ನಟಿ ವಿಂದ್ಯಾ ಆಸ್ಪತ್ರೆಯಿಂದ ಮನೆಗೆ

Monday, March 10th, 2014
Vindya

ಬೆಂಗಳೂರು: ಮಧುಮೇಹ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ‘ಮನದ ಮರೆಯಲ್ಲಿ’ ಚಿತ್ರದ ನಟಿ ವಿಂದ್ಯಾ ಬೌರಿಂಗ್ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಕಾರಣ ವಿಂದ್ಯಾಗೆ ಅಳವಡಿಸಲಾಗಿದ್ದ ವೆಂಟಿಲೇಟರ್‌ನ್ನು ಶನಿವಾರ ತೆಗೆಯಲಾಗಿತ್ತು. ಭಾನುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ವಿಂದ್ಯಾ ಅವರ ಆರೋಗ್ಯ ಇನ್ನಷ್ಟು ಸುಧಾರಿಸಬೇಕಿದೆ. ಹೀಗಾಗಿ ಮೂರು ದಿನ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ ಎಂದು ಮನದ ಮರೆಯಲ್ಲಿ ಚಿತ್ರದ ನಿರ್ದೇಶಕ ರಾಜೀವ್ ನೇತ್ರಾ ತಿಳಿಸಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ವಿಂದ್ಯಾ, ಜೀವನದಲ್ಲಿ […]

ನಟಿ ವಿಂದ್ಯಾ ಆತ್ಮಹತ್ಯೆ ಯತ್ನ

Wednesday, March 5th, 2014
Vindhya

ಬೆಂಗಳೂರು: ಚಿತ್ರರಂಗಕ್ಕೆ ಈಗಷ್ಟೆ ಚಿಗುರುತ್ತಿದ್ದ ಯುವ ನಟಿ, ‘ಮನದ ಮರೆಯಲ್ಲಿ’ ಚಿತ್ರದ ನಾಯಕಿ ವಿಂದ್ಯಾ (24) 85 ಮಧುಮೇಹ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಿಯಕರನ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್ ಆತ್ಮಹತ್ಯೆ ಯತ್ನಕ್ಕೆ ಮೂಲ ಕಾರಣ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ. ಮಾಗಡಿ ರಸ್ತೆ ದಾಸರಹಳ್ಳಿಯಲ್ಲಿರುವ ಮನೆಯಲ್ಲಿ ಮಂಗಳವಾರ ಬೆಳಗ್ಗೆ ಮನೆಯಲ್ಲಿದ್ದ 85 ಮಧುಮೇಹ ಮಾತ್ರೆಗಳನ್ನು ಸೇವಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ವಿಂದ್ಯಾರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಮೂರು ತಿಂಗಳಿಂದ ಮಂಜುನಾಥ ಎಂಬಾತನನ್ನು ವಿಂದ್ಯಾ ಪ್ರೀತಿಸುತ್ತಿದ್ದರು. ಇತ್ತೀಚೆಗೆ […]