3.48 ಕೋಟಿ ಮೌಲ್ಯದ ತಿಮಿಂಗಲ ವಾಂತಿಯನ್ನು ಸಾಗಿಸುತ್ತಿದ್ದ ಆರು ಮಂದಿಯ ಬಂಧನ

Tuesday, February 8th, 2022
Ambergris

ಮಂಗಳೂರು:  ನಿಷೇಧಿತ ವಸ್ತುವಾದ ಅಂಬರ್‌ಗ್ರೀಸ್ (ತಿಮಿಂಗಲ ವಾಂತಿ)ಯನ್ನು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಬಾಳಿಪುಣಿ ಗ್ರಾಮದ ನವೋದಯ ಶಾಲೆಯ ಬಳಿ ಅಕ್ರಮವಾಗಿ  ಸಾಗಾಟ ಮಾಡುತ್ತಿದ್ದ  ಬೆಂಗಳೂರು ಮತ್ತು ಉಡುಪಿ ಮೂಲದ ಆರು ಮಂದಿಯನ್ನು ಬಂಧಿಸಲಾಗಿದೆ. ಅವರಿಂದ 3.48 ಕೋಟಿ ಮೌಲ್ಯದ 3.480 ಕೆ.ಜಿ ಅಂಬರ್ ಗ್ರೀಸ್ ವಶ ಪಡಿಸಿಕೊಳ್ಳಲಾಗಿದೆ. ಕುಂದಾಪುರ ತಾಲೂಕು ಜಡ್ಕಲ್ ಗ್ರಾಮದ ಪ್ರಶಾಂತ್ (24), ಬೆಂಗಳೂರಿನ ವೀರಭದ್ರ ನಗರದ ಬಿಎಸ್‌ಕೆ ಮೂರನೇ ಹಂತದ ಸತ್ಯರಾಜ್ (32), ಮಂಗಳೂರು ತಾಲೂಕು ತೆಂಕ ಎಡಪದವು […]

ಮೊಬೈಲ್ ಅತಿಯಾಗಿ ಬಳಸಬಾರದು ಎಂದಿದ್ದಕ್ಕೆ ಮಗಳು ನಾಪತ್ತೆ

Tuesday, June 8th, 2021
Deekshitha

ಮಂಗಳೂರು  : ಮೊಬೈಲ್ ಬಳಸಬಾರದು ಎಂದು ಪೋಷಕರು ಬುದ್ದಿ ಮಾತು ಹೇಳಿದ್ದಕ್ಕೆ ಆಕ್ರೋಶಗೊಂಡ ಯುವತಿಯೊಬ್ಬಳು ಮನೆ ಬಿಟ್ಟು ಪರಾರಿಯಾದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಪುಣಿ ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಕುಕ್ಕದಕಟ್ಟೆ ಸೈಟ್ ಮನೆಯ ನಿವಾಸಿಯಾದ ದೀಕ್ಷಿತಾ ಜೂನ್ 6 ರಂದು ಕಾಣೆಯಾಗಿದ ಯುವತಿ. ಕಾಣೆಯಾದ ಯುವತಿಗೆ 18 ವರ್ಷ ವಯಸ್ಸಾಗಿದೆ. ಆಕೆಯ ತಾಯಿ ಅತಿಯಾಗಿ ಫೋನಿನಲ್ಲಿ ಮಾತನಾಡುತ್ತಿದ್ದನ್ನು ಪ್ರಶ್ನಿಸಿದಕ್ಕೆ ಆಕ್ರೋಶಗೊಂಡು ಮನೆಯಲ್ಲಿ ಯಾವುದೇ ವಿಚಾರ ಹೇಳದೆ ನಾಪತ್ತೆಯಾಗಿದ್ದಾಳೆ. ಬಾಲಕಿಯ ತಾಯಿ ಜೂನ್ […]

ಗುಳಿಗ ಸಾನಿಧ್ಯದಲ್ಲಿ ಚಪ್ಪಲಿ ಹಾಕಿದ ದುಷ್ಕರ್ಮಿಗಳು

Tuesday, April 6th, 2021
guligajja

ಮಂಗಳೂರು : ಗುಳಿಗ ಸಾನಿಧ್ಯದ ಕಟ್ಟೆಯ ಬಳಿ ಚಪ್ಪಲಿ ಹಾಕಿ ದುಷ್ಕರ್ಮಿಗಳು ವಿಕೃತಿ ಮೆರೆದಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂಬ್ಲಪದವಿನಲ್ಲಿ ನಡೆದಿದೆ. ಮುಚ್ಚಿರಕಲ್ಲು ಗುಳಿಗ ಸಾನಿಧ್ಯದಲ್ಲಿ ಸೋಮವಾರ ಈ ತಡರಾತ್ರಿ ಪ್ರಕರಣ ಬೆಳಕಿಗೆ ಬಂದಿದೆ. ಮುಚ್ಚಿರ ಕಲ್ಲು ಗುಳಿಗ ಸಾನಿಧ್ಯವು ಅತೀ ಕಾರಣೀಕ ಕ್ಷೇತ್ರವಾಗಿದ್ದು, ಎಲ್ಲ ಧರ್ಮೀಯರು ಭಕ್ತಿಯಿಂದ ನಮಿಸಿಕೊಂಡು ಬಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಇಲ್ಲಿ ಅನ್ಯಕೋಮಿನ ಯುವಕನೋರ್ವ ದುರಹಂಕಾರದಿಂದ ವಿಕೃತಿ ಮೆರೆದಿದ್ದು ಕೆಲವೇ ದಿವಸಗಳಲ್ಲಿ ಆತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಘಟನೆ […]

ಕೈರಂಗಳದಲ್ಲಿ ಯುವತಿ ಮೇಲೆ ಅತ್ಯಾಚಾರ, ಆರೋಪಿಯ ಬಂಧನ

Tuesday, February 2nd, 2021
Rape

ಕೊಣಾಜೆ :  ಹದಿನೆಂಟರ ಹರೆಯದ ಯುವತಿಯೊಬ್ಬಳ ಮೇಲೆ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕೈರಂಗಳದಲ್ಲಿ ನಡೆದಿದೆ. ಕೈರಂಗಳ‌ ಗ್ರಾಮದಲ್ಲಿ ಹದಿನೆಂಟರ ಹರೆಯದ ಮೂಗಿ ಯುವತಿಯೊಬ್ಬಳ ಮೇಲೆ ಯಾರು ಇಲ್ಲದೆ ಇರುವುದನ್ನು ಗಮನಿಸಿ ದುಷ್ಕರ್ಮಿಯೊಬ್ಬ ಅತ್ಯಾಚಾರ ನಡೆದಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಮನೆ ಮಂದಿ ರವಿವಾರ ದೇವಸ್ಥಾನಕ್ಕೆ ತೆರಳಿದ್ದರು ಎನ್ನಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಯುವಕನೊಬ್ಬ ಮನೆಗೆ ನುಗ್ಗಿ ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಯುವತಿಯನ್ನು ಆಸ್ಪತ್ರಗೆ ದಾಖಲಿಸಲಾಗಿದ್ದು, ಆರೋಪಿಯನ್ನು […]

ಅವಿವಾಹಿತ ಮಹಿಳೆಯ ಸಂಶಯಾಸ್ಪದ ಸಾವು, ಅತ್ಯಾಚಾರವೆಸಗಿ ಕೊಲೆ ಶಂಕೆ

Saturday, September 26th, 2020
Kusuma

ಕೊಣಾಜೆ :  ಅವಿವಾಹಿತ ಮಹಿಳೆಯೊಬ್ಬರು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಹೂ ಹಾಕುವ ಕಲ್ಲು ಸಮೀಪದ ಬೆಳ್ಳೇರಿಯ ದಲ್ಲಿ ಶನಿವಾರ ವರದಿಯಾಗಿದೆ. ಇಲ್ಲಿನ ನಿವಾಸಿ ಕುಸುಮ (53) ಮೃತರು ಎಂದು ಗುರುತಿಸಲಾಗಿದ್ದು ಮಹಿಳೆಯನ್ನು ಅತ್ಯಾಚಾರವೆಸಗಿ ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಮಹಿಳೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಸ್ಥಳೀಯರ ಪ್ರಕಾರ ಮಹಿಳೆ ಹೆಚ್ಚಾಗಿ ಯಾರ ಜೊತೆಗೂ ಬೆರೆಯುತ್ತಿರಲಿಲ್ಲ. ಮನೆಯ ಸಿಟ್ ಔಟ್ ನಲ್ಲಿ ಮೊಬೈಲ್ ಮತ್ತು ಕನ್ನಡಕ ಇತ್ತೆನ್ನಲಾಗಿದ್ದು, ಕಿಟಕಿ ಬಾಗಿಲು ತೆರೆದಿದ್ದು ಅಡುಗೆ ಕೋಣೆ ಬಳಿಯ ಬಾಗಿಲು […]

ಕೊಣಾಜೆ: ಬೈಕ್ ಅಪಘಾತ, ಸವಾರ ಸ್ಥಳದಲ್ಲೇ ಮೃತ

Tuesday, October 29th, 2019
Santhosh

ಕೊಣಾಜೆ:  ಮಂಗಳೂರು ವಿಶ್ವವಿದ್ಯಾಲಯದ ಸಮೀಪ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಮೃತಪಟ್ಟ ಯುವಕನನ್ನು ಪಜೀರು ಗ್ರಾಮದ ಬಾಕಿಮಾರು ನಿವಾಸಿ ನಾರಾಯಣ ಪೂಜಾರಿ ಎಂಬವರ ಪುತ್ರ ಸಂತೋಷ್ (26) ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಇಲೆಕ್ಟ್ರಿಕಲ್ ಕೆಲಸದಲ್ಲಿದ್ದ ಈತ ಸೋಮವಾರ ರಾತ್ರಿ ಹೋಗುತ್ತಿದ್ದಾಗ ಬಸ್ ನ್ನು ಮುಂದಿಕ್ಕುವಾಗ ಬೈಕು ಸ್ಕಿಡ್ ಅದ  ಪರಿಣಾಮ ಬಸ್ ಢಿಕ್ಕಿ ಹೊಡೆದು  ಸಂತೋಷ್ ಸ್ಥಳದಲ್ಲೇ  ಮೃತಪಟ್ಟಪಟ್ಟಿರುವುದಾಗಿ ಹೇಳಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಳ್ಳಾಲ : ಫೈನಾನ್ಸ್ ಮಾಲಕ ಪ್ರಭಾಕರ ಆಚಾರ್ಯ ಮೃತದೇಹ ಪತ್ತೆ

Wednesday, August 28th, 2019
Prabhakar

ಉಳ್ಳಾಲ : ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಬೊಳಿಯಾರ್ ಪ್ರಭಾ ಜ್ಯುವೆಲ್ಲರ್ಸ್ ಹಾಗೂ ಪ್ರಭಾ ಫೈನಾನ್ಸ್ ಮಾಲಕರಾಗಿದ್ದ ಪ್ರಭಾಕರ ಆಚಾರ್ಯ ಅವರ ಮೃತದೇಹ ಸುರತ್ಕಲ್ ಸಮೀಪದ ಮುಕ್ಕ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. 57 ವರ್ಷ ಪ್ರಾಯದ ಪ್ರಭಾಕರ ಆಚಾರ್ಯ ಅವರು ಬೋಳಿಯಾರ್‌ ನಲ್ಲಿ ಪ್ರಭಾ ಜ್ಯುವೆಲ್ಲರ್ಸ್ ಹಾಗೂ ಪ್ರಭಾ ಫೈನಾನ್ಸ್‌ ಗಳನ್ನು ನಡೆಸುತ್ತಿದ್ದರು. ಪ್ರಭಾಕರ್ ಅವರು ಕಳೆದ ಹಲವಾರು ವರ್ಷಗಳಿಂದ ತನ್ನ ಜ್ಯುವೆಲ್ಲರಿಯಲ್ಲೇ ಫೈನಾನ್ಸ್‌ ನಡೆಸುತ್ತಿದ್ದರು. ಕಳೆದ ರವಿವಾರ ಮಧ್ಯಾಹ್ನ ಔಷಧ ತರಲೆಂದು ತನ್ನ ಪತ್ನಿಯಲ್ಲಿ ತಿಳಿಸಿ […]

ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Tuesday, November 21st, 2017
Ganja

ಮಂಗಳೂರು: ಮಂಜೇಶ್ವರ ಹಾಗೂ ಉಪ್ಪಳದಿಂದ ಗಾಂಜಾ ಸಾಗಿಸಿ ಕೊಣಾಜೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಉದ್ಯಾವರ ಮಾಡದ ಅಬ್ದುಲ್ ಖಾದರ್ ಹಾಗೂ ಅಬ್ದುಲ್ ರೆಹಮಾನ್ ಕಡಂಬಾರ್ ಬಂಧಿತರು. ಅವರಿಂದ 13 ಸಾವಿರ ರೂ. ಮೌಲ್ಯದ 650 ಗ್ರಾಂ ತೂಕದ 9 ಪ್ಯಾಕೆಟ್ ಗಾಂಜಾ, ಮೊಬೈಲ್ ಫೋನ್, ರಿಕ್ಷಾ ವಶಕ್ಕೆ ಪಡೆದುಕೊಳ್ಳಲಾಗಿದೆ. ಕೊಣಾಜೆ ಇನ್ಸ್‌ಪೆಕ್ಟರ್ ಅಶೋಕ್ ಪಿಎಸ್‌ಐ ರವಿ ಪವಾರ್, ಎಎಸ್ಐ ಸಂಜೀವ, ಪೇದೆಗಳಾದ ನಾಗರಾಜ್, ಅಶೋಕ್, ಪ್ರದೀಪ್ ಅವರನ್ನೊಳಗೊಂಡ […]

ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ವಿಸ್ತರಣೆ

Monday, November 14th, 2016
Section-144

ಮಂಗಳೂರು: ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿ ಠಾಣಾ ವಾಪ್ತಿಯಲ್ಲಿ ವಿಧಿಸಲಾಗಿದ್ದ ಸೆಕ್ಷನ್ 144 ನಿಷೇಧಾಜ್ಞೆಯನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಸ್ತರಿಸಿರಲಾಗಿದೆ. ಅಲ್ಲದೆ ಈ ಪ್ರಕರಣಗಳನ್ನು ಬೇಧಿಸಲು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ನವೆಂಬರ್ 13ರ ಮಧ್ಯಾಹ್ನ 2 ಗಂಟೆಯಿಂದ ನವೆಂಬರ್ 16ರ ರಾತ್ರಿ 10 ಗಂಟೆಯ ವರೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆ. 144 […]