ಎಂಥ ಖದೀಮರಿದ್ದಾರೆ ನೋಡಿ : ಮುನ್ನೂರು ಗ್ರಾಮ ಪಂಚಾಯತ್‌ನಲ್ಲಿ ನಕಲಿ ದೃಢಪತ್ರ, ನಕಲಿ ಲೈಸನ್ಸ್ ಸಿಗುತ್ತದೆ

Thursday, October 4th, 2018
munnuru panchyath

ತೊಕ್ಕೊಟ್ಟು : ಮುನ್ನೂರು ಗ್ರಾಮ ಪಂಚಾಯತ್‌ನಲ್ಲಿ ಈಗ ನಕಲಿ ದೃಢಪತ್ರ, ಲೈಸನ್ಸ್ ನೀಡುವ ಜಾಲವೊಂದು ಕಾರ್ಯಚರಿಸುತ್ತಿದ್ದು ಇದನ್ನು ಪಡೆದ ಮದನಿನಗರ ನಿವಾಸಿಯೊಬ್ಬರ  ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗುರವಾರ ಎಪ್‌ಐಆರ್ ದಾಖಲಾಗಿದೆ. ಮುನ್ನೂರು ಗ್ರಾಮ ಪಂಚಾಯತಿಗೊಳಪಟ್ಟ ನಿವಾಸಿಯೊಬ್ಬರು ತನ್ನ ಮಗಳ ಆಧಾರ್ ಕಾರ್ಡ್ ತಿದ್ದುಪಡಿಗೆ ಪಂಚಾಯತ್ ನೀಡಿದ ದೃಢಪತ್ರ ಎಂದು ಹೇಳಿಕೊಂಡು ಬಂದಿದ್ದರು. ಪಂಚಾಯತ್ ಸಿಬ್ಬಂದಿ ಅದನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿದು ಬಂದಿದೆ. ಈ ನಕಲಿ ದೃಢಪತ್ರ 2018  ಜನವರಿ ತಿಂಗಳಲ್ಲಿ ನೀಡಲಾಗಿತ್ತು. ಆ ಸಮಯದಲ್ಲಿ […]

ಹಿರಿಯ ನಾಗರಿಕರಿಗೆ ವಿಶೇಷ ನ್ಯಾಯಲಯವನ್ನು ಸ್ಥಾಪನೆ ಮಾಡಬೇಕು : ಐವನ್

Monday, October 1st, 2018
Senior citizen

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಮಂಗಳೂರಿನ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಆಚರಿಸಲಾಯಿತು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ವಿಧಾನಪರಿಷತ್ ಮುಖ್ಯಸಚೇತಕ ಐವನ್ ಡಿಸೋಜಾ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಿರಿಯ ನಾಗರಿಕರಿಗೆ ವಿಶೇಷ ನ್ಯಾಯಲಯವನ್ನು ಸ್ಥಾಪನೆ ಮಾಡಬೇಕು. ಪ್ರತಿ ತಾಲೂಕಿನಲ್ಲೂ ರಿಕ್ರೇಷನ್ ಕ್ಲಬ್ ಸ್ಥಾಪನೆ ಮಾಡಬೇಕು. ಈ ಮೂಲಕ ಹಿರಿಯ ನಾಗರಿಕರಿಗೆ […]

ಜಪ್ಪು ಮಹಾಕಾಳಿ ಪಡ್ಪು ರೈಲ್ವೆ ಕೆಳ ಸೇತುವೆ ತಕ್ಷಣ ನಿರ್ಮಿಸುವಂತೆ ತುರವೇ ಯೋಗಿಶ್ ಶೆಟ್ಟಿ

Saturday, September 29th, 2018
protest

ಮಂಗಳೂರು: ಜಪ್ಪು ಮಹಾಕಾಳಿ ಪಡ್ಪು ರೈಲ್ವೆ ಕೆಳ ಸೇತುವೆ ತಕ್ಷಣ ನಿರ್ಮಿಸುವಂತೆ ತುಳುನಾಡ ರಕ್ಷಣ ವೇದಿಕೆ ಯೋಗಿಶ್ ಶೆಟ್ಟಿ. ಜಪ್ಪು ಒತಾ ಯ ಮಂಗಳೂರು ಸ್ಮಾರ್ಟ್ ಸಿಟಿ ಆಗುವ ಕನಸು ಹೊತು ಕೊಂಡಿದೆ. ಆz ರೆ ಮಂಗಳೂರಿನ ದಯ ಭಾಗದಲ್ಲಿರುವ ಜಪ್ಪು ಮಹಾಕಾಳಿ ಪಡ್ಪು ಪ್ರದೇ ಸ್ವಾತಂತ್ರ್ಯ ಬಂದು ವರ್ಷಗಳಾದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಒಳ ಚರಂಡಿ ವ್ಯವಸ್ಥೆ ಇಲ್ಲಿ ವಾಸಿ ವರಿಗೆ ಮರೀಚಿಯಾಗಿದೆ. ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ ಮಹಾಕಾಳಿ ಪಡ್ಪು ಪ್ರದೇಶಲ್ಲಿರುವ ರೈಲ್ವೇಗೇಟ್, ತೊಕ್ಕೊಟ್ಟು, ದೇರಳಕ […]

ಸೂರಲ್ಪಾಡಿಯಲ್ಲಿ ಹಿಂದೂ ಮುಖಂಡನ ಮೇಲೆ ತಲವಾರು ದಾಳಿ, ಗಂಭೀರ ಸ್ಥಿತಿ

Monday, September 24th, 2018
Harish-Shetty

ಮಂಗಳೂರು :  ಹಿಂದೂ ಮುಖಂಡರೊಬ್ಬರಿಗೆ ತಲವಾರು ದಾಳಿ ನಡೆಸಿದ ಘಟನೆ ಸೋಮವಾರ  ರಾತ್ರಿ 8 ಗಂಟೆಯ ಸುಮಾರಿಗೆ ಮಂಗಳೂರು ಹೊರವಲಯದ ಸೂರಲ್ಪಾಡಿಯಲ್ಲಿ ನಡೆದಿದೆ. ಮೂಡಬಿದ್ರೆಯಲ್ಲಿ ಬೆಳಿಗ್ಗೆ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಮೇಲೆ ತಲವಾರು ಬೀಸಿದ ಘಟನೆ  ಬೆನ್ನಲ್ಲೇ ಇದೀಗ ಮತ್ತೆ ಸೂರಲ್ಪಾಡಿಯಲ್ಲಿ ಭಯದ ವಾತಾವರಣ ಮರುಕಳಿಸಿದೆ. ಸೂರಲ್ಪಾಡಿ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳ ತಂಡ ಕೈಕಂಬದ ವಿಶ್ವಹಿಂದೂ ಪರಿಷತ್ ವಲಯಾಧ್ಯಕ್ಷ ಹರೀಶ್ ಶೆಟ್ಟಿ ಪೊಳಲಿ ದಾಳಿಗೆ ದಾಳಿ ನಡೆಸಿ ಪರಾರಿಯಾಗಿದೆ. ಸದ್ಯ ಗಂಭೀರ ಸ್ಥಿತಿಯಲ್ಲಿ ಅವರನ್ನ ನಗರದ ಖಾಸಗಿ […]

ಜಿಮ್ ಟ್ರೈನರ್ ಮೇಲೆ ಮಾರಣಾಂತಿಕ ಹಲ್ಲೆ: ನಟ ದುನಿಯಾ ವಿಜಯ್ ಬಂಧನ

Monday, September 24th, 2018
duniya-vijay

ಬೆಂಗಳೂರು: ನಟ ದುನಿಯಾ ವಿಜಯ್ ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿ ಬಂಧನಕ್ಕೆ ಒಳಗಾಗಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಜಿಮ್ ಟ್ರೈನರ್ ಮಾರುತಿಗೌಡ ಎಂಬವರನ್ನು ಅಪಹರಿಸಿರುವ ನಟ ದುನಿಯಾ ವಿಜಯ್ ಹಾಗೂ ಅವರ ತಂಡ, ಮಾರುತಿಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಪಾನಿಪುರಿ ಕಿಟ್ಟಿ ನೀಡಿದ ದೂರಿನಡಿಯಲ್ಲಿ ಪೊಲೀಸರು ದುನಿಯಾ ವಿಜಯ್ ಅವರನ್ನು ಬಂಧಿಸಿದ್ದಾರೆ. ದುನಿಯಾ ವಿಜಯ್‌ ಹಾಗೂ ಅವರ ತಂಡದವರು ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಿಸ್ಟರ್ ಬೆಂಗಳೂರು ಸ್ಪರ್ಧೆ ನೋಡಲು ಬಂದಿದ್ದ ನನ್ನ ಅಣ್ಣನ […]

ಮಿರ್ಯಾಲಗೂಡದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್: ಬರೋಬ್ಬರಿ 1 ಕೋಟಿ ಆಫರ್​ ನೀಡಲಾಗಿತ್ತು!

Tuesday, September 18th, 2018
pranay

ನಲ್ಗೊಂಡ: ಕಳೆದ ಮೂರು ದಿನಗಳ ಹಿಂದೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿರುವ ವ್ಯಕ್ತಿ ಐಎಸ್ಐ ಉಗ್ರ ಸಂಘಟನೆ ಜತೆ ಸಂಪರ್ಕದಲ್ಲಿದ್ದು, ಆತನಿಗೆ ಬರೋಬ್ಬರಿ 1 ಕೋಟಿ ಹಣ ನೀಡಲು ಆಫರ್ ನೀಡಲಾಗಿತ್ತು ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಆರೋಪಿಯನ್ನ ಇಂದು ಬಿಹಾರ ಪೊಲೀಸರು ಬಂಧಿಸಿದ್ದು, ಆತನ ವಿಚಾರಣೆ ನಡೆಸಿದಾಗ ಕೆಲವೊಂದು ಮಹತ್ವದ ಮಾಹಿತಿ ಹೊರಬಿದ್ದಿವೆ. 23 ವರ್ಷದ ಇಂಜಿನಿಯರ್ ಆಗಿದ್ದ ವ್ಯಕ್ತಿಯೇ ಈ ಕೃತ್ಯವೆಸಗಿದ್ದ. ಈ […]

ನರೇಂದ್ರ ಮೋದಿಯವರಿಗೆ ಇಂದು 68ನೇ ಹುಟ್ಟು ಹಬ್ಬದ ಸಂಭ್ರಮ

Monday, September 17th, 2018
narendra-modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 68ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ ಅವರಿಗೆ ದೇಶದೆಲ್ಲೆಡೆಯಿಂದ ಶುಭಾಶಯಗಳ ಸುರಿಮಳೆಯಾಗುತ್ತಿದೆ. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ರಾಜಕೀಯ ಮುಖಂಡರು, ಗಣ್ಯರು ಸೋಶಿಯಲ್ ಮೀಡಿಯಾಗಳ ಮೂಲಕ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ತಾವು ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ಇಲ್ಲಿ ಶಾಲಾ ಮಕ್ಕಳೊಂದಿಗೆ ಒಂದು ದಿನವನ್ನು ಪ್ರಧಾನಿ ಕಳೆಯಲಿದ್ದಾರೆ. ಕೆಲ ಅಧಿಕೃತ ಮಾಹಿತಿಗಳ ಪ್ರಕಾರ […]

ತಂದೆಯೇ ನನ್ನ ಗಂಡನನ್ನು ಕೊಲೆ ಮಾಡಿದ್ದೂ: ಮಗಳ ಆರೋಪ

Saturday, September 15th, 2018
murder

ಹೈದರಾಬಾದ್: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ವೊಂದು ಸಿಕ್ಕಿದೆ. ನನ್ನ ಗಂಡನನ್ನು ಕೊಲೆ ಮಾಡಿದ್ದು ಯಾರು ಅಲ್ಲ ನಮ್ಮ ತಂದೆಯೇ ಎಂದು ಮಗಳೊಬ್ಬಳು ಆರೋಪಿಸಿದ್ದಾರೆ. ಮನೆಯವರ ವಿರುದ್ಧದ ನಡವೆಯೂ ಅಮೃತ ವರ್ಷಗಳ ಹಿಂದೆ ಪ್ರಣಯ್ನ ಜೊತೆ ಸಪ್ತಪದಿ ತುಳಿದಿದ್ದರು. ಪ್ರಣಯ್ ಜೊತೆ ಸುಖ ಸಂಸಾರ ನಡೆಸುತ್ತಿದ್ದ ಅಮೃತ ಐದು ತಿಂಗಳ ಗರ್ಭಿಣಿ ಸಹ ಆಗಿದ್ದರು. ‘ನಾನು ಮದುವೆ ಆಗಿರುವುದಾಗಲಿ ಮತ್ತು ಗರ್ಭಿಣಿಯಾಗಿದ್ದಾಗಲಿ ನಮ್ಮ ತಂದೆಗೆ ಇಷ್ಟವಿರಲಿಲ್ಲ. ನಾನು ಗರ್ಭಿಣಿ ಆಗಿರುವ ಸುದ್ದಿ […]

ಶರವು ಮಹಾಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ 5000ತೆಂಗಿನ ಕಾಯಿಯ ಪಲ್ಲಪೂಜೆ

Wednesday, September 12th, 2018
Sharavu

ಮಂಗಳೂರು  : ಶರವು ಶ್ರೀಮಹಾಗಣಪತಿ ದೇವಸ್ಥಾನ ದಲ್ಲಿ ಗಣೇಶ ಚತುರ್ಥಿ ಸೆಪ್ಟೆಂಬರ್ 13 ಗುರುವಾರ ಚೌತಿ ಮಹಾ ಗಣಪತಿ ಹೋಮ, 5000 ತೆಂಗಿನ ಕಾಯಿಯ ಪಲ್ಲ ಪೂಜೆ, ಮಹಾಪೂಜೆ ಮತ್ತು ರಥೋತ್ಸವ ಜರಗಲಿರುವುದು.  ಗುರುವಾರ ಬೆಳಗ್ಗಿನಿಂದ ರಾತ್ರಿಯ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮ ತಾ. 13-09-18: ಗುರುವಾರ ಸೂರ್ಯೋದಯಕ್ಕೆ ಊಷಕಾಲ ಪೂಜೆ ಬೆಳಿಗ್ಗೆ ಘಂಟೆ 7:30 ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಕಳ್ಪೋಕ್ತ ಪೂಜೆ ಬೆಳಿಗ್ಗೆ ಘಂಟೆ 9:30 ಕ್ಕೆ ಆಗ್ನಿ ಜನನ, ಚೌತಿ ಮಹಾಗಣಪತಿ ಹೋಮದ ಆರಂಭ ಬೆಳಿಗ್ಗೆ ಘಂಟೆ 11:30 ಕ್ಕೆ ಮಹಾಗಣಪತಿ ಹೋಮದ […]

ಸಾರಿಗೆ ಸಂಚಾರ ಸ್ಥಗಿತ, ಶಾಲಾ-ಕಾಲೇಜು ಬಂದ್

Monday, September 10th, 2018
bhandh

ಬೆಂಗಳೂರು : ಪೆಟ್ರೋಲ್-ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಸೋಮವಾರ ಕರೆ ನೀಡಿರುವ ಬಂದ್ ನಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಗಿದೆ. ಕೆಲ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟು ಕೂಡ ಮುಚ್ಚಿವೆ. ಬಂದ್ ನಿಂದ ರಾಜ್ಯದಲ್ಲಿ ಸರ್ಕಾರಿ ಬಸ್ ಸೇವೆ, ಆ್ಯಪ್ ಆಧಾರಿತ ಟ್ಯಾಕ್ಸಿ , ಏರ್ ಪೋರ್ಟ್ ಟ್ಯಾಕ್ಸಿ, ಆಟೋ ಸೇವೆ ಸೇರಿದಂತೆ ಕೆಲವು ಸೇವೆಗಳಲ್ಲಿ ವ್ಯತ್ಯಯವಾಗಿದೆ. ಜನರಿಗೆ ಅಗತ್ಯ ಸೇವೆಗಳಾದ […]