ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಿಎಂ ಕುಮಾರಸ್ವಾಮಿ ತುಲಾಭಾರ ಸೇವೆ..!
Tuesday, August 14th, 2018ಮಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ಸೇವೆ ನಡೆಸಿದರು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಪ್ರಧಾನಿ ದೇವೇಗೌಡ, ತಾಯಿ ಚೆನ್ನಮ್ಮ, ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ಆಗಮಿಸಿದ ಸಿಎಂ ದೇವರ ದರ್ಶನಗೈದು ತುಲಾಭಾರ ಸೇವೆ ನಡೆಸಿದರು. ಒಣದ್ರಾಕ್ಷಿಯಲ್ಲಿ ಒಮ್ಮೆ ತುಲಾಭಾರ ಸೇವೆ ನಡೆಸಿದರೆ ಮತ್ತೊಮ್ಮೆ ಅಕ್ಕಿ ಬೆಲ್ಲ ತೆಂಗಿನಕಾಯಿಯಿಂದ ತುಲಾಭಾರ ಸೇವೆ ನಡೆಸಿದರು.