ಮಗು ಮಾರಾಟ ಜಾಲ ಪತ್ತೆ: ಆರೋಪಿಗಳ ಬಂಧನ

Thursday, August 4th, 2016
child-trafficking

ಮಂಗಳೂರು: ಮಗು ಮಾರಾಟ ಮಾಡಲು ಯತ್ನಿಸಿದ ಜಾಲವನ್ನು ಬೇಧಿಸಿರುವ ಉರ್ವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರದ ಚಿಲಿಂಬಿ ಕೆನರ ಬ್ಯಾಂಕ್ ಬಳಿ ಮಗು ಹಿಡಿದುಕೊಂಡು ನಿಂತಿದ್ದ ಜಲೀಲ್ (43), ಆತನ ಪತ್ನಿ ಮೈಮುನಾ ಹಾಗೂ ರೇಶ್ಮಾ (22) ಎಂಬ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಆರು ತಿಂಗಳ ಹಿಂದೆ ರೇಶ್ಮಾಳಿಗೆ ಅರಸೀಕೆರೆಯಲ್ಲಿ ಒಂದು ವರ್ಷ ಮೂರು ತಿಂಗಳ ಹೆಣ್ಣುಮಗುವೊಂದು ಸಿಕ್ಕಿದೆ. ಅದನ್ನು 90 ಸಾವಿರ ರೂ.ಗೆ ಮಾರಾಟ ಮಾಡಲು ಸಹಾಯ ಮಾಡಿದವರೇ ಆರೋಪಿಗಳಾದ ಜಲೀಲ್ ಹಾಗೂ ಆತನ ಪತ್ನಿ […]

ಬಂದ್ಯೋಡು ವಸತಿ ಗೃಹವೊಂದರ ಮೇಲೆ ದಾಳಿ, ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ವಶ

Wednesday, April 10th, 2013
drugs mafia

ಕಾಸರಗೋಡು : ಜಿಲ್ಲೆಯಲ್ಲಿ ಗಾಂಜಾ ಸಾಗಾಣಿಕೆಯ ವಿರುದ್ದ ಪೊಲೀಸ್ ಕಾರ್ಯಾಚರಣೆ ಮುಂದುವರಿದಿದ್ದು ಬಂದ್ಯೋಡು ಬಳಿಯ ವಸತಿ ಗೃಹವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಅಬ್ದುಲ್ ಅಜೀಝ್ ಎಂಬಾತನನ್ನು ಬಂಧಿಸಿದ್ದಾರೆ. ಬಳಿಕ ಆತನ ನೆರೆಮನೆಯ ರಿಕ್ಷಾ ಚಾಲಕ ಅಬ್ಬಾಸ್ (35) ಎಂಬಾತನ ಮನೆ ಮೇಲೆ  ದಾಳಿ ನಡೆಸಿದ ಪೊಲೀಸರು ಮನೆಯಲ್ಲಿ 3 ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಗಾಂಜಾವನ್ನು ಪತ್ತೆ ಹಚ್ಚಿ ಮನೆಯಲ್ಲಿದ್ದ ಆತನ ಪತ್ನಿ ಸೆಮೀರಾ ಯಾನೆ ಸೆಮೀಮಾ(26) ಎಂಬಾಕೆಯನ್ನು ಬಂಧಿಸಿದ್ದಾರೆ. ಬಳಿಕ ಬಂಧಿತರು ನೀಡಿದ ಮಾಹಿತಿ ಮೇರೆಗೆ […]

ಗಾಂಜಾ ಮಾರಾಟ ಪ್ರಯತ್ನ ಗಾಂಜಾ ಸಹಿತ ಆರೋಪಿಗಳ ಬಂಧನ

Friday, February 22nd, 2013
Manipal drug peddlers

ಮಣಿಪಾಲ : ಮಣಿಪಾಲ ಮಣ್ಣಪಳ್ಳ ಕೆರೆ ಬಳಿ ಗುರುವಾರ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂರು ಮಂದಿಯನ್ನು ಗಾಂಜಾ ಸಹಿತ  ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ದೇವರಹಳ್ಳಿ ನಿವಾಸಿ ಗೋವಿಂದ ಸ್ವಾಮಿ(37), ದಾವಣಗೆರೆ ಚೆನ್ನಗಿರಿ ತಾಲೂಕು ಬಿಆರ್ ಟಿ ಕಾಲನಿ ನಿವಾಸಿ ಅಣ್ಣಪ್ಪ(29), ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಣ್ಣೂರು ಗ್ರಾಮ ನಿವಾಸಿ ಧರ್ಮಪ್ಪ(50) ಎಂಬವರು ಆರೋಪಿಗಳಾಗಿದ್ದು, ಇವರನ್ನು  ಬಂಧಿಸಲಾಗಿದೆ. ಆರೋಪಿಗಳಿಂದ 70 ಸಾವಿರ ರೂ. ಮೌಲ್ಯದ 2,300 ಗ್ರಾಂ. ಗಾಂಜಾ, 2 […]

ನಕಲಿ ಪ್ರಮಾಣ ಪತ್ರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ, ಇಬ್ಬರು ಆರೋಪಿಗಳ ಬಂಧನ

Tuesday, January 8th, 2013
fake certificates racket

ಮಂಗಳೂರು : ನಕಲಿ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ನಗರ ದಕ್ಷಿಣ ಎಸಿಪಿ ಟಿ. ಆರ್‌. ಜಗನ್ನಾಥ್‌ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ನಕಲಿ ಅಂಕ ಪಟ್ಟಿ ಮತ್ತು ಪ್ರಮಾಣ ಪತ್ರಗಳೊಂದಿಗೆ ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಮೇಲೆ ಎಸಿಪಿ ಟಿ.ಆರ್‌. ಜಗನ್ನಾಥ್‌ ನೇತೃತ್ವದ ಪೊಲೀಸರು ರವಿವಾರ ಪಾಂಡೇಶ್ವರದ ಸುಭಾಸ್‌ನಗರ ಜಂಕ್ಷನ್‌ನಲ್ಲಿ ಕಾದು ನಿಂತು ಆರೋಪಿಯನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಒಟ್ಟು […]

ಬಜಪೆ ಮನೆ ದರೊಡೆ ಕೇವಲ ಐದೇ ದಿನಗಳಲ್ಲಿ ಮೂವರು ಆರೋಪಿಗಳ ಬಂಧನ, ಸೊತ್ತು ವಶ

Monday, April 2nd, 2012
Bajpe Theft Case

ಮಂಗಳೂರು: ಬಜಪೆ ಪೊಲೀಸರು ಕಳೆದ ಮಾ. 27 ರಂದು ಸರೋಜಾ ಸಾಲಿಯಾನ್‌ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಕಳವು ಮಾಡಿದ 10,00,000 ರೂ. ಮೌಲ್ಯದ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಕೇವಲ ಐದೇ ದಿನಗಳಲ್ಲಿ ಬೇಧಿಸಿರುವ ಪೊಲೀಸರು ಆರೋಪಿಗಳಾದ ಬಜಪೆ ಪಡು ಫೆರಾರ್‌ ಗ್ರಾಮದ ಚೇತನ್‌ (24), ಆತನ ಸಹಚರರಾದ ಪಶ್ಚಿಮ ಬಂಗಾಳದ ಕೃಷ್ಣ ಬಿಲಾಯಿ (23) ಮತ್ತು ಬಚ್ಚು ಮಂಡಲ್‌ (22) ಎಂಬವರನ್ನು ಬಧಿಸಿದ್ದಾರೆ. ಪಡುಫೆರಾರ್‌ ಗ್ರಾಮದ ಸುಂಕದಕಟ್ಟೆಯ […]

ಐದೇ ದಿನದಲ್ಲಿ ಕಬೀರ್ ಕೊಲೆ ಆರೋಪಿಗಳ ಬಂಧನ

Tuesday, March 1st, 2011
ಕಬೀರ್ ಕೊಲೆ ಆರೋಪಿಗಳ ಬಂಧನ

ಮಂಗಳೂರು : ಕಳೆದ ಶುಕ್ರವಾರ ಮಧ್ಯಾನ್ಹದ ನಮಾಜಿಗೆಂದು ಗುರುಪುರದ ಮಸೀದಿಯೊಂದಕ್ಕೆ ಹಿರೋ ಹೋಂಡ ಬೈಕಿನಲ್ಲಿ ತೆರಳುತಿದ್ದ ವೇಳೆ ಕಪ್ಪು ಸ್ಕಾರ್ಪಿಯೋ ವಾಹನದಲ್ಲಿ ಬಂದ ಅಪರಿಚಿತ ಹಂತಕರ ತಂಡ ಗುರುಪುರದ ಬಂಡಸಾಲೆ ಬಳಿ ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿ, ಕೆಳಗೆ ಬಿದ್ದ ಕಬೀರನನ್ನು ಕೊಚ್ಚಿ ಕೊಲೆಗೈದಿತ್ತು. ಘಟನೆಯ ಐದು ದಿನಗಳ ಬಳಿಕ ದ.ಕ.ಜಿಲ್ಲಾ ಪೊಲೀಸರ ವಿಶೇಷ ತಂಡವು ನಡೆಸಿದ ತ್ವರಿತ ಕಾರ್ಯಚರಣೆಯಲ್ಲಿ ಕಬೀರ್ ಕೊಲೆ ಪ್ರಕರಣದ 6 ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹಾವೇರಿ ನಿವಾಸಿ ರವಿ ಯಾನೆ ಟಿಕ್ಕಿ […]