ಉಭಯ ಸದನಗಳಲ್ಲಿ ಲೋಕಾಯುಕ್ತ ಸದ್ದು

Wednesday, February 26th, 2014
Jagadish-Shettar

ಬೆಂಗಳೂರುಃ ಲೋಕಾಯುಕ್ತ ಕಾಯಿದೆ ತಿದ್ದುಪಡಿ ವಿಚಾರವು ಉಭಯ ಸದನಗಳಲ್ಲಿ ಮಂಗಳವಾರ ಸದ್ದು ಮಾಡಿತು. ಲೋಕಾಯುಕ್ತ ಕಾಯಿದೆಯನ್ನು ರಾಜ್ಯ ಸರ್ಕಾರ ಶಕ್ತಿ ಹೀನ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧಪಕ್ಷ ನಾಯಕ ಜಗದೀಶ್ ಶೆಟ್ಟರ್ ಕಿಡಿಕಾರಿದರೆ, ಭ್ರಷ್ಟಾಚಾರ ನಿಯಂತ್ರಣ ಎನ್ನುವುದು ಕಾಂಗ್ರೆಸ್ ಪಾಲಿಗೆ ಘೋಷಣೆಗೆ ಮಾತ್ರ ಸೀಮಿತ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಡಿ.ವಿ.ಸದಾನಂದಗೌಡ ಲೇವಡಿ ಮಾಡಿದರು. ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಸರ್ಕಾರ ಅದನ್ನು ಶಕ್ತಿಹೀನಗೊಳಿಸಲು ನಿರ್ಧರಿಸಿದಂತಿದೆ. ಕ್ಯಾಬಿನೆಟ್‌ನಲ್ಲೇ ಇದಕ್ಕೆ ಅನುಮತಿ ನೀಡಿ, ವಾಪಸ್ ತೆಗೆದುಕೊಳ್ಳುವ ಗೊಂದಲ […]

ರಾಷ್ಟ್ರ ಮಟ್ಟದ ಯುವಜನೋತ್ಸವಕ್ಕೆ 12 ಕೋಟಿ ವೆಚ್ಚದ ಸಿದ್ಧತೆ : ಡಿವಿಎಸ್

Thursday, January 5th, 2012
DV Sadananda Gowda

ಮಂಗಳೂರು : ರಾಷ್ಟ್ರ ಮಟ್ಟದ ಯುವಜನೋತ್ಸವದ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಬುಧವಾರ ಇಲ್ಲಿನ ಸರ್ಕೀಟ್‌ ಹೌಸ್‌ನಲ್ಲಿ ಪತ್ರಕರ್ತರಿಗೆ ಯುವಜನೋತ್ಸವದ ವಿವರಣೆ ನೀಡಿದರು. ಯುವಜನೋತ್ಸವಕ್ಕೆ ರಾಜ್ಯ ಸರಕಾರದದಿಂದ 10 ಕೋಟಿ ರೂ. ಮತ್ತು ಕೇಂದ್ರ ಸರಕಾರದ 2 ಕೋಟಿ ರೂ. ಸಹಿತ ಒಟ್ಟು 12 ಕೋಟಿ ರೂ. ಬಿಡುಗಡೆಯಾಗಿದೆ, ರಾಷ್ಟ್ರ ಮಟ್ಟದ ಯುವಜನೋತ್ಸವವನ್ನು ಕರ್ನಾಟಕದಲ್ಲಿ ಪ್ರಥಮ ಬಾರಿ ನಡೆಸಲಾಗುತ್ತಿದೆ, ಮಂಗಳೂರಿನಲ್ಲಿ ಈ ತಿಂಗಳ 12ರಿಂದ 16ರ ವರೆಗೆ ನಡೆಯಲಿರುವ ಈ ಉತ್ಸವವನ್ನು […]

ನಮ್ಮ ಮೆಟ್ರೋ ಸೆ.15ಕ್ಕೆ ಸಂಚಾರ ಆರಂಭ

Wednesday, August 24th, 2011
DV-Sadananda Gowda

ಬೆಂಗಳೂರು : ನಮ್ಮ ಮೆಟ್ರೋ ರೈಲು ವಾಣಿಜ್ಯ ಓಡಾಟ ಸೆ.15ರಿಂದ ಆರಂಭವಾಗಲಿದೆ ಎಂದು ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ನಗರದ ಪ್ರೆಸ್ ಕ್ಲಬ್ ನಲ್ಲಿ ಇಂದು ಬೆಳಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಧಾನಿ ಮನಮೋಹನ್ ಸಿಂಗ್ ಅವರು ಮೇಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ತೋರಿಸಲಿದ್ದಾರೆ. ಪ್ರಧಾನಿಯವರು ಸೆಪ್ಟೆಂಬರ್ ಮೊದಲ ವಾರ ಬಾಂಗ್ಲಾದೇಶ ಪ್ರವಾಸ ಹೊರಡಲಿರುವುದರಿಂದ. ಸೆ.15 ರಂದು ಬಿಎಂಆರ್ ಸಿಎಲ್ ಮೆಟ್ರೋ ರೈಲು ಉದ್ಘಾಟನೆಗೊಳ್ಳಲಿಸಲು ಅವರು ಒಪ್ಪಿಗೆ ನೀಡಿದ್ದಾರೆ ಎಂದರು. ಬಿಎಂಆರ್ ಸಿಎಲ್ ಅಧಿಕಾರಿಗಳೋಡನೆ ಮಂಗಳವಾರ […]

ನೂತನ ಮುಖ್ಯ ಮಂತ್ರಿಯವರಿಂದ ತವರು ಜಿಲ್ಲೆಗೆ ಮೊದಲ ಭೇಟಿ

Saturday, August 13th, 2011
DV Sadananda Gowda/ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ

ಮಂಗಳೂರು : ಕರ್ನಾಟಕ ರಾಜ್ಯದ ನೂತನ ಮುಖ್ಯ ಮಂತ್ರಿ ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ದೇವರಗುಂಡದ ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿ ಅಯ್ಕೆಯಾದ ಬಳಿಕ ಪ್ರಥಮ ಬಾರಿಗೆ ತವರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಬಜಪೆ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ 8:30ಕ್ಕೆ ಬಂದಿಳಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಜಿಲ್ಲಾಡಳಿತದ ಆಧಿಕಾರಿಗಳು ಸ್ವಾಗತಿಸಿದರು. ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಈ ಹಿಂದೆ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವುದಾಗಿ ಭರವಸೆ ನೀಡಿದ ಅವರು, […]

ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿಯಾಗಲು ಸುಬ್ರಹ್ಮಣ್ಯದಲ್ಲಿ ಉರುಳುಸೇವೆ

Wednesday, August 3rd, 2011
DV Sadananda Gowda/ಡಿ.ವಿ. ಸದಾನಂದ ಗೌಡ

ಸುಬ್ರಹ್ಮಣ್ಯ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಸುಳ್ಯ ತಾಲೂಕಿನ ದೇವರಗುಂಡ ವೆಂಕಪ್ಪ ಸದಾನಂದ ಅವರನ್ನು ಸೂಚಿಸಿರುವ ಬೆನ್ನಿಗೆ ಡಿ.ವಿ. ಸದಾನಂದ ಗೌಡ ಬೆಂಬಲಿಗರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉರುಳುಸೇವೆ ಸಲ್ಲಿಸಿದರು. ಡಿ.ವಿ.ಹೆಸರು ಮುಂಚೂಣಿಯಲ್ಲಿರುವುದರಿಂದ ಸಂತಸಗೊಂಡಿರುವ ಸುಬ್ರಹ್ಮಣ್ಯದ ನಾಗರಿಕರು ಪಕ್ಷಬೇಧ ಮರೆತು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ, ದೇವಳದ ಹೊರಾಂಗಣದಲ್ಲಿ ಮಧ್ಯಾಹ್ನದ ವೇಳೆ ಉರುಳುಸೇವೆ ನಡೆಸಿದರು. ಸುಬ್ರಹ್ಮಣ್ಯದ ನಾಗರಿಕರು, ವಾಹನ ಮಾಲಕರು-ಚಾಲಕರು ಸೇರಿ ಕಾಶಿಕಟ್ಟೆಯಿಂದ ದೇವಳದ ವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದು ದರ್ಪಣತೀರ್ಥ ನದಿಯಲ್ಲಿ […]