ಅರ್ಚಕ ವಾಸುದೇವ ಅವರ ಮನೆಯಿಂದ ಚಿನ್ನಾಭರಣ-ನಗದು ದೋಚಿದ ನಾಲ್ವರು ಪ್ರಮುಖ ಆರೋಪಿಗಳ ಬಂಧನ

Wednesday, November 2nd, 2016
kateelu

ಮಂಗಳೂರು: ಕಟೀಲು ದೇವಳದ ಅರ್ಚಕ ವಾಸುದೇವ ಅವರ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ-ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಪ್ರಮುಖ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ಭಂಡಾರಿಬೆಟ್ಟು ಬೈಲು ಮನೆ ನಿವಾಸಿ ಭರತ್ ಶೆಟ್ಟಿ (30), ಮೆಲ್ಕಾರ್ ನಿವಾಸಿ ಮುಹಮ್ಮದ್ ಅಲಿ (35), ಹಳೆಯಂಗಡಿ ಪಾವಂಜೆ ನಿವಾಸಿ ಪುರುಷೋತ್ತಮ (44) ಮತ್ತು ಸೋಮೇಶ್ವರ ಸಂಕೊಲಿಗೆ ನಿವಾಸಿ ಹರೀಶ್ ಗಟ್ಟಿ (41) ಬಂಧಿತರು. ಬಂಧಿತರಿಂದ 450 ಗ್ರಾಂ ಚಿನ್ನಾಭರಣ, ರಿವಾಲ್ವರ್, ಸಜೀವ ಗುಂಡುಗಳು, […]

ಮಂಗಳೂರಿನಲ್ಲಿ ಗಾಂಜಾ ಸಾಗಣೆಯ ಜಾಲ ಪತ್ತೆ: ಆರೋಪಿ ಬಂಧನ

Friday, August 5th, 2016
Moidin-Navaz

ಮಂಗಳೂರು: ಮಂಗಳೂರಿನಲ್ಲಿ ಗಾಂಜಾ ಸಾಗಣೆಯ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, 10.50 ಲಕ್ಷ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರು ಈ ಕುರಿತು ಮಾಹಿತಿ ನೀಡಿದರು. ಗಾಂಜಾ ಸಾಗಣೆ ಮಾಡುತ್ತಿದ್ದ ಕಾಸರಗೋಡಿನ ಉಪ್ಪಳದ ನಿವಾಸಿ ಮೊಯಿದ್ದೀನ್ ನವಾಜ್ (29) ಬಂಧಿಸಲಾಗಿದ್ದು, ಆತನಿಂದ 10.50 ಲಕ್ಷ ಮೌಲ್ಯದ ಸುಮಾರು 51 ಕೆಜಿ ಗಾಂಜಾ ಮತ್ತು ಇನ್ನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ. ಆಂಧ್ರ ಪ್ರದೇಶದ ವಿಶಾಖ ಪಟ್ಟಣದಿಂದ ಮಂಗಳೂರು, […]

ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯ ವೆಬ್‌ಸೈಟ್‌‌ನಲ್ಲಿ ಮೋಸ್ಟ್ ವಾಂಟೆಡ್ ಆರೋಪಿಗಳ ಭಾವಚಿತ್ರ ಪ್ರಕಟ

Thursday, August 4th, 2016
mangalorecitypolice

ಮಂಗಳೂರು: ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯ ವೆಬ್‌ಸೈಟ್‌‌ನಲ್ಲಿ ರವಿ ಪೂಜಾರಿ, ಕಲಿ ಯೋಗೀಶ್, ಕೊಗರ ವಿಶ್ವನಾಥ ಶೆಟ್ಟಿ, ವಿಕ್ಕಿ ಶೆಟ್ಟಿ, ಆಸ್ಗರ್ ಆಲಿ, ರಶೀದ್ ಮಲಬಾರಿ ಸಹಿತ 153 ಮೋಸ್ಟ್ ವಾಂಟೆಡ್ ಆರೋಪಿಗಳ ಭಾವಚಿತ್ರವನ್ನು ಪ್ರಕಟಿಸಲಾಗಿದ್ದು, ಜನತೆ ಇವರ ಅಥವಾ ಇವರ ಸಹಚರರ ಮಾಹಿತಿ ನೀಡುವಂತೆ ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಹಿತಿ ನೀಡುವವರ ಹೆಸರು ಸಹಿತ ವಿವರವನ್ನು ಗೌಪ್ಯವಾಗಿಡಲಾಗುವುದು. ಸೂಕ್ತ ಬಹುಮಾನ ನೀಡಲಾಗುವುದು. ಹಾಗಾಗಿ ಮಾಹಿತಿ ನೀಡಿ ಸಹಕರಿಸುವಂತೆ ಕೋರಿದರು. […]

ಖಾಸಗಿ ಬಸ್-ಬೈಕ್ ಡಿಕ್ಕಿ: ಯುವಕ ಮೃತ್ಯು

Thursday, February 25th, 2016
sampath

ಕುಂಬಳೆ: ಖಾಸಗಿ ಬಸ್ ಮತ್ತು ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರರಾದ ಯುವಕ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಪೆರ್ಲ ಸಮೀಪದ ಶೇಣಿ ನಡುಬೈಲು ನಿವಾಸಿ ದಿ.ಅಮ್ಮು ರೈ ಮತ್ತು ಧೂಮಕ್ಕ ದಂಪತಿಯ ಪುತ್ರ ಸಂಪತ್ (28) ಸಾವನ್ನಪ್ಪಿದ ಯುವಕ. ಅಂಗಡಿಮೊಗರು ಬಳಿಯ ನಾಟೆಕಲ್ಲು ಕೋರೆ ಪರಿಸರದ ರಸ್ತೆಯಲ್ಲಿ ಗುರುವಾರ ಪೂರ್ವಾಹ್ನ ಈ ದುರ್ಘಟನೆ ಸಂಭವಿಸಿದೆ. ಸಂಪತ್ ಬೈಕ್‌ನಲ್ಲಿ ಸೀತಾಂಗೋಳಿ ಬರುತ್ತಿದ್ದರು. ಈ ವೇಳೆ ಕುಂಬಳೆಯಿಂದ ಪೆರ್ಲಕ್ಕೆ ಹೋಗುತ್ತಿದ್ದ ಮಹಾಲಕ್ಷ್ಮಿ ಖಾಸಗಿ ಬಸ್ ಮತ್ತು ಬೈಕ್ ಪರಸ್ಪರ […]