ಮತದಾನ ಯಂತ್ರವನ್ನು ಯಾರಿಂದಲೂ ದುರುಪಯೋಗಪಡಿಸಲು ಸಾಧ್ಯವಿಲ್ಲ : ಕೃಷ್ಣಮೂರ್ತಿ

Saturday, March 9th, 2019
Vivekananda college

ಪುತ್ತೂರು  : ವಿವೇಕಾನಂದ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸ್ವೀಪ್‌ನ ಸಹಯೋಗದಲ್ಲಿ ಮತದಾನ ಮತ್ತು ವಿದ್ಯುನ್ಮಾನ ಮತಯಂತ್ರದ ಕುರಿತು ಮಾಹಿತಿ ಕಾರ್ಯಕ್ರಮವು ಕಾನೂನು ಕಾಲೇಜಿನ ಸಭಾಂಗಣದಲ್ಲಿ ಮಾರ್ಚ್ 8 ರಂದು ಜರಗಿತು. ಕಾರ್ಯಕ್ರಮದಲ್ಲಿ ಪುತ್ತೂರಿನ ಸಹಾಯಕ ಕಮಿಷನರ್ ಆಗಿರುವ ಶ್ರೀ ಎಚ್.ಕೆ ಕೃಷ್ಣಮೂರ್ತಿ ಮುಖ್ಯ ಅತಿಥಿಯಾಗಿ ಮಾತನಾಡಿ ಚುನಾವಣೆಯಲ್ಲಿ ಮತದಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ನಾವು ಮತದಾನ ಮಾಡುವುದರ ಜತೆಗೆ ಇತರರಲ್ಲೂ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಬೇಕು ಎಂದರು. ನಂತರ ಅವರು […]

ಆನೇಕಲ್​ ತಾಲೂಕು ಕಚೇರಿ ನೌಕರ ಎಸಿಬಿ ಬಲೆಗೆ

Tuesday, December 11th, 2018
acb-bengaluru

ಬೆಂಗಳೂರು: ಲಂಚ ಪಡೆದ ಆರೋಪದ ಮೇಲೆ ಆನೇಕಲ್ ತಾಲೂಕು ಕಚೇರಿ ನೌಕರ ಎಸಿಬಿ ಬಲೆಗೆ ಬಿದ್ದಿದ್ದಾನೆ. ಆನೇಕಲ್ ತಾಲೂಕು ಕಚೇರಿಯ ಎಸ್ಡಿಎ ಆಗಿರುವ ಕೃಷ್ಣಮೂರ್ತಿ ಎಸಿಬಿ ಬಲೆಗೆ ಬಿದ್ದಿರುವ ನೌಕರ. ಜೊತೆಗೆ ಕೃಷ್ಣಮೂರ್ತಿಗೆ ಸಹಕಾರ ನೀಡಿದ ಆನಂದ್ ಕೂಡಾ ಇದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಕೋಲಾರ ಜಿಲ್ಲೆಯ ಧನಮಟ್ನಹಳ್ಳಿಯ ನಿವಾಸಿವೋರ್ವರು ಖಾತೆ ಮಾಡಿಕೊಡಲು ಕೃಷ್ಣಮೂರ್ತಿಯನ್ನು ಎಡತಾಕಿದ್ದರು. ಈ ವೇಳೆ ಖಾತೆಗಾಗಿ ಒಂದು ಲಕ್ಷ ರೂಪಾಯಿಯನ್ನು ಕೃಷ್ಣಮೂರ್ತಿ, ಮಧ್ಯವರ್ತಿ ಆನಂದ್ರಿಂದ ಬೇಡಿಕೆ ಇಡಿಸಿದ್ದರು ಎನ್ನಲಾಗ್ತಿದೆ. ಬಳಿಕ ಖಾತೆದಾರ ತಾಲೂಕು ಕಚೇರಿಯಲ್ಲಿ […]

ಆಂಧ್ರದ ಡಿಸಿಎಂ ಹೇಳಿಕೆಗೆ ಬಿಎಸ್‌‌ವೈ ಗರಂ

Monday, April 9th, 2018
yedeyorappa

ಬೆಂಗಳೂರು: ತೆಲುಗು ಭಾಷಿಕರು ಬಿಜೆಪಿಗೆ ಮತ ನೀಡಬೇಡಿ ಎಂದು ಆಂಧ್ರದ ಡಿಸಿಎಂ ಕೃಷ್ಣಮೂರ್ತಿ ಅವರ ಹೇಳಿಕೆಗೆ ಗರಂ ಆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಅವರು ಯಾರು? ಬಿಜೆಪಿಗೆ ಮತ ನೀಡಬೇಡೊ ಅನ್ನುವುದಕ್ಕೆ. ಯಾರೋ ಬಂದು ನಾನ್‌ಸೆನ್ಸ್ ರೀತಿ ಮಾತನಾಡುತ್ತಾರೆ. ಜನ ಅದಕ್ಕೆ ಸಪೋರ್ಟ್ ಮಾಡುವುದಿಲ್ಲ ಎಂದು ಬಿಎಸ್‌ವೈ ಹೇಳಿದ್ದಾರೆ. ನಗರದ ಶಿವಾಜಿನಗರ ಕ್ಷೇತ್ರದ ಇಂದು ಆಯೋಜಿಸಿದ್ದ ಆಟೋ ಚಾಲಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಬಿಜೆಪಿ […]

ಸೂಪರಿಡೆಂಟ್ ಜೈಲಿನ ಕೈದಿಗಳಿಂದ ಸ್ಚಚ್ಛತಾ ಕಾರ್ಯ

Friday, August 5th, 2016
Swach-Bharat-Mission

ಮಂಗಳೂರು: ವಿಚಾರಣಾಧೀನ ಕೈದಿಗಳನ್ನು ಜೈಲು ಸೂಪರಿಡೆಂಟ್ ಜೈಲಿನಿಂದ ಹೊರ ಕರೆದುಕೊಂಡು ಹೋಗಿ ಕ್ವಾಟ್ರಸ್‌‌ ಶುಚಿತ್ವ ಕೆಲಸ ಮಾಡಿಸಿದ ಘಟನೆ ಮಂಗಳೂರಿನ ಸಬ್‌‌‌ಜೈಲಿನಲ್ಲಿ ನಡೆದಿದೆ. ಗುರುವಾರ ಮಧ್ಯಾಹ್ನದ ವೇಳೆ ಸುಮಾರು 10 ಮಂದಿ ವಿಚಾರಣಾಧೀನ ಕೈದಿಗಳನ್ನು ಜೈಲಿನ ಹೊರಭಾಗದಲ್ಲಿರುವ ಸೂಪರಿಂಡೆಂಟ್ ಕ್ವಾಟ್ರಸ್‌‌ ಸುತ್ತಮುತ್ತವಿರುವ ಕಸಕಡ್ಡಿ, ಹುಲ್ಲನ್ನು ಶುಚಿತ್ವಗೊಳಿಸುವ ನೆಪದಲ್ಲಿ ಹೊರಗೆ ಕರೆದುಕೊಂಡು ಬಂದು ಸ್ವಚ್ಛತೆ ಕೆಲಸ ಮಾಡಿಸಿದ್ದಾರೆ. ಈ ಬಗ್ಗೆ ವಿಚಾರ ತಿಳಿದು ಮಾಧ್ಯಮದವರು ಸ್ಥಳಕ್ಕೆ ಹೋದಾಗ ಶೂಟಿಂಗ್ ಮಾಡಲು ಅವಕಾಶ ನೀಡಲಿಲ್ಲ ಎನ್ನಲಾಗಿದೆ. ಕಾನೂನು ಪ್ರಕಾರ ಕೋರ್ಟ್‌ […]

ಸಾಮಾನ್ಯ ಕಾರ್ಯಕರ್ತರ ಸಂಘಟನೆಯಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ :ಎನ್. ಯೋಗೀಶ್ ಭಟ್

Saturday, November 3rd, 2012
BJP

ಮಂಗಳೂರು: ಇಂದು ನಗರದ ಸಂಘನಿಕೆತನದಲ್ಲಿ ನಡೆದ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಾಮಾನ್ಯ ಸಭೆಯನ್ನುದ್ದೇಶಿಸಿ ರಾಜ್ಯ ವಿದಾನ ಸಭೆಯ ಉಪ ಸಭಾಪತಿ ಎನ್. ಯೋಗೀಶ್ ಭಟ್ ರವರು ಮಾತನಾಡಿದರು. ಬಿ.ಜೆ.ಪಿ ತನ್ನ ಸಾಮಾನ್ಯ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಮತ್ತೆ ಅಧಿಕಾರಕ್ಕೆ ಬರುವುದು ಎಂದರು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ವಿವಿದ ಹಗರಣಗಳಲ್ಲಿ ಮುಳುಗಿದ್ದು ನಮ್ಮ ದೇಶವನ್ನು ಜಗತ್ತಿನ ಮುಂದೆ ತಲೆ ತಗ್ಗಿಸುವಂತೆ ಮಾಡಿದೆ ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಜನರು ಖಂಡಿತ ಕಾಂಗ್ರೆಸ್ಸನ್ನು ತಿರಸ್ಕರಿಸುತ್ತಾರೆ, ರಾಜ್ಯ ಸರಕಾರವು ಕಳೆದ 50 […]