ಸಾ.ರಾ.ಗೋವಿಂದ ಪುತ್ರ ಅನೂಪ್ ವಿರುದ್ಧ ಕಿಡ್ನಾಪ್ ಹಾಗೂ ಹಲ್ಲೆ ಆರೋಪ..!

Tuesday, November 20th, 2018
anup-actor

ಬೆಂಗಳೂರು: ಖ್ಯಾತ ನಿರ್ಮಾಪಕ ಹಾಗೂ ಫಿಲ್ಮ್ ಛೇಂಬರ್ನ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ ಪುತ್ರ, ನಟ ಅನೂಪ್ ವಿರುದ್ಧ ಕಿಡ್ನಾಪ್ ಹಾಗೂ ಹಲ್ಲೆ ಆರೋಪ ಕೇಳಿ ಬಂದಿದೆ. ಹರೀಶ್ ಎಂಬಾತನಿಗೆ ತನ್ನ ಮೊಬೈಲ್ನಿಂದ ಕರೆ ಮಾಡಿ ಬಸವೇಶ್ವರ ನಗರದ ಪವಿತ್ರ ಪ್ಯಾರಡೈಸ್ ಬಳಿ ಬರುವಂತೆ ಅನೂಪ್ ಹೇಳಿದ್ದನಂತೆ. ಅಲ್ಲಿಗೆ ಬಂದ ಆತನನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ವೈಯಕ್ತಿಕ ದ್ವೇಷ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಇನ್ನು ಅನೂಪ್ನಿಂದ ಎಸ್ಕೇಪ್ ಆದ ಹರೀಶ್, ಸದಾಶಿವನಗರದ ಠಾಣೆಯಲ್ಲಿ […]

ಟೆಂಪೋ ಮಗುಚಿ ಬಿದ್ದು ಇಬ್ಬರು ಸಾವು..!

Thursday, August 9th, 2018
tampo-accident

ಕಡಬ: ಕಡಬ ಸಮೀಪದ ಸುಬ್ರಹ್ಮಣ್ಯ- ಇಂಚ್ಲಂಪಾಡಿ ರಸ್ತೆಯ ಮರ್ದಾಳ ಎಂಬಲ್ಲಿ ಟೆಂಪೋ ಮಗುಚಿ ಬಿದ್ದು ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ. ಓರ್ವನ ಪರಿಸ್ಥಿತಿ ಗಂಭಿರವಾಗಿದೆ. ಮೃತರನ್ನು ಚಿನ್ನಮ್ಮ ( 55) ಮತ್ತು ಹರೀಶ್ ( 30) ಎಂದು ಗುರುತಿಸಲಾಗಿದೆ. ಕೊಕ್ಕಡ ಮೂಲದವರಾದ ಇವರು ಬೆಳಗ್ಗೆ ಕಾಂಕ್ರಿಟ್ ಕೆಲಸಕ್ಕೆಂದು ಹೊರಟವರು ಎಂದು ತಿಳಿದು ಬಂದಿದೆ.

ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ನಲಿಕೆ ಸಮಾಜ ಒತ್ತಾಯ

Wednesday, April 11th, 2018
kaladka-prabhakar

ಮಂಗಳೂರು: ಕೈರಂಗಳದಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಬೂತ ಕಟ್ಟುವವರ ವಿರುದ್ಧ ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿದ್ದಾರೆ. ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಜೈಲಿಗಟ್ಟಬೇಕು ಎಂದು ಬೆಳ್ತಂಗಡಿಯ ನಲಿಕೆ ಸಮಾಜ ಸೇವಾ ಸಂಘ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಒತ್ತಾಯ ಮಾಡಿದ ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷ ಎಸ್. ಪ್ರಭಾಕರ್ ಶಾಂತಿಕೋಡಿ, ಚುನಾವಣಾ ನೀತಿ ಸಂಹಿತೆಯನ್ನು ಬಹಿರಂಗವಾಗಿ ಪ್ರಶ್ನಿಸುವ ಮೂಲಕ ಪ್ರಭಾಕರ ಭಟ್ ಚುನಾವಣಾ ಆಯೋಗವನ್ನು ಕೂಡಾ ಕಪಿಮುಷ್ಟಿಯಲ್ಲಿರಿಸಲು ಪ್ರಯತ್ನಿಸಿದ್ದಾರೆ. […]

ಸ್ವಚ್ಛ ಭಾರತಕ್ಕೆ ವಿದ್ಯಾರ್ಥಿಗಳ ಸಂಪೂರ್ಣ ಸಹಕಾರ: ಹರೀಶ್‌

Thursday, January 11th, 2018
swachaa-bharath

ಮೂಲ್ಕಿ : ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕಲ್ಪನೆಯು ಕನಸು ನಿಜವಾಗುವಲ್ಲಿ ದೇಶದ ಮಾಹಾನ್‌ ಯುವ ಶಕ್ತಿ ಅದರಲ್ಲೂ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಹಕಾರ ನೀಡಿದರೆ ಯಾವುದೇ ಶ್ರಮ ರಹಿತವಾಗಿ ಪರಿಪೂರ್ಣಗೊಳಿಸಲು ಸಾಧ್ಯವಾದೀತು ಎಂದು ಮೂಲ್ಕಿ ಸಮಾಜ ಸೇವಾಕರ್ತ ಹರೀಶ್‌ ಅಮೀನ್‌ ಹೇಳಿದರು. ಅವರು ಮೂಲ್ಕಿ ವಿಜಯಾ ಕಾಲೇಜಿನಲ್ಲಿ ನಡೆದ ನಗರ ಸ್ವಚ್ಛತಾ ಅಂದೋಲನದಲ್ಲಿ ನಾವೇನು ಮಾಡಬಹುದು ಎಂಬ ವಿಚಾರದಲ್ಲಿ ಮಾತನಾಡಿದರು. ನಮ್ಮ ಪರಿಸರ ಮತ್ತು ಮುಂದಿನ ಪೀಳಿಗೆಯ ರಕ್ಷಣೆಯ ಕೆಲಸಕ್ಕಾಗಿ ನಾವು ನಮ್ಮ ಮನೆಯಿಂದ […]

ಐವನ್ ಡಿಸೋಜ ಅವರ ಆಪ್ತ ಕಾರ್ಯದರ್ಶಿ ಹರೀಶ್ ನಿಧನ

Wednesday, May 24th, 2017
Harish

ಮಂಗಳೂರು: ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಅವರ ಆಪ್ತ ಕಾರ್ಯದರ್ಶಿ ಹರೀಶ್ (49) ಹೃದಯಾಘಾತಕ್ಕೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ  ರಾತ್ರಿ ಮೃತಪಟ್ಟಿದ್ದಾರೆ. ಮೂಲತಃ ಉಳ್ಳಾಲದವರಾದ ಹರೀಶ್ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಸೌಮ್ಯ ಸ್ವಭಾವದ ಹರೀಶ್ ಎಲ್ಲರೊಂದಿಗೂ ಬೆರೆಯುತ್ತಿದ್ದರು. ಹರೀಶ್ ಸಾವಿಗೆ ಐವನ್ ಡಿಸೋಜ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಬಜಕೂಡ್ಲಿನಲ್ಲಿ ನೇಜಿ ನೆಡುವ ಉತ್ಸವದ ಸಂಭ್ರಮ

Thursday, January 21st, 2016
Rice crop

ಪೆರ್ಲ: ಮಕ್ಕಳೂ, ಮಹಿಳೆಯರೂ, ಹೊಸಬರೂ-ಹಳೆಬರೂ ಮೊಣಕಾಲಷ್ಟು ಕೆಸರು ಗದ್ದೆಯಲ್ಲಿ ಇಂಚು ಉದ್ದದ ನೇಜಿ ನೆಡುವ ನೋಟ ಬಜಕೂಡ್ಲಿನಲ್ಲಿ ಉತ್ಸವದ ಸಂಭ್ರಮವನ್ನುಂಟು ಮಾಡಿತ್ತು. ಪೆರ್ಲ ಬಜಕೂಡ್ಲಿನ ಬಂಗಾರಿ ಎಪ್.ಇ.ಒ. ಎಂಬ ಕೃಷಿಕರ ಸಂಘಟನೆ ರೈತರಿಗೆ ಶ್ರೀ ಪದ್ಧತಿಯಲ್ಲಿ ಭತ್ತಕೃಷಿ ಮಾಡುವ ತರಬೇತಿಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸಾಮಾನ್ಯವಾಗಿ ಕಾರ್ಯಕ್ರಮಕ್ಕಾಗಿ ತರಬೇತಿ ಎಂಬ ನಿಲುವನ್ನು ಬದಲಿಸಿ, ಸುಮಾರು ಎರಡು ಎಕರೆಯಷ್ಟು ವಿಶಾಲವಾದ ಹಡಿಲು ಬಿದ್ದ ಗದ್ದೆಯನ್ನು ಕೆಸರು ಗದ್ದೆಯಾಗಿ ಮಾಡಿಕೊಂಡು, ಗೋ ಆಧಾರಿತ ಜೈವ ಕೃಷಿ ಮಾಡಲು ಬಜಕೂಡ್ಲಿನ ಅಮೃತಧಾರಾ ಗೋಶಾಲೆಯ […]