್ರದರ್ಶಿಸಲಾಯಿತು. ಐವನ್ ಡಿಸೋಜ ತಮ್ಮ ಚತುಷ್ಚಕ್ರ ವಾಹನವನ್ನು ದೂಡಿಕೊಂಡು ಬಂದರಲ್ಲದೆ, ಸೈಕಲ್ ಏರಿ ತೈಲ ಬೆಲೆ ಏರಿಕೆಯನ್ನು ವಿರೋಧಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಪ್ರದರ್ಶನದ ವೇಳೆ ಐವನ್ ಡಿಸೋಜ […]