Blog Archive

ಪಂಜಿಮೊಗರು ಜೋಡಿ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಡಿವೈಎಫ್‌ಐ ಆಗ್ರಹ

Tuesday, September 20th, 2011
DYFI-protest

ಮಂಗಳೂರು : ಡಿವೈಎಫ್‌ಐ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಪಂಜಿಮೊಗರು ತಾಯಿ- ಮಗು ಜೋಡಿ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸ ಬೇಕು ಎಂದು ಪ್ರತಿಭಟನಾ ಸಭೆ . ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್‌ ಕಾಟಿಪಳ್ಳ ಪಂಜಿಮೊಗರಿನ ಘಟನೆ ಸಂಭವಿಸಿ 3 ತಿಂಗಳಾಗುತ್ತಾ ಬಂದರೂ ಇದನ್ನು ಬೇಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ತನಿಖೆಯ ನೆಪದಲ್ಲಿ ಅಮಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ. ರಝಿಯಾ ಮತ್ತು ಆಕೆಯ ಪುತ್ರಿ ಫಾತಿಮಾ ಜುವಾ […]

4 ದಿನದ ಹಸುಳೆಯನ್ನು 2000 ರೂ.ಗಳಿಗೆ ಮಾರಿದ ತಂದೆ

Monday, August 29th, 2011
Baby/4 ದಿನಗಳ ಹಸುಳೆ

ಮಂಗಳೂರು : ಹಾಸನ ಕಲಂದರ್‌ ಯಾನೆ ರವಿ ಎಂಬಾತ 4 ದಿನಗಳ ಹಸುಳೆಯನ್ನು ಹಣದ ಆಸೆಗಾಗಿ ಬೋಳಾರದ ಅನ್ವರ್‌ ಎಂಬವನಿಗೆ ಮಾರಾಟ ಮಾಡಿದ್ದಾನೆ. ಅನ್ವರ್ ಎಂಬಾತ 2000 ರೂ.ಗಳಿಗೆ ಮಗುವನ್ನು ಖರೀದಿಸಿದ್ದ ಎಂದು ವಿಚಾರಣೆಯ ವೇಳೆ ಹೇಳಿದ್ದಾನೆ. ಮೋರ್ಗನ್ಸ್‌ ಗೇಟ್‌ನಲ್ಲಿ ಮಗು ಮಾರಾಟ ಯತ್ನ ಪ್ರಕರಣದಲ್ಲಿ ಶನಿವಾರ ರಾತ್ರಿ ಬಂಧಿತನಾಗಿರುವ ಅನ್ವರ್‌ ನನ್ನು ರವಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆತನಿಗೆ ಸೆ. 8 ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರ್ಥಿಕ ಸಂಕಷ್ಟದ ಕಾರಣ ಕಲಂದರ್‌ ಯಾನೆ […]

ಬೈಕ್‌ನಲ್ಲಿ ಬಂದು ಐರೋಡಿ ಜುವೆಲ್ಲರ್ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು

Saturday, August 20th, 2011
Airody Jewllers/ ಐರೋಡಿ ಜುವೆಲ್ಲರ್

ಉಡುಪಿ: ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಗರದ ಮಸೀದಿ ರಸ್ತೆಯಲ್ಲಿರುವ ಐರೋಡಿ ಜುವೆಲ್ಲರ್ ಮೇಲೆ ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಬೈಕ್‌ನಲ್ಲಿ ಬಂದ ಯುವಕರು ಗುರುತು ಸಿಗದಂತೆ ಮುಖಕ್ಕೆ ಬಟ್ಟೆ ಧರಿಸಿದ್ದರು. ಒಬ್ಬ ಬೈಕ್‌ನಲ್ಲಿದ್ದರೆ ಇನ್ನೊಬ್ಬ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ ತಡೆಯಲು ಯತ್ನಿಸಿದ ಕಾವಲುಗಾರ ವಿಠಲ ಎಂಬವರಿಗೂ ಗುಂಡು ಹಾರಿಸಿದ ಎನ್ನಲಾಗಿದೆ. ಘಟನೆಯಲ್ಲಿ ಒಳಗಿನ ಸಿಬಂದಿಗಳಿಗಾಗಲೀ, ಕಾವಲುಗಾರನಿಗಾಗಲೀ ಯಾವುದೇ ಅಪಾಯವಾಗಲಿಲ್ಲ. ಕಾವಲುಗಾರ ಬಗ್ಗಿದ ಕಾರಣ ಗುಂಡಿನೇಟಿನಿಂದ ಪಾರಾದ ಎನ್ನಲಾಗಿದೆ. ಪಿಸ್ತೂಲಿನಿಂದ ಹಾರಿಸಿದ ಗುಂಡಿನ ಏಟು […]