ಕಾಂಗ್ರೆಸ್ ಕಾರ್ಯಕರ್ತನ ನಿಗೂಢ ಸಾವು

Sunday, March 6th, 2016
Congress worker

ಕಾಸರಗೋಡು: ಕಾಂಗ್ರೆಸ್ ಕಾರ್ಯಕರ್ತನ ಮೃತದೇಹ ಮನೆಯೊಳಗೆ ಮೃತಪಟ್ಟಿ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿನಲ್ಲಿ ನಿಗೂಢತೆ ಉಂಟಾದ ಹಿನ್ನೆಲೆಯಲ್ಲಿ ಮೃತದೇಹವನ್ನು ಹೆಚ್ಚಿನ ಮರಣೋತ್ತರ ಪರೀಕ್ಷೆಗಾಗಿ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಉದುಮ ಮಾಂಗಾಡ್ ಮೇಲ್ಬಾರ ಕಾಲನಿ ನಿವಾಸಿ ಬಾಲಕೃಷ್ಣನ್ ಅವರ ಪುತ್ರ ಚಂದ್ರನ್(40) ಮೃತಪಟ್ಟವರು. ಚಂದ್ರನ್ ಶನಿವಾರ ರಾತ್ರಿ ತೃಕ್ಕನ್ನಾಡ್ ಕ್ಷೇತ್ರ ಆರಾಟು ಮಹೋತ್ಸವಕ್ಕೆ ತೆರಳಿದ್ದರು. ಮನೆಯ ಇತರರು ಬೇರೆಡೆಗೆ ಕಾರ್ಯಕ್ರಮ ನಿಮಿತ್ತ ತೆರಳಿದ್ದರು. ಆದಿತ್ಯವಾರ ಬೆಳಗ್ಗೆ ಅವರು ಮನೆಗೆ ಮರಳಿದಾಗ ಚಂದ್ರನ್ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಕಂಡು […]

ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ ನೀಲಯ ಬರ್ಬರ ಹತ್ಯೆ

Thursday, September 5th, 2013
murder-mangalore

ಉಲ್ಲಾಳ : ಅಪರಿಚಿತ ದುಷ್ಕರ್ಮಿಗಳು ಸೆಪ್ಟಂಬರ್‌ 4ರ ತಡರಾತ್ರಿ  10:30ರ ಸುಮಾರಿಗೆ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ, ಮಡ್ಯಾರ್-ನಡಾರು ನಿವಾಸಿ ನೀಲು ಯಾನೆ ನೀಲಯ ಎಂಬಾತನನ್ನು ಮಡ್ಯಾರು ದೇವಸ್ಥಾನದ ಸಮೀಪ  ಬರ್ಭರಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಸಮೀಪದ ಮಾಡೂರು ಜಂಕ್ಷನ್‍ನಲ್ಲಿ ಎಂದಿನಂತೆ ನಿನ್ನೆ ರಾತ್ರಿ 10 ಗಂಟೆಯವರೆಗೆ ತನ್ನ ಗೆಳೆಯರೊಂದಿಗೆ ನೀಲು ಯಾನೆ ನೀಲಯ ಇದ್ದ. ಬಳಿಕ ತನ್ನ ಆಲ್ಟೋ ಕಾರ್‍ನಲ್ಲಿ ಗೆಳೆಯ ಧೀರಜ್ ಎಂಬಾತನನ್ನು ಆತನ ಮನೆಗೆ ಬಿಟ್ಟುಬಂದಿದ್ದ. […]

ಎಸ್.ಡಿಪಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗುಂಪು-ಘರ್ಷಣೆ, ಪೊಲೀಸರಿಂದ ಲಘು ಲಾಠಿ ಪ್ರಹಾರ

Monday, May 27th, 2013
Kaikamba

ಬಂಟ್ವಾಳ : ಭಾನುವಾರ ಸಂಜೆ ಬಿ.ಸಿ ರೋಡ್ ಸಮೀಪದ ಕೈಕಂಬದಲ್ಲಿ ಎಸ್.ಡಿಪಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗುಂಪು ಘರ್ಷಣೆ ಏರ್ಪಟ್ಟ ಪರಿಣಾಮ ಕೈಕಂಬದಲ್ಲಿ ಕೆಲ ಸಮಯ ಉದ್ವಿಗ್ನ ವಾತವರಣ ಕಂಡುಬಂದಿತು. ಕಲ್ಲಡ್ಕ ಪರಿಸರದಿಂದ ಬಂದ ಎಸ್ ಡಿಪಿಐ ಪಕ್ಷದ ತಂಡವೊಂದು ಭಾನುವಾರ ಸಂಜೆ ಸುಮಾರು 4 ಗಂಟೆಯ ಸುಮಾರಿಗೆ ಕೈಕಂಬದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರೊಡನೆ ಮಾತಿಗಿಳಿದಿದ್ದು, ಕೆಲ ಅವಧಿಯಲ್ಲಿಯೇ ಎರಡು ತಂಡಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟು ನಂತರ ಪರಸ್ಪರರ ನಡುವೆ ಹೊಡೆದಾಟ ಪ್ರಾರಂಭವಾಗಿದೆ. ಇನ್ನೊಂದೆಡೆ ಎರಡೂ […]

ಸಿದ್ದರಾಮಯ್ಯ ರಾಜ್ಯದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ

Tuesday, April 9th, 2013
Siddaramaiah CM candidate

ಉಡುಪಿ : ಬಿಜೆಪಿಯ ಭದ್ರ ಕೋಟೆಯಾಗಿದ್ದ ಉಡುಪಿಯಲ್ಲಿ ಸ್ಥಳೀಯ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲೆ ರಾಜ್ಯದಲ್ಲೂ ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸ ಹೊಂದಿರುವ ಉಡುಪಿ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿರುವ ಸಿದ್ದರಾಮಯ್ಯ ನವರೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಘೋಷಿಸಿದ್ದಾರೆ. ಸೋಮವಾರ ಉಡುಪಿ ತಾಲುಕಿನ ಪರ್ಕಳದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿದ್ದಾರಮಯ್ಯನವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯನವರೆ ಮುಖ್ಯಮಂತ್ರಿಯಾಗಬೇಕೆಂದು ಪ್ರಾರ್ಥಿಸಿ ದೇವಾಲಯದಲ್ಲಿ  ವಿಶೇಷ ಪೂಜೆ ಸಲ್ಲಿಸಿದರು.